ಕನ್ನಡಪ್ರಭ ವಾರ್ತೆ ಮೂಡಲಗಿ
ಪಟ್ಟಣದಲ್ಲಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರೈತ ಸೈದಪ್ಪ ಅವರು 2021ರ ಡಿಸೆಂಬರ್ ನಲ್ಲಿ ಚೆನ್ನೈ ಮೂಲದ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿಯಲ್ಲಿ ಸಾಲ ಹೈನುಗಾರಿಕೆಗೆ ತೆಗೆದುಕೊಂಡ ₹5 ಲಕ್ಷ ಸಾಲದಲ್ಲಿ ₹3,16,800 ಮರಳಿ ತುಂಬಿದ್ದಾರೆ. ನಂತರ ಕಂತು ತುಂಬುವ ಸಂದರ್ಭದಲ್ಲಿ ಫೈನಾನ್ಸ್ ಸಿಬ್ಬಂದಿ ₹32 ಸಾವಿರ ಹಣವನ್ನು ತೆಗೆದುಕೊಂಡು ಹೋಗಿದ್ದು, ಖಾತೆಗೆ ಜಮಾ ಮಾಡದೆ ಕಂಒನಿಯ ಕೆಲಸ ಬಿಟ್ಟಿದ್ದಾರೆ. ಅವರ ವಿರುದ್ಧ ಫೈನಾನ್ಸ್ ನವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೂ ರೈತರನ್ನು ಬೀದಿಗೆ ತರುವಂತ ಕಾರ್ಯ ಮಾಡಿದ್ದು ವಿಪರ್ಯಾಸ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಮಯದಲ್ಲಿ ರಮೇಶ ತಿಗಡಿ, ಮಾಯಪ್ಪ ಲೋಕುರೆ, ಸಿದ್ದಪ್ಪ ಕೊಣ್ಣೂರ, ಬಾರಪ್ಪ ಹರಿಜನ, ದಶರಥ ಮಾಂಗ, ದುಂಡಪ್ಪ ದುರದುಂಡಿ ಮತ್ತಿತರರು ಉಪಸ್ಥಿತರಿದ್ದರು.