ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಎ.ವಿ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ವರ್ತಮಾನದ ವೈಚಾರಿಕ ಪ್ರಜ್ಞೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ನಾವು ತಪ್ಪಿನ ವಿರುದ್ಧ ಹೋರಾಟ ಮಾಡಬೇಕಿದೆ ವಿನಃ ತಪ್ಪು ಮಾಡುವವರ ವಿರುದ್ಧ ಹೋರಾಟ ಮಾಡಬಾರದು. ಅಂಧ ಶ್ರದ್ಧೆ ಎಂಬುದು ನಮ್ಮನ್ನು ಎಂದಿಗೂ ಕಾಡಬಾರದು. ಮನುಷ್ಯನ ವಿಕಸನದ ಜೊತೆಗೆ ಮೌಡ್ಯತೆ ಎಂಬುದು ಬಂದಿದೆ. ಆವಿಷ್ಕಾರವೆಂಬ ಏಣಿಯ ತುತ್ತ ತುದಿಯಲ್ಲಿದ್ದರು, ಮನುಷ್ಯನಲ್ಲಿ ಭಯ ಎಂಬುದು ಹೋಗಿಲ್ಲ. ಭಯವೇ ಅಂಧಶ್ರದ್ದೆಯ ಮೂಲ ಕಾರಣ ಎಂದರು.ಕಥೆಯ ಮೂಲಕ ಎಲ್ಲಾ ವೈಜ್ಞಾನಿಕ ಪ್ರತಿಪಾದನೆ ನಿರೂಪಿಸಲಾಗುತ್ತಿದೆ. ಕೆಲವು ಸಂಪ್ರದಾಯಗಳು ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ. ಅದರೆ ಕಥೆ ಹೇಳುವಾಗ ವೈಜ್ಞಾನಿಕ ಸ್ಪಷ್ಟತೆಯಲ್ಲಿ ಹೇಳದೆ, ಭಯ ನಿರ್ಮಿಸುವಂತಹ ವಾದಗಳನ್ನು ಮಂಡಿಸಿದ್ದು ಇಂತಹ ಅಂಧ ಶ್ರದ್ಧೆಗಳು ಮೂಡಲು ಕಾರಣವಾಯಿತು ಎಂದು ಹೇಳಿದರು.
ಇಂದು ವಿಶ್ವವಿದ್ಯಾಲಯ, ಪುಸ್ತಕಗಳು ನೀಡುವ ವಿಚಾರಗಳನ್ನು ನಂಬುವುದಕ್ಕಿಂತ, ವಾಟ್ಸ್ ಆ್ಯಪ್ ವಿವಿಯ ವಿಚಾರಗಳನ್ನು ಅತಿ ಹೆಚ್ಚು ನಂಬುತ್ತಿದ್ದೇವೆ. ಉದ್ಯಾನದಲ್ಲಿ ಬೆಳೆಯಬೇಕಾದ ಮಕ್ಕಳು ಮನೆಯೆಂಬ ನಾಲ್ಕು ಗೋಡೆಯ ನಡುವೆ ಬೆಳೆಯುವಂತಾಗಿದೆ. ಉದ್ಯಾನಗಳಿಗೆ ಜಾಗ ನೀಡುವ ಬದಲಿಗೆ, ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಜಾಗ ನೀಡಲು ಪ್ರಾಧಾನ್ಯತೆ ನೀಡುತ್ತಿದ್ದೇವೆ. ದೈಹಿಕ ಶ್ರಮವಿಲ್ಲದೆ ಯುವ ಸಮೂಹ ನೂರಾರು ಮಾನಸಿಕ ಮತ್ತು ದೈಹಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮೌಡ್ಯ ಬಿತ್ತುವ ಬದಲಿಗೆ, ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಮ್ಮ ಪ್ರಾಧಾನ್ಯತೆ ಹೆಚ್ಚಾಗಬೇಕಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಭೂಮಂಡಲದಲ್ಲಿ ನಡೆಯುವ ಅದ್ಭುತ ಆವಿಷ್ಕಾರಗಳಲ್ಲಿ ಗ್ರಹಣ ಎಂಬ ವಿಸ್ಮಯವು ಒಂದು. ಗ್ರಹಣದ ವೈಜ್ಞಾನಿಕ ವಿಸ್ಮಯಗಳನ್ನು ಓದಿದ್ದೇವೆ, ಅದರೇ ಮೌಡ್ಯತೆಯ ಆಧಾರದಲ್ಲಿ ಬದುಕನ್ನು ಕಟ್ಟಿಕೊಂಡಿದ್ದೇವೆ ಎಂದರು.