ಫೆ.27ಕ್ಕೆ ಹೆಬ್ಬಾಳಿನಲ್ಲಿ ದಾವಣಗೆರೆ 10ನೇ ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Jan 31, 2024, 02:22 AM IST
ಕ್ಯಾಪ್ಷನಃ30ಕೆಡಿವಿಜಿ31ಃದಾವಣಗೆರೆ ತಾ. ಹೆಬ್ಬಾಳು ಗ್ರಾಮದಲ್ಲಿ ಕಸಾಪ ತಾಲೂಕು ಸಮ್ಮೇಳನ ಆಯೋಜನೆ ಕುರಿತು ಶ್ರೀ ಹೆಬ್ಬಾಳು ಮಹಂತ ರುದ್ರೇಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ಜಿಲ್ಲಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಮಹಂತ ರುದ್ರೇಶ್ವರ ಸ್ವಾಮೀಜಿ ಹೆಬ್ಬಾಳಿನಲ್ಲಿ ಸಮ್ಮೇಳನ ಆಯೋಜಿಸುತ್ತೆನೆಂದು ಮಾತುಕೊಟ್ಟಿದ್ದೆ. ಅದರಂತೆ ಈ ವರ್ಷ ಹೆಬ್ಬಾಳಿನಲ್ಲಿ ದಾವಣಗೆರೆ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ಅನುವು ಮಾಡಿಕೊಡುವಂತೆ ಶ್ರೀಗಳಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪೂಜ್ಯರು ಸಂತೋಷದಿಂದ ಸಮ್ಮತಿಸಿ ಆಶೀರ್ವದಿಸಿ, ಸಮ್ಮೇಳನದ ಯಶಸ್ಸಿಗೆ ಎಲ್ಲಾ ರೀತಿಯ ಸಹಕಾರ, ಸಹಾಯ ನೀಡಲಾಗುವುದೆಂದು ಭರವಸೆ ನೀಡಿ ಆಶೀರ್ವದಿಸಿದರು.

ದಾವಣಗೆರೆ: ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲು ತಾಲೂಕಿನ ಹೆಬ್ಬಾಳಿನ ಶ್ರೀಮಠದಲ್ಲಿ ಶ್ರೀ ಮಹಂತರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.

ಈ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಜಿಲ್ಲಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಮಹಂತ ರುದ್ರೇಶ್ವರ ಸ್ವಾಮೀಜಿ ಹೆಬ್ಬಾಳಿನಲ್ಲಿ ಸಮ್ಮೇಳನ ಆಯೋಜಿಸುತ್ತೆನೆಂದು ಮಾತುಕೊಟ್ಟಿದ್ದೆ. ಅದರಂತೆ ಈ ವರ್ಷ ಹೆಬ್ಬಾಳಿನಲ್ಲಿ ದಾವಣಗೆರೆ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ಅನುವು ಮಾಡಿಕೊಡುವಂತೆ ಶ್ರೀಗಳಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪೂಜ್ಯರು ಸಂತೋಷದಿಂದ ಸಮ್ಮತಿಸಿ ಆಶೀರ್ವದಿಸಿ, ಸಮ್ಮೇಳನದ ಯಶಸ್ಸಿಗೆ ಎಲ್ಲಾ ರೀತಿಯ ಸಹಕಾರ, ಸಹಾಯ ನೀಡಲಾಗುವುದೆಂದು ಭರವಸೆ ನೀಡಿ ಆಶೀರ್ವದಿಸಿದರು.

ಸಭೆಯಲ್ಲಿ ಪೂಜ್ಯರೊಂದಿಗೆ ಚರ್ಚಿಸಿ ಇದೇ ಫೆ.27ರಂದು ನಡೆಸಲು ದಿನಾಂಕ ನಿಗದಿ ಮಾಡಿ ಮಠದ ವಿಶಾಲವಾದ ಕಲ್ಯಾಣ ಮಂಟಪದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಸಿ.ಜಿ.ಜಗದೀಶ್ ಕೂಲಂಬಿ ಸಮ್ಮೇಳನದ ಮಹತ್ವ ಹಾಗೂ ಒಂದು ದಿನದ ಸಮ್ಮೇಳನದ ಕಾರ್ಯಕ್ರಮಗಳ ರೂಪರೇಷೆಗಳನ್ನು, ಸಿದ್ಧತೆ ಕುರಿತು ಮತ್ತು ಖರ್ಚಿನ ಮಾಹಿತಿ ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಕಸಾಪ ದಾವಣಗೆರೆ ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ತಾಲ್ಲೂಕು ಕಾರ್ಯದರ್ಶಿ ದಾಗಿನಕಟ್ಟೆ ಪರಮೇಶಪ್ಪ, ಕೋಶಾಧ್ಯಕ್ಷ ಪಾಲಾಕ್ಷಪ್ಪ ಗೋಪಾನಾಳು, ನಿರ್ದೇಶಕರಾದ ಎಂ.ಷಡಕ್ಷರಪ್ಪ ಬೇತೂರು, ಸೌಭಾಗ್ಯಮ್ಮ, ಪಂಕಜಾ ಬಕ್ಕೇಶ್, ಶಿವಕುಮಾರ, ಹಾಗೂ ಹೆಬ್ಬಾಳ್ ಗ್ರಾಪಂ ಸದಸ್ಯರಾದ ಮಹಾರುದ್ರಯ್ಯ, ಬಸಮ್ಮ ಬಸವರಾಜಪ್ಪ, ಮಹಾಂತೇಶ, ನರೇಂದ್ರಬಾಬು, ರುದ್ರೇಶ್, ಮಹೇಂದ್ರ, ಟಿ.ಸಿ.ರುದ್ರೇಶ್, ಶಿವಕುಮಾರ, ಶಿಕ್ಷಕ ತಿಪ್ಪೇಸ್ವಾಮಿ, ಎಚ್.ಆರ್.ಮಂಜುನಾಥ, ಪಿಡಿಒ ಹಿಮಂತ್ ರಾಜ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ