ಕನ್ನಡಪ್ರಭ ವಾರ್ತೆ ಕೆಜಿಎಫ್ನಗರಸಭೆಯಲ್ಲಿ ವಾರ್ಷಿಕ 16 ಕೋಟಿ ರುಪಾಯಿಗಳ ವ್ಯವಹಾರಕ್ಕೆ 49 ಬ್ಯಾಂಕ್ ಖಾತೆಗಳು ನಗರಸಭೆಗೆ ಅವಶ್ಯವಿದೆಯೇ ಎಂದು ಲೆಕ್ಕಾಧಿಕಾರಿ ಪದ್ಮ ಅವರನ್ನು ಜಿಲ್ಲಾಧಿಕಾರಿ ಡಾ.ಎಂ.ಅರ್.ರವಿ ತರಾಟೆಗೆ ತೆಗೆದುಕೊಂಡರು.
27 ಕೋಟಿ ಸಣ್ಣ ಮೊತ್ತವಲ್ಲ:ಬಿಇಎಂಎಲ್ ಕಂಪನಿಗಳಿಂದ 27 ಕೋಟಿ ಬಾಕಿ ತೆರಿಗೆ ಹಣ ಬರಬೇಕಿದೆ ಎಂಬ ಲೆಕ್ಕ ನೀಡುತ್ತಿರುವ ಸಿಬ್ಬಂದಿ ಬಾಕಿ ಹಣ ವಸೂಲಿಗೆ ಏನು ಕ್ರಮಕೈಗೊಂಡಿದ್ದಿರಿ? 27 ಕೋಟಿ ಎಂಬುದು ಸಣ್ಣ ಮೋತ್ತವೇ? ಇದನ್ನು ನನ್ನ ಗಮನಕ್ಕೆ ಏಕೆ ತಂದಿಲ್ಲ? ಬಾಕಿ ಉಳಿಸಿಕೊಂಡಿರುವ ಬಿಜಿಎಂಎಲ್ ಹಾಗೂ ಬಿಇಎಂಎಲ್ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಸೂಚನೆ ನೀಡಿದರು.ಬೀದಿ ನಾಯಿಗಳ ಹಾವಳಿಗೆ ಕಡಿವಾಣ:ಬೀದಿ ನಾಯಿಗಳ ಆಶ್ರಯ ತಾಣಗಳನ್ನು ಪ್ರಾರಂಭಿಸಬೇಕು ಮತ್ತು ಸಂತಾನಾಹರಣ ಚಿಕಿತ್ಸೆ ನೀಡುವಂತಹ ಕೆಲಸ ಆಗಬೇಕು, ಶಾಲೆ ಮಾರುಕಟ್ಟೆ ಆಸ್ಪತ್ರೆಗಳ ಬಳಿ ಮಕ್ಕಳು ವೃದ್ದರ ಮೇಲೆ ದಾಳಿ ಮಾಡುವ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬೀದಿ ನಾಯಿಗಳಿಗೆ ಶೆಲ್ಟರ್ಗಳನ್ನು ನಿರ್ಮಿಸಿ ಬೀದಿ ನಾಯಿಗಳ ಆಶ್ರಯ ನೀಡಿ ಎಬಿಸಿ ಎಆರ್ವಿ ಸಂತನಾಹರಣ ಚಿಕಿತ್ಸೆಯನ್ನು ನೀಡಬೇಕು ಎಂದು ಆದೇಶ ನೀಡಿರುವುದರಿಂದ ಎಬಿಸಿ ಎಆರ್ವಿ ಚಿಕಿತ್ಸೆಯನ್ನು ನೀಡುವ ಮೂಲಕ ಬೀದಿ ನಾಯಿಗಳ ಹಾವಳಿಗಳ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.ಕೆಜಿಎಫ್ನಲ್ಲಿ ಕೋಲಾರಮ್ಮ ಸ್ವಚ್ಛತಾ ಪಡೆ:ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆಯುವ ಉತ್ತಮವಾಗಿ ಕೆಲಸ ಮಾಡಿರುವುದರಿಂದ ಮತ್ತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರುವುದರಿಂದ ಕೋಲಾರಮ್ಮ ಸ್ವಚ್ಛತೆ ಕಾರ್ಯಪಡೆಗೆ ಜಿಲ್ಲಾ ಉಸ್ತುವರಿ ಸಚಿವರು ಕೋಲಾರ ನಗರವು ಸೇರಿದಂತೆ ಜಿಲ್ಲೆಯ ಎಲ್ಲಾ ನಗರಗಳಿಗೂ ಚಾಲನೆ ನೀಡಲಿದ್ದಾರೆ. ಕೋಲಾರಮ್ಮ ಸ್ವಚ್ಛತಾ ವಾಹಿನಿಯು ಜಿಲ್ಲೆಯ ಎಲ್ಲಾ ನಗರಗಳಲ್ಲೂ ಸಂಚರಿಸಲಿದ್ದು ರಸ್ತೆಯಲ್ಲಿ ಕಸ ಹಾಕುವವರ ವಿರುದ್ಧ ದಂಡ ವಿದಿಸುತ್ತಾರೆ ದಂಡ ನೀಡದಿದ್ದಾರೆ ಅವರ ವಿರುದ್ಧ ಎಫ್ಐಆರ್ ಸಹ ದಾಖಲು ಮಾಡಲಾಗುವುದು ಎಂದು ಹೇಳಿದರು.
ಕೋಲಾರದ ಯೋಜನಾ ನಿದೇರ್ಶಕರಾದ ಅಂಬಿಕಾ, ಇಇ ಶ್ರೀನಿವಾಸ್, ಪೌರಾಯುಕ್ತ ಅಂಜನೇಯಲು ಎಇಇ ಗಂಗಾಧರ್ ಉಪಸ್ಥಿತರಿದ್ದರು.೨೦ಕೆಜಿಎಫ್೨ನಗರಸಭೆಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ಹಾಗೂ ಅಧಿಕಾರಿಗಳ ಸಭೆ ನಡೆಸಿದ ಕೋಲಾರ ಜಿಲ್ಲಾಧಿಕಾರಿ ನಗರಸಭೆ ಆಡಳಿತಾಧಿಕಾರಿ ಡಾ:ಎಂ.ಆರ್.ರವಿ