ಕುಷ್ಟಗಿ: ಕೆಲವು ಸಮುದಾಯದವರು ಮಾದಿಗ ಜಾತಿ ಅಲ್ಲದೆ ಇದ್ದರೂ ಮಾದಿಗ ಎಂದು ಹೇಳಿಕೊಂಡು ಸರ್ಕಾರಿ ನೌಕರಿ ಸೇರಿದಂತೆ ಅನೇಕ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಅದನ್ನು ಸರ್ಕಾರ ತಡೆಯಬೇಕು ಎಂದು ಅಖಿಲ ಭಾರತ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಹುಸೇನಪ್ಪಸ್ವಾಮಿ ಹೇಳಿದರು.
ಒಳಮೀಸಲಾತಿಯಲ್ಲಿ ಮೂಲ ಮಾದಿಗರಿಗೆ ಹೆಚ್ಚಿನ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸುವ ಸಲುವಾಗಿ ಡಿ. 11ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಲು ನಮ್ಮ ಸಮಾಜದವರು ಬೃಹತ್ ಪ್ರತಿಭಟನೆ ಮೂಲಕ ಸಿಎಂಗೆ ಮನವಿ ಮಾಡಲಾಗುತ್ತದೆ ಎಂದರು.
ಸರ್ಕಾರ ಕೈಗೊಳ್ಳುವ ಯೋಜನೆಗಳಲ್ಲಿ, ನೇಮಕಾತಿಗಳಲ್ಲಿ, ಶೈಕ್ಷಣಿಕವಾಗಿ ಒಳ ಮೀಸಲಾತಿಯಿಂದ ನೈಜ ಶೋಷಿತ ವರ್ಗದವರಾದ ಮಾದಿಗ, ಹೊಲೆಯರಿಗೆ ಆದ್ಯತೆ ನೀಡಬೇಕು, ಅತಿ ಹೆಚ್ಚು ಶೋಷಣೆಗೆ ಒಳಗಾದ ಶೋಷಿತ ಜನಾಂಗ ನಮ್ಮದು, ಹೀಗಾಗಿ ನಮಗೆ ಹೆಚ್ಚಿನ ನ್ಯಾಯ ನೀಡಬೇಕು, ಸರ್ಕಾರ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಹೇಳಿದರು.ಮುಖಂಡರಾದ ತಾಲೂಕಾಧ್ಯಕ್ಷ ಹನುಮಂತಪ್ಪ ಶಿವನಗುತ್ತಿ, ಶಿವಪ್ಪ ಸಿದ್ದಾಪುರ, ರಾಮಣ್ಣ, ಪುಜಪ್ಪ, ಯಮನೂರಪ್ಪ ಗೋನಾಳ, ಹೊಳೆಯಪ್ಪ, ಮಹಾದೇವಪ್ಪ ಕೊಡತಗೇರಿ ಇದ್ದರು.
ತಾಲೂಕು ಘಟಕದ ಪದಾಧಿಕಾರಿಗಳು: ಅಧ್ಯಕ್ಷರಾಗಿ ಹನುಮಂತಪ್ಪ ಶಿವನಗುತ್ತಿ, ಗೌರವಾಧ್ಯಕ್ಷರಾಗಿ ಗುರುರಾಜ ಕಲಾಲಬಂಡಿ, ಸಿದ್ದಪ್ಪ ಕಲಾಲಬಂಡಿ, ಬಸವರಾಜ ಬೇವಿನಕಟ್ಟಿ, ಕಾನೂನು ಸಲಹೆಗಾರ ಮಾರುತಿ ಗೂಡುರ, ಸೋಮನಾಥ ಪುರ, ಶುಖಮುನಿ ಗುಮಗೇರಾ, ಯಮನೂರ ಕಟ್ಟಿಮನಿ, ಸಂಚಾಲಕರಾಗಿ ಕೆಂಚಪ್ಪ ರ್ಯಾವಣಕಿ, ಪಾಂಡು ಕಟ್ಟಿಮನಿ, ಮಂಜು ಕಲಕೇರಿ, ನಿರುಪಾದಿ ಗೋತಗಿ, ರಮೇಶ ಭೀಮಪುತ್ರ, ಶ್ರೀಕಾಂತ ಕೋರಡಕೇರಾ, ಚನ್ನಬಸವ ಪರಕಿ, ಬಾಲಾಜಿ ಹೆಸರೂರ, ಯಮನೂರ ಹೀರೆಮನಿ, ಕನಕಪ್ಪ ಕಲಕೇರಿ ಆಯ್ಕೆಯಾದರು.