ರೋಗಗ್ರಸ್ತ ಪಾಲಿಕೆ ಆಡಳಿತ: ನಗರವಾಸಿಗಳ ಬದುಕು ಜರ್ಜರಿತ

KannadaprabhaNewsNetwork |  
Published : Feb 06, 2026, 01:30 AM IST
ಫೋಟೋ- ಶೋಭಾ 1 ಮತ್ತು ಶೋಭಾ 2ಪಾಲಿಕೆ ವಿರೋಧ ಪಕ್ಷ ನಾಯಕಿ ಶೋಭಾ ದೇಸಾಯಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಪಾಲಿಕೆ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಕಾಂಗ್ರೆಸ್ಸಿಗರ ವಿರುದ್ದ ವಾಗ್ದಾಳಿ ನಡೆಸಿದರು. ಮಾಜಿ ಮೇಯರ್‌ ವಿಶಾಲ ಧರ್ಗಿ ಇದ್ದಾರೆ. | Kannada Prabha

ಸಾರಾಂಶ

Diseased municipal administration: Life of city dwellers is miserable

- ಎರಡು ದಿನದಲ್ಲಿ ಸ್ಪಂದಿಸದಿದ್ದಲ್ಲಿ ಪಾಲಿಕೆ ಕೇಂದ್ರ ಕಚೇರಿ, ಉಭಯ ಶಾಸಕರ ಮನೆಗಳಿಗೆ ಮುತ್ತಿಗೆ । ಶೋಭಾ ದೇಸಾಯಿ ಗಡುವು ನಿಗದಿ

----

ಕನ್ನಡಪ್ರಭ ವಾರ್ತೆ ಕಲಬುರಗಿ

ಮಹಾನಗರದ ಪಾಲಿಕೆ ಆಡಳಿತ ಬಿಗುವು ಕಳೆದುಕೊಂಡು ಇಲ್ಲಿನ ಆರ್ಥಿಕ ಪರಿಸ್ಥಿತಿ ರೋಗಗ್ರಸ್ತವಾಗಿದೆ. ತೆರಿಗೆ ಸಂಗ್ರಹಿಸೋರಿಲ್ಲ, ವಲಯ ಕಚೇರಿಗಳು ಪಾಳು ಬಿದ್ದಿವೆ, ಹೊಲಸು ಕುಡಿವ ನೀರು ಪೂರೈಕೆ, ಹದಗೆಟ್ಟ ರಸ್ತೆಗಳು ಇವೆಲ್ಲ ಸಮಸ್ಯೆಗಳಿಂದ ನಗರವಾಸಿಗಳ ಬದುಕು ಜರ್ಜರಿತವಾಗಿದೆ ಎಂದು ದೂರಿರುವ ಪಾಲಿಕೆ ವಿಪಕ್ಷ ಬಿಜೆಪಿ ಇನ್ನೆರಡು ದಿನದಲ್ಲಿ ತಾನು ಎತ್ತಿರುವ ಸಮಸ್ಯೆಗಳಿಗೆ ಪರಿಹಾರ, ಸ್ಪಂದನೆ ದೊರಕದೆ ಹೋದಲ್ಲಿ ಪಾಲಿಕೆ ಕೇಂದ್ರ ಕಚೇರಿ ಹಾಗೂ ಶಾಸಕ ಅಲ್ಲಂಪ್ರಭು, ಉತ್ತರ ಶಾಸಕಿ ಖನೀಜ್‌ ಫಾತೀಮಾ ಮನೆಗಳಿಗೆ ಮುತ್ತಿಗೆ ಹಾಕೋದಾಗ ಎಚ್ಚರಿಸಿದೆ.

ಪಾಲಿಕೆ ವಿರೋಧ ಪಕ್ಷ ನಾಯಕಿ ಶೋಭಾ ದೇಸಾಯಿ, ಮಾಜಿ ಮೇಯರ್‌ ವಿಶಾಲ ಧರ್ಗಿ, ಮಾಜಿ ಉಪ ಮೇಯರ್‌ ಶಿವಾನಂದ ಪಿಸ್ತಿ ಸೇರಿದಂತೆ ಪಾಲಿಕೆಯ ಬಿಜೆಪಿ ಸದಸ್ಯರು ಕೆಲವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಪಾಲಿಕೆಯ ಆಡಳಿತ ಅಧೋಗತಿ ತಲುಪಿದರೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆಯಾಗಲಿ, ನಗರ ಶಾಸಕರಾಗಲಿ ಕ್ಯಾರೆ ಎಂದಿಲ್ಲ. ಹೀಗಾಗಿ ನಗರ ಮೂಲ ಸವಲತ್ತು ಹರಿದು ಹೋಗಿದೆ ಎಂದು ಕಾಂಗ್ರೆಸ್‌ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ಪಾಲಿಕೆ ಆಯುಕ್ತರು ಕಳೆದ 2 ವಾರದಿಂದ ಪಾಲಿಕೆಗೇ ಬಂದಿಲ್ಲ. ಸಮಸ್ಯೆಗಳಿಗೂ ಸ್ಪಂದಿಸೋರಿಲ್ಲ. ಹಲವು ವಾರ್ಡ್‌ಗಳಲ್ಲಿ ನಿರ್ಮಿತಿ ಕೇಂದ್ರ, ಪಿಡಬ್ಲ್ಯೂಡಿಗಳಿಂದ ಅಲ್ಲಲ್ಲಿ ಕೆಲಸ ನಡೆಯುತ್ತಿದ್ದರೂ ಸದಸ್ಯರಿಗೆ ಮಾಹಿತಿ ಇಲ್ಲ. ವಿಪಕ್ಷ ಬಿಜೆಪಿ ಪಾಲಿಕೆ ಸದಸ್ಯರಿದ್ದ ವಾರ್ಡ್‌ಗಳಿಗೆ ಅನುದಾನ ನೀಡದೆ ಕಡೆಗಣಿಸಲಾಗುತ್ತಿದೆ ಎಂದು ಶಂಭುಲಿಂಗ ಬಳಬಟ್ಟಿ, ಶಂಕರ ಹಳ್ಳಿಖೇಡ, ಈರಣ್ಣ, ಫ್ರಭು ಹಾದೀಮನಿ ದೂರಿದರು. ನೀರಿನ ಹಾಹಾಕರ: ಕುಡಿವ ನೀರಿನ ಹಾಹಾಕಾರ ಉಂಟಾಗಿದ್ದು, ಪಾಲಿಕೆ ಆಡಳಿತ ಕುಸಿತವೇ ಇದಕ್ಕೆ ಕಾರಣ. ನೀರು ಸರಬರಾಜು ಘಟಕ ನಿರ್ವಹಿಸುವ ಏಜನ್ಸಿಗೆ ಕೊಡಲು ಹಣವಿಲ್ಲದ್ದರಿಂದ ಅವರು ಕೆಲಸ ನಿಲ್ಲಿಸಿದ್ದೇ ಶುದ್ಧೀಕರಣಕ್ಕೆ ಗ್ರಹಣ ಹಿಡಿದಿದೆ. ಹಾಹಾಕಾರ ಶುರುವಾದರೂ ಉಭಯ ಶಾಸಕರಾಗಲಿ, ಪಾಲಿಕೆ ಕಮೀಷನರ್‌ ಆಗಲಿ ಪರಹರಿಸುವ ಗೋಜಿಗೆ ಹೋಗಿಲ್ಲ ಎಂದು ಬಿಜೆಪಿ ಮುಖಂಡರು ದೂರಿದ್ದಾರೆ.

...ಬಾಕ್ಸ್....

ಘನತ್ಯಾಜ್ಯ ವಿಲೇವಾರಿಯಲ್ಲಿ ಬೆಂಕಿ!

ಹೊರ ವಲಯದ ಉದನೂರಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಬೆಂಕಿ ಪ್ರಸಂಗ ಕಾಡುತ್ತಿದ್ದರೂ ಕೇಳೋರಿಲ್ಲ. ವೈಜ್ಞಾನಿಕ ವಿಧಾನ ಅನುಸರಿಸದೆ ಘಟಕ ನಿರ್ಮಿಸಿದ್ದು, ಇದರಿಂದ ಜನತೆ ಆರೋಗ್ಯದ ಮೇಲೆ ಭಾರಿ ಕೆಟ್ಟ ಪರಿಣಾಮ ಬೀರುತ್ತಿದೆ. ಉಭಯ ಶಾಸಕರು, ಜಿಲ್ಲಾ ಸಚಿವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಶೋಭಾ ದೇಸಾಯಿ, ವಿಶಾಲ ಧರ್ಗಿ ದೂರಿದರು.

....ಬಾಕ್ಸ್‌.....

ಪಾಲಿಕೆ ಹಲವು ವಿಭಾಗಗಳಿಗೆ ಬೀಗ!ಭೂಸ್ವಾಧೀನ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದಂತೆ 300 ಕೋಟಿ ರು. ಪರಿಹಾರ ಭೂ ಮಾಲೀಕರಿಗೆ ನೀಡಬೇಕಿದ್ದರೂ ನೆನೆದುದಿಗೆ ಬಿದ್ದಿದೆ. ಹಲವು ಕೇಸ್‌ಗಳಲ್ಲಿ ಪಾಲಿಕೆಯ ಕಚೇರಿ ಸ್ವತ್ತು, ಆಸ್ತಿಪಾಸ್ತಿ ಮುಟ್ಟುಗೋಲಿಗೆ ಆದೇಶ ಬಂದಿವೆ. ಅನೇಕ ವಿಭಾಗಗಳ ಪೀಠೋಪಕರಣ, ಕಂಪ್ಯೂಟರ್‌, ಸಾಮಗ್ರಿಗಳು ಜಪ್ತಿಯಾಗಿ ಹಲವು ವಿಭಾಗ ಬೀಗ ಜಡಿಯಲ್ಪಟ್ಟಿದ್ದರೂ ಕೇಳೋರಿಲ್ಲ. ಇದು ನಾಚಿಕೆ ಗೇಡಿನ ವಿಚಾರವೆಂದು ಶೋಭಾ ದೇಸಾಯಿ ಪಾಲಿಕೆ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು.-----

...ಬಾಕ್ಸ್‌...

ಕಮೀಷನರ್‌ ಎಲ್ಲಿದ್ದಾರೆಂಬ ಮಾಹಿತಿಯೇ ಇಲ್ಲ!

ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಹೋದರೂ ಪಾಲಿಕೆಯ ಆಡಳಿತ ಮುಖ್ಯಸ್ಥ ಕಳೆದ 2 ವಾರದಿಂದ ಪಾಲಿಕೆಗೆ ಬಂದಿಲ್ಲ.

ಹೀಗಾಗಿ ಪಾಲಿಕೆ ಆಡಳಿತ ಅಧೋಗತಿ ತಲುಪಿದೆ. ಕಮೀಷನರ್‌ ಧೋರಣೆ ಪ್ರಶ್ನಿಸಿದ ಸೋಭಾ ದೇಸಾಯಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್‌, ನಗರಾಧ್ಯಕ್ಷ ಚಂದು ಪಾಟೀಲ್‌ ಸೇರಿ ಬಿಜೆಪಿ ಮುಖಂಡರೊಂದಿಗೆ ಶಾಸಕರ ಮನೆ, ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಬಿಸಿ ಮುಟ್ಟಿಸುತ್ತೇವೆಂದು ಹೇಳಿದ್ದಾರೆ.ಫೋಟೋ- ಶೋಭಾ 1 ಮತ್ತು ಶೋಭಾ 2

ಕಲಬುರಗಿ ಪಾಲಿಕೆ ವಿರೋಧ ಪಕ್ಷ ನಾಯಕಿ ಶೋಭಾ ದೇಸಾಯಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಕಾಂಗ್ರೆಸ್ಸಿಗರ ವಿರುದ್ಧ ವಾಗ್ದಾಳಿ ನಡೆಸಿದರು. ಮಾಜಿ ಮೇಯರ್‌ ವಿಶಾಲ ಧರ್ಗಿ ಇತರರು ಇದ್ದಾರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳ ಪ್ರತಿಷ್ಠೆಯಿಂದ ಗ್ರಾಮಗಳು ಸೊರಗುತ್ತಿವೆ: ಶಾಸಕಿ ಶಾರದಾ ಪೂರ್ಯಾನಾಯ್ಕ್
ಬಿಜೆಪಿ ಮಹಿಳಾ ಮೋರ್ಚಾಗೆ ಸ್ತ್ರೀ ಕಾಳಜಿ ಇಲ್ಲ: ದಿನೇಶ್‌ ಶೆಟ್ಟಿ