ಆಕಾಶ ಭವನ ಮತ್ತು ಆಶ್ರಮ ಉದ್ಘಾಟಿಸಿದ ಸಚಿವ ಕೆಎಚ್ ಮುನಿಯಪ್ಪ

KannadaprabhaNewsNetwork |  
Published : Oct 06, 2025, 01:00 AM IST
ಕೆಹೆಚ್ ಎಂ | Kannada Prabha

ಸಾರಾಂಶ

ಗ್ರಾಮವನ್ನು ರಾಮರಾಜ್ಯವನ್ನಾಗಿಸುವಲ್ಲಿ ಮಂಜುನಾಥ್‌ರ ಕಾರ್ಯ ಸಾಕಾರವಾಗಲಿದೆ. ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ಸ್ವಚ್ಛತಾ ಅಭಿಯಾನ, ಯೋಗ ಆರೋಗ್ಯ ಶಿಬಿರಗಳು ಇತ್ಯಾದಿಗಳನ್ನು ನೀಡುತ್ತಿರುವುದು ಶ್ಲಾಘನೀಯ ವಿಚಾರವೆಂದರು.

ಚಿಂತಾಮಣಿ: ಗುರುಕುಲ ಪದ್ಧತಿಯ ಮೂಲಕ ಶಿಕ್ಷಣ, ವಿವಿಧ ರೀತಿಯ ಸತ್ಸಂಗಗಳು, ಶಿಬಿರಗಳು, ವಿಶೇಷ ಉಪನ್ಯಾಸಗಳು, ಯುವಕರನ್ನು ದುಶ್ಚಟಗಳಿಂದ ವಿಮುಕ್ತಗೊಳಿಸುವುದು ಸೇರಿದಂತೆ ಸತ್ಪ್ರಜೆಗಳನ್ನಾಗಿ ಮಾಡುವ ಧ್ಯೇಯದೊಂದಿಗೆ ಈ ಭವನ ಕಾರ್ಯ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆಯೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.

ತಾಲೂಕಿನ ಸುಬ್ಬರಾಯನಪೇಟೆಯಲ್ಲಿನ ಆಕಾಶ ಭವನ ಮತ್ತು ಆಶ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಜಗತ್ತು ಸ್ವಾರ್ಥದಿಂದ ಕೂಡಿದ್ದು, ನಿಸ್ವಾರ್ಥ ಸೇವೆಯ ದೃಷ್ಟಿಯಿಂದ ಆಕಾಶ ಭವನ ಮತ್ತು ಆಶ್ರಮವನ್ನು ನಿರ್ಮಿಸಿ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಮಂಜುನಾಥ್‌ರ ಕಾರ್ಯ ಹಲವರಿಗೆ ಮಾದರಿಯಾಗಲಿದೆಯೆಂದರು.

ಗ್ರಾಮವನ್ನು ರಾಮರಾಜ್ಯವನ್ನಾಗಿಸುವಲ್ಲಿ ಮಂಜುನಾಥ್‌ರ ಕಾರ್ಯ ಸಾಕಾರವಾಗಲಿದೆ. ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ಸ್ವಚ್ಛತಾ ಅಭಿಯಾನ, ಯೋಗ ಆರೋಗ್ಯ ಶಿಬಿರಗಳು ಇತ್ಯಾದಿಗಳನ್ನು ನೀಡುತ್ತಿರುವುದು ಶ್ಲಾಘನೀಯ ವಿಚಾರವೆಂದರು.

ಸಿದ್ಧರಾಮಯ್ಯನವರೇ ಮುಖ್ಯಮಂತ್ರಿ: ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಸಧ್ಯಕ್ಕಿಲ್ಲ, ಏಕೆಂದರೆ ಮುಖ್ಯಮಂತ್ರಿಗಳಾಗಿ ಸಿದ್ಧರಾಮಯ್ಯನವರು ಉತ್ತಮ ಕೆಲಸ ನಿರ್ವಹಣೆ ಮಾಡುತ್ತಿದ್ದು, ಅವರು ತಮ್ಮ ಸ್ಥಾನದಲ್ಲಿ ಅಭಾದಿತವಾಗಿ ಮುಂದುವರಿಯುತ್ತಾರೆ. ಯಾವುದೇ ಅಡೆತಡೆ ಇಲ್ಲದೆ ಕೆಲಸ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದರು. ಡಾ.ಸಿದ್ದಲಿಂಗಯ್ಯ ಸ್ವಾಮೀಜಿ, ನರೋತ್ತಮಾನಂದಸ್ವಾಮೀಜಿ, ಸಹಜಾನಂದ ಸ್ವಾಮೀಜಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಮಂಜುನಾಥ್, ರಜನಿ ಸೇರಿದಂತೆ ಸುಬ್ಬರಾಯನಪೇಟೆಯ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋವಿನಜೋಳ ಖರೀದಿಯಲ್ಲಿ ಪಾರದರ್ಶಕತೆ ಇರಲಿ: ಡಿಸಿ
ಶ್ರೀಬಸವೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸ್ನೇಹಸಂಗಮ