ಕನ್ನಡಪ್ರಭ ವಾರ್ತೆ ರಿಪ್ಪನ್ಪೇಟೆ
ತಮ್ಮ ಪೂರ್ವಿಕರು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವನ್ನು ಉಳಿಸಿ ಬೆಳಸಿಕೊಂಡು ಬಂದಿರುವ ಪದ್ಧತಿಗಳನ್ನು ನಮ್ಮ ಮುಂದಿನ ಪೀಳಿಗೆಯವರು ಆಚರಿಸುವಂತಾಗಲಿ ಎಂದು ಹೇಳಿದರು.ರೈತರ ಜಮೀನಿನ ಮತ್ತು ಊರಿನ ಗಡಿಯಂಚಿನಲ್ಲಿರುವ ಗ್ರಾಮದಲ್ಲಿನ ಶೀಲವಂತ ಚೌಡಿ, ಗಾಮನಬನ, ಗವಟೂರಿನ ಚಿಕ್ಕಬೀರಣಕೆರೆ ಬೂತಪ್ಪ, ಮಲ್ಲಾಪುರ ಗ್ರಾಮದ ಮರಬಿನಕುಣಿ ಬೂತಪ್ಪ, ವರನಹೊಂಡ ಬೂತರಾಯ, ರಣ ಯಕ್ಷಿಣಿ ಬೈರಾಪುರ, ಮುಡುಬ, ಬೆನವಳ್ಳಿ, ಲಕ್ಕವಳ್ಳಿ ಮಾದಾಪುರ, ಬೆಳಂದೂರು, ಮಸರೂರು, ತಮ್ಮಡಿಕೊಪ್ಪ, ಬಸವಾಪುರ ಹೆದ್ದಾರಿಪುರ, ಕೊಳವಳ್ಳಿ, ಕೋಟೆತಾರಿಗಾ.ಬೆಳ್ಳೂರು, ಹಾಲುಗುಡ್ಡೆ, ಮಾದ್ಲಾರದಿಂಬ, ನೇರಲುಮನೆ, ಕುಕ್ಕಳಲೇ, ಕೆದಲುಗುಡ್ಡೆ ಇನ್ನಿತರ ಗ್ರಾಮಗಳ ದೇವರುಗಳಿಗೆ ನೋನಿ ಸಂದರ್ಭದಲ್ಲಿ ಮನೆಗೆ ಒಬ್ಬರು ಇಬ್ಬರಂತೆ ತೆರಳಿ ಸ್ವಚ್ಚಗೊಳಿಸುತ್ತಾರೆ.
ತಳಿರು ತೋರಣಗಳೊಂದಿಗೆ ಬಾಳೆ ಕಬ್ಬಿನ ಸುಳಿಯನ್ನು ಕಟ್ಟಿ ಚಂಡುಹೂವಿನ ಮಾಲೆಯೊಂದಿಗೆ ಅಲಂಕರಿಸಿ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಹಣ್ಣು ಕಾಯಿ ಸಮರ್ಪಿಸಿ ಕೋಳಿ ಕುರಿಗಳೊಂದಿಗೆ ವರಹ(ಹಂದಿ)ಗಳನ್ನು ಬಲಿ ನೀಡುವುದು ಹಬ್ಬದ ಪದ್ದತಿಯಾಗಿದೆ.