ಕನ್ನಡಪ್ರಭ ವಾರ್ತೆ ಮುದಗಲ್
ಸ್ವಗ್ರಾಮಕ್ಕೆ ಆಗಮಿಸಿದ್ದ ಅವರನ್ನು ಭೇಟಿಯಾದ ಸ್ಥಳೀಯರು, ಪಟ್ಟಣದ ಸರ್ವತೋಮುಖ ಅಭಿವೃದ್ದಿಗಾಗಿ ಪಟ್ಟಣದಲ್ಲಿರುವ ಬಸ್ ನಿಲ್ದಾಣವನ್ನು ಹೈಟೆಕ್ ಪರಿವರ್ತಿಸಬೇಕು ಮತ್ತು ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ, ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವದರಿಂದ ಬಸ್ ಡಿಪೋ ಮಂಜೂರಾತಿ ಮಾಡಿಸಬೇಕೆಂದು ಮನವಿ ಮಾಡಿದರು. ನಿಮ್ಮ ತಂದೆಯವರು ಕೂಡ ಈ ಕ್ಷೇತ್ರದ ಮಾಜಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದು, ನಾವೆಲ್ಲಾ ಅವರ ಅಭಿಮಾನಿಗಳು. ಅದರಂತೆ ತಮ್ಮ ಕೊಡುಗೆಯೂ ತಮ್ಮ ಪಟ್ಟಣಕ್ಕೆ ತಲುಪಲಿ ಎನ್ನುವದೇ ನಮ್ಮ ಅಭಿಲಾಷೆ ಎಂದರು.
ಮನವಿ ಸ್ವೀಕರಿಸಿದ ಚಂದ್ರಶೇಖರ ಎಂ ಗಂಗಣ್ಣನವರು ಸಾರಿಗೆ ಸಚಿವರು ನನಗೆ ನಮ್ಮ ತಂದೆಯ ಮೂಲಕ ಬೇಕಾದವರು. ಅವರೊಂದಿಗೆ ಚರ್ಚಿಸಿ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕೆಕೆಆರ್ಟಿಸಿ ಸಂಘಟನೆ ಅಧ್ಯಕ್ಷ ಕರೀಮಸಾಬ ದಫೆದಾರ, ಚಾಲಕ ನ್ಯಾಮತ್ ಖಾನ್, ಜಿಲಾನಿಪಾಷಾ, ಜಾವೀದ್ ಕಿಲ್ಲಾ, ಮಂಜು ಬನ್ನಿಗೋಳ್ಕರ, ಹುಸೇನ್ಸಾಬ, ಜಗತ್ಸಿಂಗ್, ಗಂಗನಗೌಡ, ಅಮರೇಗೌಡ, ಮಂಜೂರ, ಫರೀದ್, ಯಾಸೀನ್, ಸಲಿಂಪಾಷಾ, ಸೈಯದ ಮಹೆಬೂಬ್ ಖಾದ್ರಿ ಸೇರಿದಂತೆ ಮುಂತಾದವರಿದ್ದರು.