ಕೆಕೆಆರ್‌ಡಿಬಿಯಿಂದ ಕೊಪ್ಪಳದಲ್ಲಿ ಅಭಿವೃದ್ಧಿ ಪರ್ವ: ಡಾ. ಅಜಯ್‌ ಧರ್ಮಸಿಂಗ್‌

KannadaprabhaNewsNetwork |  
Published : Oct 06, 2025, 01:00 AM IST
ಫೋಟ- ಅಜಯ್‌ ಸಿಂಗ್‌ಅಧ್ಯಕ್ಷರು, ಕೆಕೆಆರ್‌ಡಿಬಿ, ಕಲಬುರಗಿ | Kannada Prabha

ಸಾರಾಂಶ

Development in Koppal from KKRDB: Dr. Ajay Dharmasingh

-ಇಂದು ರಾಜ್ಯ ಸರ್ಕಾರ, ಕೆಕೆಆರ್‌ಡಿಬಿ ಸಹಯೋಗದಲ್ಲಿ 1, 128 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ, ಅಡಿಗಲ್ಲು

--

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಹನುಮನು ಉದಯಿಸಿರುವ ನಾಡು ಕೊಪ್ಪಳದಲ್ಲಿ 1, 128 ಕೋಟಿ ರು ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ಸಮಾರಂಭ ಅ. 6ರ ಸೋಮವಾರ ನಡೆಯಲಿದೆ.

ಆರೋಗ್ಯ, ಶಿಕ್ಷಣ, ಹಿಂದುಳಿದ ವರ್ಗಗಳು, ನೀರಾವರಿ ಸೇರಿದಂತೆ ಹಲವಾರು ಇಲಾಖೆಯಲ್ಲಿನ ಪ್ರಗತಿ ಯೋಜನೆಗಳಿಗೆ ಸಹಯೋಗ ನೀಡುವ ಮೂಲಕ ಕೆಕೆಆರ್‌ಡಿಬಿ ಕೊಪ್ಪಳದಲ್ಲಿ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆದಿದೆ. ಕೆಕೆಆರ್‌ಡಿಬಿ ಅಧ್ಯಕ್ಷರೂ ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್‌ ಧರ್ಮಸಿಂಗ್‌ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯ ಅಭಿವೃದ್ಧಿ ಪರ್ವದ ಭಾಗವಾಗಿ ಅ. 6ರ ಸೋಮವಾರ ಕೊಪ್ಪಳ ನಗರದಲ್ಲಿರುವ ಅಗಡಿ ಬಡಾವಣೆಯಲ್ಲಿ ಬೆ. 11 ಕ್ಕೆ ರಾಜ್ಯ ಸರ್ಕಾರ ಹಾಗೂ ಕೆಕೆಆರ್‌ಡಿಬಿ ಸಹಯೋಗದಲ್ಲಿ 1128 ಕೋಟಿ ರು ಮೊತ್ತದ ಪ್ರಗತಿ ಯೋಜನೆಗಳಿಗೆ ಚಾಲನೆ ನೀಡುವ ಹಾಗೂ ಅಡಿಗಲ್ಲು ಇಡುವ ಕಾರ್ಯಕ್ರಮವಿದೆ.

ಈ ಮಹತ್ವದ ಹಾಗೂ ಪ್ರಗತಿಪರ ಸಮಾರಂಭಕ್ಕೆ ರಾಜ್ಯಸಭೆ ವಿಪಕ್ಷ ನಾಯಕರು, ಎಐಸಿಸಿ ಅಧ್ಯಕ್ಷರಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆಯವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ್‌ ತಂಗಡಗಿಯವರು, ಯೋಜನಾ ಇಲಾಖೆ ಸಚಿವರಾದ ಸುಧಾಕರ್‌ , ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಹಾಗೂ ಕಲ್ಯಾಣ ನಾಡಿನ ಎಲ್ಲಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ವಿವಿದ ಇಲಾಖೆ ಸಚಿವರು, ಕಲ್ಯಾಣದಡಿಯಲ್ಲಿ ಬರುವ ವಿವಿಧ ಕ್ಷೇತ್ರಗಳ ಶಾಸಕರು ಕೊಪ್ಪಳ ನಗರದಲ್ಲಿ ನಡೆಯುತ್ತಿರುವ ಈ ಮಹತ್ವದ ಹಾಗೂ ಅಭಿವೃದ್ಧಿ ಪರ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಕೊಪ್ಪಳದಲ್ಲಿ ಅ. 6ರ ಸೋಮವಾರ ನಡೆಯುತ್ತಿರುವ ಅಭಿವೃದ್ಧಿ ಪರ್ವದ ಸಮಾರಂಭದ ಕುರಿತಂತೆ ಮಾಹಿತಿ ನೀಡಿರುವ ಅವರು, ಕೆಕೆಆರ್‌ಡಿಬಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಹಯೋಗದಲ್ಲಿ ಕಲ್ಯಾಣ ನಾಡಿನ 7 ಜಿಲ್ಲೆಗಳಲ್ಲೆಲ್ಲಾ ಮುಂಬರುವ ದಿನಗಳಲ್ಲಿ ತಲೆ ಎತ್ತಲಿರುವ 306 ಕೋಟಿ ರು. ವೆಚ್ಚದಲ್ಲಿ 36 ವಸತಿ ನಿಲಯಗಳಿಗೆ ಅಡಿಗಲ್ಲು, 20 ಹೊಸ ವಸತಿ ನಿಲಯಗಳಿಗೆ ಅನುಮೋದನೆ ಹಾಗೂ ಇರುವ ಎಲ್ಲಾ ವಸತಿ ನಿಲಯಗಳಿಗೆ ಮೂಲ ಸವಲತ್ತು ಕಲ್ಪಿಸುವ ಕಾಮಗಾರಿಗಳಿಗೆ ಚಾಲನೆ ದೊರಕಲಿದೆ. ಕೊಪ್ಪಳದಲ್ಲಿ ನಿರ್ಮಾಣಗೊಳ್ಳುತ್ತಿರುವ 100 ಹಾಸಿಗೆ ಸಾಮರ್ಥ್ಯದ 100 ಕೋಟಿ ರು ವೆಚ್ಚದ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯ ನಿರ್ಮಾಣದಲ್ಲಿಯೂ ಕೆಕೆಆರ್‌ಡಿಬಿ ಸಹಯೋಗ ನೀಡಿದ್ದು, ಇಲ್ಲಿಯೂ 34 ಕೋಟಿ ರು ಅನುದಾನ ನೀಡಲಾಗುತ್ತಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

.....ಬಾಕ್ಸ್‌.....

ಕೆಕೆಆರ್‌ಡಿಬಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ

ಕೊಪ್ಪಳ ಜಿಲ್ಲೆಗೆ ಕೆಕೆಆರ್‌ಡಿಬಿ ವಿಶೇಷ ಒತ್ತು ನೀಡಿದ್ದು, ಕೆಕೆಆರ್‌ಬಿಯ ಹಿಂದುಳಿದ ವರ್ಗಗಳ ಕಲ್ಯಾಣ ಕ್ರಾಂತಿಯ ಸಮಾರಂಬಕ್ಕೆ ಕೊಪ್ಪಳವನ್ನೇ ಆಯ್ಕೆ ಮಾಡಲಾಗಿದ್ದು, ಈ ಭಾಗದಲ್ಲಿನ ಕೆಕೆಆರ್‌ಡಿಬಿ ಯೋಜನೆಗಳಿಗೆ ವೇಗ ದೊರಕಲಿ ಎಂಬುದೇ ಉದ್ದೇಶ ಎಂದು ಡಾ. ಅಜಯ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ಕೊಪ್ಪಳ ಜಿಲ್ಲೆಗೆ ಕೆಕೆಆರ್‌ಡಿಬಿಯಿಂದ ಆರೋಗ್ಯ ಅವಿಷ್ಕಾರದಲ್ಲಿ 319.76 ಕೋಟಿ ರು., ಉದ್ಯೋಗ ಆವಿಷ್ಕಾರದಲ್ಲಿ 120 ಕೋಟಿ, ಕಲ್ಯಾಣ ಪಥದಲ್ಲಿ 121.55ಕೋಟಿ ರು., ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 18ಕೋಟಿ ರು, ಅಲ್ಪಸಂಖ್ಯಾತರ ಅಭಿವೃದ್ಧಿಗೆ 6. 375 ಕೋಟಿ ರು., ಎಸ್ಸಿ- ಎಸ್ಟಿ ಅಭಿವೃದ್ಧಿಗೆ 66 ಕೋಟಿ ರು., ಪ್ರಜಾ ಸೌಧಕ್ಕೆ 45. 75ಕೋಟಿ ರು. ಅನುದಾನ ಒದಗಿಸಲಾಗಿದೆ ಎಂದು ಡಾ. ಅಜಯ್‌ ಧರ್ಮಸಿಂಗ್‌ ಹೇಳಿದ್ದಾರೆ.

ಜಿಲ್ಲೆಯ ಕುಕನೂರ್‌ ತಾಲೂಕಿನ ತಳಕಲ್‌ನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಅಡಿ ಜಿಟಿಟಿಸಿ ಬಹು ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೂ ಕೆಕೆಆರ್‌ಡಿಬಿ ಅನುದಾನದಲ್ಲಿ ನೆರವು ನೀಡಲಾಗಿದೆ. ಕೊಪ್ಪಳದ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಕೆಕೆಆರ್‌ಡಿಬಿ ತನ್ನ ಸಹಯೋಗ ವಿಸ್ತರಿಸಿದೆ ಎಂದೂ ಮಂಡಳಿಯ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಹೇಳಿದ್ದಾರೆ.

ಫೋಟ- ಅಜಯ್‌ ಸಿಂಗ್‌, ಅಧ್ಯಕ್ಷರು, ಕೆಕೆಆರ್‌ಡಿಬಿ.

PREV

Recommended Stories

5 ವರ್ಷ ಸಿಎಂ ಎಂದೇ ಸಿದ್ದುಗೆ ಮತ ಹಾಕಿದ್ದೇವೆ : ರಾಯರಡ್ಡಿ
ಹಸು ಕೊಂದಿದ್ದಕ್ಕೆ ಎಂ.ಎಂ.ಹಿಲ್ಸ್‌ ಹುಲಿಯ ಹತ್ಯೆಗೈದು ಪ್ರತೀಕಾರ!