ಯಲ್ಲಾಪುರ: ಬುಡಕಟ್ಟು ಸಿದ್ದಿ ಸಮುದಾಯದವರಿಗೆ ೨೦೨೬-೨೦೨೭ನೇ ಸಾಲಿನ ಪೌಷ್ಟಿಕಾಹಾರ ವಿತರಣೆಯಲ್ಲಿ ವಿಳಂಬವಾಗಿದ್ದು, ತಕ್ಷಣ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘಟನೆಯಿಂದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಅವರಿಗೆ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಎರಡು ವಾರದೊಳಗೆ ಪೌಷ್ಟಿಕಾಹಾರ ವಿತರಣೆಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಸಂಘದ ರಾಜ್ಯಾಧ್ಯಕ್ಷ ಬೆನಿತ್ ಸಿದ್ದಿ, ಗೌರವಾಧ್ಯಕ್ಷ ಜೋನ್ ಕೊಸ್ತಾ ಬಿಳ್ಕಿಕರ್, ಪ್ರಮುಖರಾದ ಅಗಸ್ಟಿನ್ ಜೂಜೆ ಸಿದ್ದಿ, ಫಾತಿಮಾ ಸಿದ್ದಿ, ಶಂಕರ ನಾರಾಯಣ ಸಿದ್ದಿ, ಮೇರಿ ದೊಡ್ಮನಿ, ಬಸ್ಯಾಂವ್ ಸಿದ್ದಿ, ಖಾದರಸಾಬ್ ತತ್ವಣಗಿ, ಜಾಪರಸಾಬ್ ಚಪರೇಕರ್, ಹುಸೇನಾಬಿ ದೇವಕಾರಿ, ಲಕ್ಣ್ಮಣ ಸಿದ್ದಿ, ಗೋಪಾಲ ಸಿದ್ದಿ ಭಾಗವಹಿಸಿದ್ದರು.