ಕನ್ನಡಪ್ರಭ ವಾರ್ತೆ ಮಡಿಕೇರಿ
ಅಂತಿಮ ಪಂದ್ಯದಲ್ಲಿ ಭಗವತಿ-ಸಿ ತಂಡ ಕಾಮಾಕ್ಷಿ-ಎ ತಂಡವನ್ನು 23 ರನ್ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಮೊದಲು ಬ್ಯಾಟ್ ಮಾಡಿದ ಭಗವತಿ-ಸಿ ತಂಡ ನಿಗದಿತ 5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 63 ರನ್ಗಳನ್ನು ಪೇರಿಸಿತು. ತಂಡದ ಪರ ರೆಯಾಜ್ 18 ಎಸೆತಗಳಲ್ಲಿ 43 ರನ್ಗಳನ್ನು ಬಾರಿಸಿದರು. 64 ಗುರಿ ಬೆನ್ನಟ್ಟಿದ ಕಾಮಾಕ್ಷಿ-ಎ ತಂಡ 5 ಓವರ್ಗಳಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು 40 ರನ್ಗಳನ್ನಷ್ಟೆ ಗಳಿಸಿ ಸೋಲನುಭವಿಸಿತು.
ಈ ಮೂಲಕ ಭಗವತಿ-ಸಿ ತಂಡ ಚಾಂಪಿನ್ ಆಯಿತು. ಆಕರ್ಷಕ ಹನುಮ ಗದೆಯ ರೋಲಿಂಗ್ ಟ್ರೋಫಿ ಹಾಗೂ ವಿನ್ನರ್ಸ್ ಟ್ರೋಫಿ, ರೂ.60,000 ನಗದನ್ನು ತನ್ನದಾಗಿಸಿಕೊಂಡಿತು. ಕಾಮಾಕ್ಷಿ-ಎ ತಂಡ ಮೊದಲ ರನ್ನರ್ಸ್ ಟ್ರೋಫಿ ಹಾಗೂ ರೂ.30,000 ನಗದನ್ನು ಪಡೆದುಕೊಂಡಿತು. ಕಾಮಾಕ್ಷಿ-ಬಿ ತಂಡ 3ನೇ ಸ್ಥಾನದ ಟ್ರೋಫಿ ಪಡೆದುಕೊಂಡಿತು.ಮೊದಲ ಕ್ವಾಲಿಫೈಯರ್ನಲ್ಲಿ ಭಗವತಿ-ಸಿ ತಂಡ ಮೊದಲು ಬ್ಯಾಟ್ ಮಾಡಿ 5 ಓವರ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು 57 ರನ್ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಕಾಮಾಕ್ಷಿ-ಎ ತಂಡ 2 ವಿಕೆಟ್ಗಳನ್ನು ಕಳೆದುಕೊಂಡು 28 ರನ್ಗಳನ್ನಷ್ಟೆ ಪೇರಿಸಿ ಸೋಲನುಭವಿಸಿತು. ಭಗವತಿ-ಸಿ ತಂಡ ಈ ಮೂಲಕ ನೇರ ಫೈನಲ್ ಪ್ರವೇಶಿಸಿತು.
2ನೇ ಕ್ವಾಲಿಫೈಯರ್ನಲ್ಲಿ ಕಾಮಾಕ್ಷಿ-ಬಿ ತಂಡ ಮೊದಲು ಬ್ಯಾಟ್ ಮಾಡಿ 26 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ಇದನ್ನು ಬೆನಟ್ಟಿದ ಕಾಮಾಕ್ಷಿ-ಎ ತಂಡ 4.4 ಓವರ್ಗಳಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡು ಗುರಿ ಸಾಧನೆ ಗೈದು ಫೈನಲ್ ಪ್ರವೇಶಿಸಿತು. ಕಾಮಾಕ್ಷಿ-ಬಿ ತಂಡ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಟ್ರೋಫಿ ವಿತರಣೆ ಸಂದರ್ಭ ಕೋದಂಡರಾಮ ದೇವಾಲಯದ ರಾಮ ಸೇವಾ ಸಮಿತಿಯ ಅಧ್ಯಕ್ಷ ಗೋಪಿನಾಥ್, ದೇವಾಲಯ ಟ್ರಸ್ಟಿಗಳಾದ ಮಂಜುನಾಥ್, ಪರಮೇಶ್, ಜ್ಯೋತಿ ಯುವಕ ಸಂಘದ ಅಧ್ಯಕ್ಷ ವಿಶ್ವನಾಥ್, ಸದಸ್ಯರಾದ ವಿಜಯ್, ಮಹೇಶ್, ಕಿಂಬರ್ಲಿ ಕೂರ್ಗ್ನ ಮದನ್ ಸೇರಿದಂತೆ ಇತರರು ಹಾಜರಿದ್ದರು.