ಮಂಡ್ಯ ಸಿಟಿ ಸಹಕಾರ ಬ್ಯಾಂಕ್‌ಗೆ ನಿರ್ದೇಶಕರು ಅವಿರೋಧ ಆಯ್ಕೆ

KannadaprabhaNewsNetwork |  
Published : Sep 03, 2025, 01:00 AM IST
೨ಕೆಎಂಎನ್‌ಡಿ-೩ಮಂಡ್ಯ ಸಿಟಿ ಕೋ-ಆಪರೇಟೀವ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವ ನಿರ್ದೇಶಕರು. | Kannada Prabha

ಸಾರಾಂಶ

ಮಂಡ್ಯ ಸಿಟಿ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮುಂದಿನ ಅವಧಿಗೆ ೨೦೨೫ ಸೆಪ್ಟೆಂಬರ್‌ ೭ ರ ಭಾನುವಾರದಂದು ಚುನಾವಣೆ ದಿನಾಂಕ ನಿಗದಿಯಾಗಿತ್ತು. ಹದಿಮೂರು ನಿರ್ದೇಶಕರ ಸ್ಥಾನಕ್ಕೆ ಒಟ್ಟು ೩೪ ಅಭ್ಯರ್ಥಿಗಳು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಸಿಟಿ ಕೋ-ಆಪರೇಟಿವ್ ಬ್ಯಾಂಕ್‌ನ ಮುಂದಿನ ಐದು ವರ್ಷದ ಅವಧಿಗೆ ಆಡಳಿತ ಮಂಡಳಿಯ ೧೩ ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲಾಯಿತು.

ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮುಂದಿನ ಅವಧಿಗೆ ೨೦೨೫ ಸೆಪ್ಟೆಂಬರ್‌ ೭ ರ ಭಾನುವಾರದಂದು ಚುನಾವಣೆ ದಿನಾಂಕ ನಿಗದಿಯಾಗಿತ್ತು. ಹದಿಮೂರು ನಿರ್ದೇಶಕರ ಸ್ಥಾನಕ್ಕೆ ಒಟ್ಟು ೩೪ ಅಭ್ಯರ್ಥಿಗಳು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.

ನಾಮಪತ್ರ ವಾಪಸ್ ಪಡೆಯಲು ಸೆಪ್ಟೆಂಬರ್ ೧ ಕೊನೆಯ ದಿನವಾಗಿತ್ತು. ಹಾಲಹಳ್ಳಿ ಅಶೋಕ್ ಹಾಗೂ ಹಿರಿಯ ವಕೀಲರಾದ ಬಿ.ಟಿ.ನಾಗರಾಜು ಪ್ರತ್ಯೇಕವಾಗಿ ಎರಡು ಸಿಂಡಿಕೇಟ್ ಮಾಡಿಕೊಂಡು ಚುನಾವಣೆಗೆ ಅಣಿಯಾಗಿದ್ದರು. ಕಡೇ ಘಳಿಗೆಯಲ್ಲಿ ಮಾತುಕತೆ ಮೂಲಕ ಬಿ.ಟಿ.ನಾಗರಾಜು ತಂಡದ ೬ ಹಾಗೂ ಹಾಲಹಳ್ಳಿ ಅಶೋಕ್ ತಂಡದ ೭ ಸ್ಥಾನಗಳನ್ನು ಹಂಚಿಕೆ ಮಾಡುವ ಮೂಲಕ ಚುನಾವಣೆಗೆ ಅಂತ್ಯ ಹಾಡಲಾಯಿತು.

ಹದಿಮೂರು ಮಂದಿ ಹೊರತುಪಡಿಸಿ ಉಳಿದ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದರಿಂದ, ಪ್ರತಿಸ್ಪರ್ಧಿಗಳಿಲ್ಲದ ಕಾರಣ ಉಳಿದ ಹದಿಮೂರು ಮಂದಿಯನ್ನು ಚುನಾವಣಾಧಿಕಾರಿ ರವಿ ಅವರು ಮುಂದಿನ ೫ ವರ್ಷದ ಅವಧಿಗೆ ಮಂಡ್ಯ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಸಾಮಾನ್ಯ ಕ್ಷೇತ್ರದಿಂದ ಎಚ್.ಸಿ.ಅನಿಲ್‌ರಾಜ್, ಎಚ್.ಅಶೋಕ್, ಎನ್.ನಾಗೇಶ್, ಎಂ.ಮಹೇಶ್, ಪಿ.ಎಂ.ರಾಘವೇಂದ್ರ, ಬಿ.ಸಿ.ಸುರೇಶ, ಸಿ.ಸುಂದರ್ ಅವಿರೋಧ ಆಯ್ಕೆಯಾದರು.

ಉಳಿದಂತೆ ತಿರುಮಲಾಚಾರಿ (ಹಿಂದುಳಿದ ವರ್ಗ ಪ್ರವರ್ಗ ಎ-ಮೀಸಲು), ಎನ್.ಶಶಿಧರ್ (ಹಿಂದುಳಿದ ವರ್ಗ ಪ್ರವರ್ಗ- ಬಿ. ಮೀಸಲು), ಡಿ.ಬಿ.ಪ್ರಮೀಳಾ ಹಾಗೂ ಸಿ.ಲತಾ (ಮಹಿಳಾ ಮೀಸಲು), ಬಿ.ಜೆ.ಸೋಮಶೇಖರ್ (ಪರಿಶಿಷ್ಟ ಪಂಗಡ), ಜನಾರ್ಧನಸ್ವಾಮಿ (ಪರಿಶಿಷ್ಟ ಜಾತಿ) ಮೀಸಲು ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ