ಕನ್ನಡಪ್ರಭ ವಾರ್ತೆ ಮೈಸೂರು
ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಸಹಜ ಸಮೃದ್ಧ, ಸಹಜ ಸೀಡ್ಸ್ ಹಾಗೂ ಭತ್ತ ಉಳಿಸಿ ಆಂದೋಲನದ ಆಶ್ರಯದಲ್ಲಿ ನಡೆದ ದೇಸಿ ಅಕ್ಕಿ ಮೇಳದ ಅಂಗವಾಗಿ ಭಾನುವಾರ ನಡೆದ ಮಕ್ಕಳ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ನಗರದ ಗ್ರಾಹಕರಿಗೆ ಭತ್ತ ಸಂಸ್ಕೃತಿ ಮತ್ತು ವೈವಿಧ್ಯದ ಬಗ್ಗೆ ಅರಿವು ಮೂಡಿಸುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದರು.
ಭತ್ತದ ಲೋಕ - ನಾ ಕಂಡಂತೆ ಕುರಿತು ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. 5 ರಿಂದ 9 ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಆರ್. ಕುಶಾಲ್ (ಪ್ರಥಮ), ರಿಷಿಕಾ (ದ್ವಿತೀಯ) ಮತ್ತು ಎಸ್. ಮೌಲ್ಯ (ತೃತೀಯ) ಬಹುಮಾನ ಗಳಿಸಿದರು. 10 ರಿಂದ 12 ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ತನೀಷ್ ಕುಮಾರ್ (ಪ್ರಥಮ), ಗೋಕುಲ್ ಆರ್ಯನ್ (ದ್ವಿತೀಯ) ಮತ್ತು ಎಂ.ಎನ್. ಲಾಲಿತ್ಯ (ತೃತೀಯ) ಬಹುಮಾನ ಗಳಿಸಿದರು. ಕಲಾ ಶಿಕ್ಷಕ ಲೋಕೇಶ್ ತೀರ್ಪುಗಾರರಾಗಿದ್ದರು.ದೇಸಿ ಅಡುಗೆಗಳ ಘಮಲು
ಈ ಸ್ಪರ್ಧೆಯಲ್ಲಿ ಭಾರತಿ (ಪ್ರಥಮ), ನಾಗಮಣಿ ವಿರುಪಾಕ್ಷ (ದ್ವಿತೀಯ) ಬಹುಮಾನ ಗಳಿಸಿದರು. ತೀರ್ಪುಗಾರರಾಗಿ ಕೃಷ್ಣಿ ಶಿರೂರ, ಸೈಯದ್ ಘನಿಖಾನ್ ಮತ್ತು ಪಾಂಡುರಂಗ ಭಟ್ ಉತ್ತಮ ಖಾದ್ಯಗಳನ್ನು ಆಯ್ಕೆ ಮಾಡಿದರು. ವಿಜೇತರಿಗೆ ಭತ್ತ ಕೃಷಿಕ ಕಿರುಗಾವಲಿನ ಸೈಯದ್ ಘನಿಖಾನ್ ಬಹುಮಾನ ವಿತರಿಸಿದರು.
ಎರಡು ದಿನಗಳ ದೇಸಿ ಅಕ್ಕಿ ಮೇಳ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಹೊಸ ತಲೆಮಾರಿನ ಯುವ ದಂಪತಿ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದದ್ದು ವಿಶೇಷ. ಅಂಗಡಿಯ ಪಾಲೀಷ್ ಅಕ್ಕಿ ಮಾತ್ರ ನೋಡಿದ್ದ ಬಹುತೇಕರು, ಮೊದಲ ಬಾರಿ ಕೆಂಪು ಮತ್ತು ಕಪ್ಪು ಅಕ್ಕಿಯನ್ನು ನೋಡಿ ಅಚ್ಚರಿಗೊಂಡರು. ಪ್ರದರ್ಶನಕ್ಕೆ ಬಂದಿದ್ದ ಬಣ್ಣ ಬಣ್ಣದ ಅಕ್ಕಿಗಳನ್ನು ನೋಡಿ, ಮುಟ್ಟಿ ಸಂಭ್ರಮಿಸಿದರು.
ಮಳೆ ವೈಫಲ್ಯದ ಕಾರಣ, ಕನ್ನಂಬಾಡಿ ಮತ್ತು ಕಬಿನಿ ಜಲಾಶಯಗಳಿಂದ ನೀರು ಬಿಡದಿರುವ ಕಾರಣ ದೇಸಿ ಭತ್ತದ ಬಿತ್ತನೆ ಬೀಜ ಕೊಳ್ಳಲು ರೈತರು ಆಸಕ್ತಿ ತೋರಲಿಲ್ಲ. ಬೆರಳೆಣಿಕೆಯಷ್ಟು ರೈತರು ಮಾತ್ರ ಬಿತ್ತನೆ ಬೀಜಗಳನ್ನು ಕೊಂಡರು.