ವೃದ್ಧಾಪ್ಯವೇತನ ಬಿಡುಗಡೆಗೆ ಆಗ್ರಹ

KannadaprabhaNewsNetwork |  
Published : May 23, 2026, 02:15 AM IST
(22ಎನ್.ಆರ್.ಡಿ1 ಸರ್ಕಾರ ಸಂಧ್ಯಾ ಸುರಕ್ಷಾ ವೃದ್ಯಾಪ ವೇತನ ಬಿಡುಗಡೆ ಮಾಡಬೇಕೆಂದು ತಹಸೀಲ್ದಾರರಗೆ ಮನವಿ ನೀಡಿದರು.)   | Kannada Prabha

ಸಾರಾಂಶ

ಪ್ರತಿ ತಿಂಗಳ ಸರ್ಕಾರ ಮಾಸಿಕವಾಗಿ ಬರುತ್ತಿದ್ದ ಸಂಧ್ಯಾಸುರಕ್ಷಾ ವೃದ್ಧಾಪ್ಯ ವೇತನ ಹಾಗೂ ಅಂಗವಿಕಲರ ವೇತನವನ್ನು ಕಳೆದ ಎರಡು ಮೂರು ತಿಂಗಳುಗಳಿಂದ ಬಿಡುಗಡೆ ಮಾಡಿಲ್ಲ.

ನರಗುಂದ: ಕಳೆದ ಎರಡು ತಿಂಗಳಗಳಿಂದ ಬಡವರ ಆಧಾರಕ್ಕೆ ಆಧಾರವಾಗಿರುವ ಸಂಧ್ಯಾಸುರಕ್ಷಾ, ವೃದ್ಧಾಪ್ಯ ವೇತನವನ್ನು ಸರ್ಕಾರ ಬಿಡುಗಡೆ ಮಾಡದಿರುವುದರಿಂದ ತೀವ್ರ ತೊಂದರೆಯಾಗಿದೆ. ಸರ್ಕಾರ ಈ ವೇತನವನ್ನು ಬಿಡುಗಡೆ ಮಾಡಬೇಕೆಂದು ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ವೀರನಗೌಡ್ರ ಮೂತನೂರ ಆಗ್ರಹಿಸಿದರು.

ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿ, ಪ್ರತಿ ತಿಂಗಳ ಸರ್ಕಾರ ಮಾಸಿಕವಾಗಿ ಬರುವ ಸಂಧ್ಯಾಸುರಕ್ಷಾ ವೃದ್ಧಾಪ್ಯ ವೇತನ ಹಾಗೂ ಅಂಗವಿಕಲರ ವೇತನವನ್ನು ಕಳೆದ ಎರಡು ಮೂರು ತಿಂಗಳುಗಳಿಂದ ಬಿಡುಗಡೆ ಮಾಡಿಲ್ಲ. ಇದರಿಂದ ಅಂಗವಿಕಲರಿಗೆ ಹಾಗೂ ವಯಸ್ಸಾದವರಿಗೆ ಆರ್ಥಿಕವಾಗಿ ತೊಂದರೆಯಾಗಿದೆ. ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವಲ್ಲಿ ತೊಂದರೆ ಆಗಿದೆ. ಆದ್ದರಿಂದ ದಯಮಾಡಿ ಸರ್ಕಾರದಿಂದ ಬರುವ ಮಾಸಿಕ ವೇತನವನ್ನು ಪ್ರತಿ ತಿಂಗಳು ಸರಿಯಾದ ರೀತಿಯಲ್ಲಿ ಅಂಗವಿಕಲರ ಹಾಗೂ ವೃದ್ಧಾಪ್ಯ ವೇತನ ಪಡೆಯುತ್ತಿರುವವರ ಖಾತೆಗಳಿಗೆ ಜಮಾ ಮಾಡಬೇಕೆಂದು ಒತ್ತಾಯಿಸಿದರು.

ತಹಸೀಲ್ದಾರ್ ಶ್ರೀಶೈಲ ತಳವಾರ ಮನವಿ ಸ್ವೀಕರಿಸಿದರು. ರುದ್ರಯ್ಯ ಮಠದ, ನಿಂಗಪ್ಪ ಆದಪ್ಪನವರ, ಚೆನ್ನಪ್ಪ ಶಾನವಾಡ, ಭೀಮಪ್ಪ ತಳವಾರ, ನಾಗಪ್ಪ ಬಾರಕೇರ, ಹನುಮಪ್ಪ ನಾಗನೂರ, ಶಾಂತವ್ವ ಹಿರೇಗೌಡ್ರ, ಕಲ್ಲವ್ವ ಬುಳ್ಳನ್ನವರ, ರುದ್ರಪ್ಪ ತಳವಾರ, ಮಲ್ಲವ್ವ ಮಠದ, ಫಕೀರಸಾಬ ನದಾಫ್, ಅಬ್ದುಲಸಾಬ ನದಾಫ್ ಸೇರಿದಂತೆ ಮುಂತಾದವರು ಇದ್ದರು.ಅಂಗನವಾಡಿ ಮಕ್ಕಳಿಗೆ ಬಟ್ಟೆ ದೇಣಿಗೆ

ನರಗುಂದ: ಅಂಗನವಾಡಿ ಕೇಂದ್ರಗಳ ಪ್ರಗತಿಗೆ ಸರ್ಕಾರದ ಜತೆ ದಾನಿಗಳ ಸಹಕಾರ ನೀಡಬೇಕು. ಇದರಿಂದ ಅಂಗನವಾಡಿಗಳ ಇನ್ನಷ್ಟು ಅಭಿವೃದ್ಧಿ ಸಾಧ್ಯ ಎಂದು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ವೆಂಕಪ್ಪ ಗಿರಿತಿಮ್ಮಣ್ಣವರ ತಿಳಿಸಿದರು.ಶುಕ್ರವಾರ ಪಟ್ಟಣದ 119ನೇ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಬಟ್ಟೆ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸಿ ಮಾತನಾಡಿ, ಪಟ್ಟಣದ ಶಿಕ್ಷಕಿ ಸುವರ್ಣ ನಾಗನೂರ ಅವರು ನಮ್ಮ ಅಂಗನವಾಡಿ ಕೇಂದ್ರದ 35 ಮಕ್ಕಳಿಗೆ ಬಟ್ಟೆ ದಾನ ಮಾಡುವ ಮೂಲಕ ಮಕ್ಕಳಲ್ಲಿ ಪ್ರೀತಿ ಕಾಣುತ್ತಿರುವುದು ಹೆಮ್ಮೆ ತಂದಿದೆ ಎಂದರು.ಇದೇ ಸಂದರ್ಭದಲ್ಲಿ ಮಕ್ಕಳಿಗೆ ಬಟ್ಟೆ ಕೊಡುಗೆ ನೀಡಿದ ದಂಪತಿಗಳಾದ ಬಸನಗೌಡ ಚನ್ನವೀರನಗೌಡ್ರ ಹಾಗೂ ಸುವರ್ಣ ನಾಗನೂರ ಅವರನ್ನು ಸನ್ಮಾನಿಸಲಾಯಿತು. ಶಕುಂತಲಾ ಗಣಿ, ಲಕ್ಷ್ಮೀ ಗಾಯಕವಾಡ, ಸುಜಾತಾ ನಾಗನೂರ, ಪದ್ಮಾ ಡಾವಣಗೇರಿ, ಸಾವಿತ್ರಿ ಭಜಂತ್ರಿ, ಪಾರ್ವತಿ ಮಾಳಣ್ಣವರ, ಗಿರಿಜಾ ಬೆಳವಟಿಗಿ, ನಾಗಮ್ಮ ಕಾಲವಾಡಮಠ, ಅಂಗನವಾಡಿ ಮಕ್ಕಳು ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತದಡಿ ಬಂದರು ಹೂಳೆತ್ತುವ ಕಾಮಗಾರಿ ಅಸಮರ್ಪಕ, ಆಕ್ರೋಶ
ಸಿದ್ದಿ, ಗೌಳಿ ಸಮುದಾಯ ಅಭಿವೃದ್ಧಿಗೆ ಇನ್ನಷ್ಟು ಯೋಜನೆ ಅಗತ್ಯ: ಆರ್‌.ವಿ. ದೇಶಪಾಂಡೆ