ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಚಿಕ್ಕತರಹಳ್ಳಿಯಲ್ಲಿ ಆನೆಗೊಳ ಗ್ರಾಪಂ ವ್ಯಾಪ್ತಿಯ ರೈತ ಸಂಘ ಆಯೋಜಿಸಿದ್ದ ಕೃಷಿ ಅಧ್ಯಯನ ಶಿಬಿರದಲ್ಲಿ ಮಾತನಾಡಿ, ಕೃಷಿ ಬಿಕ್ಕಟ್ಟು ಭೀತಿಯಂತೆ ಹೆಚ್ಚು ಕಾಡುತ್ತಿದೆ. ರೈತರಲ್ಲಿ ರಾಜಕೀಯ ಪ್ರಜ್ಞೆ ಬೇಕಿದೆ ಎಂದರು.
ಕೆ.ಎಸ್.ಪುಟ್ಟಣ್ಣಯ್ಯ, ಬಾಬುಗೌಡ ಪಾಟೀಲ್ರಂತಹ ರೈತ ನಾಯಕರು ರಾಜಕೀಯಕ್ಕೆ ಮತ್ತಷ್ಟು ಮಂದಿ ಬರಬೇಕಿದೆ. ಜಾತಿ, ಧರ್ಮದ ತಳಹದಿಯಲ್ಲಿ ಸರ್ಕಾರಗಳು ಬೇರೂರಿ ಸಾಮಾಜಿಕ, ಆರ್ಥಿಕ ಅಸ್ಥಿರತೆ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಕೃಷಿ ಲಾಭದಾಯಕವಾಗದೆ ನಿತ್ಯ ಸಾವಿರಾರು ಮಂದಿ ನಗರಕ್ಕೆ ವಲಸೆ ಹೋಗುವಂತಾಗಿದೆ. ಕೃಷಿ ಹೊಸ ಉದಾರೀಕರಣ ನೀತಿಯಿಂದ ಕೃಷಿಗೆ ಬೆಲೆ ಸಿಗದೆ, ಕೂಲಿ, ಗೊಬ್ಬರ, ಕ್ರಿಮಿನಾಶಕ ಬೆಲೆ ದುಪ್ಪಟ್ಟು ಆಗಿ ರೈತ ನಷ್ಟದ ಸಂಕಷ್ಟದಲ್ಲಿದ್ದಾನೆ ಎಂದರು.ಸುಸ್ಥಿರ ಕೃಷಿ ಪದ್ಧತಿ, ಮೌಲ್ಯವರ್ಧನೆ ಕೃಷಿಯಿಂದ ಕೃಷಿ ಬಿಕ್ಕಟ್ಟು ಪರಿಹಾರ ಕಾಣಬಹುದು. ಭೂಮಿ ಒಡೆತನದಷ್ಟೆ ಆಹಾರ ಉತ್ಪಾದನೆ ಹೆಚ್ಚಳ ಸಮಸ್ಯೆ ಇದೆ. ಮುಕ್ತ ಮಾರಾಟಕ್ಕೆ ಸಂಘಟನೆ ಶಕ್ತಿ, ಸಹಕಾರಿ ತತ್ವದಲ್ಲಿ ಕೃಷಿ ಹುಟ್ಟುವಳಿ ಮಾರಾಟ ಮಾಡುವ ಪದ್ಧತಿ ಬೇಕಿದೆ ಎಂದರು.
ರೈತ ಸಂಘದ ರಾಜ್ಯ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ನಂದಿನಿ ಜಯರಾಂ ಮಾತನಾಡಿ, ರೈತ ಸಾಮೂಹಿಕ ಆತ್ಮಹತ್ಯೆ ತುಳಿಯುವ ಹಾದಿಯಲ್ಲಿದ್ದಾನೆ. ಹಿಂದೆ ನೂರಾರು ಮಂದಿಗೆ ಊಟ ಹಾಕುತ್ತಿದ್ದ ರೈತ ಊಟಕ್ಕೆ ಯೋಚಿಸುವಂತಾಗಿದೆ. ಬಿಲ್ ಗ್ರೇಟ್ಸ್ನಂತಹ ಬಂಡವಾಳ ಶಾಹಿಗಳು ಸಾವಿರಾರು ಎಕರೆ ಕೃಷಿ ಭೂಮಿ ಖರೀದಿಸುವಂತಾಗಿ ರೈತ ಸಂಕಷ್ಟದಲ್ಲಿದ್ದಾನೆ. ರೈತ ಪ್ರಜ್ಞಾವಂತನಾಗಿ, ಕೃಷಿ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.
ಇಂತಹ ಅನಿಷ್ಟತೆ ವಿರುದ್ಧ 1981ರಲ್ಲಿ ರೈತರ ಧ್ವನಿಯಾಗಿ ಚಳವಳಿಗಾಗಿ ಪ್ರೊ.ನಂಜುಂಡಸ್ವಾಮಿ ರೈತ ಸಂಘ ಹುಟ್ಟು ಹಾಕಿದರು. ಗುಂಡುರಾವ್ ಸರ್ಕಾರದ ಅವಧಿಯಲ್ಲಿ ಸುಮಾರು 110 ರೈತರು ಗೋಲಿಬಾರ್ ಆದರು. ಚಳವಳಿ ತೀವ್ರತೆಯಿಂದ ಸರ್ಕಾರ ಪತನವಾಗಿ ಜನತಾ ಪರಿವಾರ ಸರ್ಕಾರ ಉತ್ತಮ ಉದ್ದೇಶದಿಂದ ಬಂದಿತು. ನಂತರ ಎಲ್ಲ ಸರ್ಕಾರದ ಹಣೆ ಬರಹ ಒಂದೇ ಆಯಿತು ಎಂದರು.
ಈ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗಾನಹಳ್ಳಿ ಪುಟ್ಟೇಗೌಡ, ಮರುವನಹಳ್ಳಿ ಶಂಕರ್, ಕೆಂಪೇಗೌಡ, ಸಿ.ಎನ್. ಮಂಜಪ್ಪ, ಮಂಜೇಗೌಡ, ಶಿವಲಿಂಗೇಗೌಡ, ಸಮರ್ಥ, ಸತೀಶ್, ಸುರೇಶ್, ರಾಮು, ಗೀತಾ ಇದ್ದರು.