ಮಲಿನ ನೀರು: ಹೆಬ್ಬಾಳದಲ್ಲಿ 1100 ಅಡಕೆ ಮರಗಳ ನಾಶ

KannadaprabhaNewsNetwork |  
Published : Apr 08, 2025, 12:35 AM IST
7ಕೆಡಿವಿಜಿ10, 11, 12, 13-ದಾವಣಗೆರೆ ತಾ. ಹೆಬ್ಬಾಳ್ ಗ್ರಾಮದಲ್ಲಿ ಸೌತೆಕಾಯಿ ಫ್ಯಾಕ್ಟರಿ ತ್ಯಾಜ್ಯ ನೀರಿನಿಂದ ಎರಡು ಎಕರೆಗೆ 2 ಕ್ವಿಂಟಾಲ್ ಅಡಿಕೆಯೂ ಬರುತ್ತಿಲ್ಲವೆಂದು ಬೇಸತ್ತ ರೈತ 1100 ಅಡಿಕೆ ಮರಗಳನ್ನು ಜೆಸಿಬಿಯನ್ನು ಬಾಡಿಗೆಗೆ ತರಿಸಿ, ಅಡಿಕೆ ಮರಗಳನ್ನು ನಾಶಪಡಿಸಿರುವುದು. | Kannada Prabha

ಸಾರಾಂಶ

10-12 ವರ್ಷಗಳಿಂದ 2 ಎಕರೆಯಲ್ಲಿ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಬೆಳೆಸಿದ್ದ, ಜತನದಿಂದ ಕಾಪಾಡಿದ್ದ 1100 ಅಡಕೆ ಮರಗಳನ್ನು ಗ್ರೀನ್ ಆಗ್ರೋ ಪ್ಯಾಕ್ ಸೌತೆಕಾಯಿ ಕಂಪನಿಯ ಕಲುಷಿತ ನೀರಿನ ಪರಿಣಾಮ ಇಳುವರಿಯಿಲ್ಲದೇ, ಜೆಸಿಬಿಯಿಂದ ತೆರವುಗೊಳಿಸಿದ ಘಟನೆ ತಾಲೂಕಿನ ಹೆಬ್ಬಾಳ್ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ.

- ಬದುಕು ಕಸಿದ ಸೌತೆಕಾಯಿ ಫ್ಯಾಕ್ಟರಿ ರಾಸಾಯನಿಕಯುಕ್ತ ನೀರು: ರೈತ ಕಣ್ಣೀರು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

10-12 ವರ್ಷಗಳಿಂದ 2 ಎಕರೆಯಲ್ಲಿ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಬೆಳೆಸಿದ್ದ, ಜತನದಿಂದ ಕಾಪಾಡಿದ್ದ 1100 ಅಡಕೆ ಮರಗಳನ್ನು ಗ್ರೀನ್ ಆಗ್ರೋ ಪ್ಯಾಕ್ ಸೌತೆಕಾಯಿ ಕಂಪನಿಯ ಕಲುಷಿತ ನೀರಿನ ಪರಿಣಾಮ ಇಳುವರಿಯಿಲ್ಲದೇ, ಜೆಸಿಬಿಯಿಂದ ತೆರವುಗೊಳಿಸಿದ ಘಟನೆ ತಾಲೂಕಿನ ಹೆಬ್ಬಾಳ್ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ.

ಹೆಬ್ಬಾಳದಲ್ಲಿ ಗ್ರೀನ್ ಆಗ್ರೋ ಪ್ಯಾಕ್ ಸೌತೆಕಾಯಿ ಕಂಪನಿಯಿಂದ ಹೊರಬಿಡುವ ರಾಸಾಯನಿಕ ಮಿಶ್ರಿತ ನೀರು ಹಳ್ಳದ ಮೂಲಕ, ಹೊಲ-ಗದ್ದೆಗಳ ಅಂತರ್ಜಲ ಸೇರುತ್ತಿದೆ. ಹೀಗೆ ಅಂತರ್ಜಲ ಸೇರಿದ ರಾಸಾಯನಿಕ ಮಿಶ್ರಿತ ನೀರಿನಿಂದಾಗಿ ಸುಮಾರು 18ಕ್ಕೂ ಹೆಚ್ಚು ಕೊಳವೆ ಬಾವಿಗಳ ನೀರು ಸಹ ಕಲುಷಿತವಾಗಿದೆ. ಈ ಕಲುಷಿತ ನೀರನ್ನೇ ಅಡಕೆ ಗಿಡಗಳಿಗೆ ಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಣಾಮ 1100 ಅಡಕೆ ಮರಗಳಿಂದ ಕನಿಷ್ಠ 2 ಕ್ವಿಂಟಲ್ ಅಡಕೆಯೂ ಬಂದಿಲ್ಲ. ಈ ಬೇಸರದಿಂದ ರೈತ ಕೆ.ವಿ.ರುದ್ರೇಶ್‌ ಜೆಸಿಬಿ ಬಾಡಿಗೆಗೆ ತರಿಸಿಕೊಂಡು ಕಣ್ಣೀರು ಹಾಕುತ್ತ, ಅಡಕೆ ಮರಗಳ ನಾಶಪಡಿಸಿದ್ದಾರೆ.

ಅಡಕೆ ಗಿಡಗಳಿಗೆ ಸಮೀಪದ ಸೌತೆಕಾಯಿ ಫ್ಯಾಕ್ಟರಿಯ ರಾಸಾಯನಿಕಯುಕ್ತ ಮಲಿನ ನೀರು ಮಾರಕವಾಗಿದೆ ಪರಿಣಮಿಸಿದೆ. ರುದ್ರೇಶ ಅಷ್ಟೇ ಅಲ್ಲ, ಸುತ್ತಮುತ್ತಲಿನ ರೈತರದ್ದೂ ಇದೇ ಪರಿಸ್ಥಿತಿ. ನಾಲ್ಕೈದು ವರ್ಷಗಳ ಹಿಂದೆಯೇ ಸೌತೆಕಾಯಿ ಫ್ಯಾಕ್ಟರಿಯಿಂದ ಆಗುತ್ತಿರುವ ಅನಾಹುತ, ಅಪಾಯದ ಬಗ್ಗೆ ಕನ್ನಡಪ್ರಭ ಸಹ ವಿಶೇಷ ವರದಿ ಮಾಡಿದ್ದರೂ ಸಂಬಂಧಿಸಿದವರು ಎಚ್ಚೆತ್ತುಕೊಂಡಿಲ್ಲ.

- - -

-7ಕೆಡಿವಿಜಿ10, 11, 12, 13:

ಹೆಬ್ಬಾಳ್ ಗ್ರಾಮದಲ್ಲಿ ಸೌತೆಕಾಯಿ ಫ್ಯಾಕ್ಟರಿ ತ್ಯಾಜ್ಯ ನೀರಿನಿಂದಾಗಿ ಅಡಕೆ ಬೆಳೆ ನಷ್ಟಕ್ಕೀಡಾದ ಬೇಶರಕ್ಕೆ ರೈತ ರುದ್ರೇಶ 1100 ಅಡಕೆ ಮರಗಳನ್ನು ಜೆಸಿಬಿಯಿಂದ ನಾಶಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ