ಪ್ರವಚನ ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯುವ ಮಾರ್ಗ

KannadaprabhaNewsNetwork |  
Published : Oct 05, 2025, 01:01 AM IST
ಪೋಟೊ4ಕೆಎಸಟಿ2: ಕುಷ್ಟಗಿ ಪಟ್ಟಣದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ನಡೆದ ದೇವಿ ಪುರಾಣದ ಮಹಾಮಂಗಲ ಕಾರ್ಯಕ್ರಮದ ಮೆರವಣಿಗೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಭಾಗವಹಿಸಿ ಶುಭ ಕೋರಿದರು. | Kannada Prabha

ಸಾರಾಂಶ

ಪುರಾಣ ಎಂಬುದು ಜಗತ್ತನ್ನು ಬೆಳಗಿಸಲು ಒಂದು ಸಾಧನೆ ನಂಬಿಕೆ ಇಟ್ಟು ಮನುಷ್ಯ ಧಾರ್ಮಿಕತೆಯಲ್ಲಿ ತೊಡಗಿದರೆ ಸನ್ಮಾರ್ಗ ಪ್ರಾಪ್ತಿ

ಕುಷ್ಟಗಿ: ಪುರಾಣ ಪ್ರವಚನಗಳು ಜಗತ್ತನ್ನು ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯುವ ಮಾರ್ಗ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದಲ್ಲಿ ನವರಾತ್ರಿ ಅಂಗವಾಗಿ ವಿಶ್ವಕರ್ಮ ಸಮಾಜದವರು ಆಯೋಜಿಸಿದ್ದ 38ನೇ ವರ್ಷದ ದೇವಿ ಪುರಾಣ ಮಹಾಮಂಗಲದ ಮೆರವಣಿಗೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಗೆ ಹೂ ಮಾಲೆ ಸಮರ್ಪಿಸಿ ಮಾತನಾಡಿದರು.

ಪುರಾಣ ಎಂಬುದು ಜಗತ್ತನ್ನು ಬೆಳಗಿಸಲು ಒಂದು ಸಾಧನೆ ನಂಬಿಕೆ ಇಟ್ಟು ಮನುಷ್ಯ ಧಾರ್ಮಿಕತೆಯಲ್ಲಿ ತೊಡಗಿದರೆ ಸನ್ಮಾರ್ಗ ಪ್ರಾಪ್ತಿಯಾಗುತ್ತದೆ. ಅಷ್ಟೆ ಅಲ್ಲದೆ ಭಕ್ತಿ ಭಾವನೆಯೂ ಮೂಡುತ್ತದೆ ಎಂದರು.

ಪುರಾಣಗಳಿಂದ ಸಂಸ್ಕ್ರತಿ, ಆಚಾರ, ವಿಚಾರ ಹಾಗೂ ಧಾರ್ಮಿಕತೆ ತಿಳಿದುಕೊಳ್ಳಬಹುದಾಗಿದ್ದು, ಇಂತಹ ಪುರಾಣಗಳು ಹೆಚ್ಚೆಚ್ಚು ನಡೆಯಬೇಕು ಎಂದರು.

ಪ್ರತಿಯೊಬ್ಬರೂ ಉತ್ತಮ ಚಿಂತನೆ, ವಿಚಾರ ಮತ್ತು ನಡತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅದ್ಧೂರಿ ಮೆರವಣಿಗೆ

ನವರಾತ್ರಿ ದಸರಾ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ದೇವಿ ಪುರಾಣದ ಮಹಾಮಂಗಲದ ಅಂಗವಾಗಿ ದೇವಿಯ ಪುರಾಣ ಗ್ರಂಥ ಹಾಗೂ ದೇವಿಯ ಭಾವಚಿತ್ರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಳಿಕಾದೇವಿ ದೇವಸ್ಥಾನದಿಂದ ಆರಂಭಗೊಂಡು ಮುಖ ಬೀದಿಗಳಲ್ಲಿ ಮೆರವಣಿಗೆಗೊಳ್ಳುವ ಮೂಲಕ ದೇವಸ್ಥಾನಕ್ಕೆ ತಲುಪಿಸುವ ಮೂಲಕ ದೇವಿ ಗ್ರಂಥ ಹಾಗೂ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವಿ ಪುರಾಣ ಸಂಪನ್ನಗೊಳಿಸಿದರು.

ದೇವಿ ಪುರಾಣವೂ ಸೆ. 22 ರಂದು ಆರಂಭವಾಗಿ ಅ.2 ರ ಸಂಜೆ 7 ರಿಂದ ರಾತ್ರಿ 9ರವರೆಗೆ ಪ್ರತಿದಿನ ಪುರಾಣ ಹಾಗೂ ಕಾರ್ಯಕ್ರಮಗಳು ಜರುಗಿಸಲಾಯಿತು. ಅ.2ರ ವಿಜಯದಶಮಿಯಂದು ಸಂಜೆ ಪುರಾಣ ಮಠಣ ಮಂಗಲದ ನಂತರ ಶಮಿವೃಕ್ಷಕ್ಕೆ ತೆರಳಿ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಿತು. ಶನಿವಾರ ಬೆಳಗ್ಗೆ ದೇವಿ ಭಾವಚಿತ್ರ ಮೆರವಣಿಗೆ ಕುಷ್ಟಗಿ ನಗರದ ಪ್ರಮುಖ ಬೀದಿಗಳಲ್ಲಿ ಸಕಲ ಮಂಗಲ ವಾದ್ಯ ಮೇಳದೊಂದಿಗೆ ಜರುಗಿದ ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಶರಣಪ್ಪ ಬಡಿಗೇರ, ಮಾನಪ್ಪ ಕಮ್ಮಾರ, ಗುರಪ್ಪ ಬಡಿಗೇರ, ನಗರ ಘಟಕ ಅಧ್ಯಕ್ಷ ಸಿದ್ದಪ್ಪ ಬಡಿಗೇರ, ನಗರ ಘಟಕ ಪ್ರಧಾನ ಕಾರ್ಯದರ್ಶಿ ದೇವಪ್ಪ ಬಡಿಗೇರ, ಕೃಷ್ಣಪ್ಪ ಪತ್ತಾರ, ಬಸವರಾಜ ಬಡಿಗೇರ, ಶೇಷಗಿರಿ ಸೋನಾರ್, ಅಡಿವೆಪ್ಪ ಪತ್ತಾರ, ನಾಗರಾಜ ಬಡಿಗೇರ, ಅಯ್ಯಪ್ಪ ಬಡಿಗೇರ, ಅನೀಲ ಕಮ್ಮಾರ, ಶ್ರೀಶೈಲ ಬಡಿಗೇರ, ಶಿವಕುಮಾರ ಬಡಿಗೇರ, ಮಹಾಂತೇಶ ಬಡಿಗೇರ, ಪ್ರಮೋದ ಬಡಿಗೇರ, ಪ್ರಭು ಪತ್ತಾರ,ಪುರಾಣ ಪ್ರವಚನಕಾರ ನಾಗಲಿಂಗ ಬಡಿಗೇರ, ದೇವಸ್ಥಾನ ಅರ್ಚಕ ಕಾಳಪ್ಪ ಬಡಿಗೇರ ಹಾಗೂ ಮಹಿಳೆಯರು ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ