ಕನ್ನಡಪ್ರಭ ವಾರ್ತೆ ಶಿರಾ
ಅವರು ಶಿರಾ ತಾಲೂಕು ಬುಕ್ಕಾಪಟ್ಟಣ ಗ್ರಾಮದ ಐದನೇ ಬ್ಲಾಕ್ ಸಂತೇದಿಬ್ಬ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯ ಹಾಗೂ ಪೌಷ್ಟಿಕ ಆಹಾರದ ಕೊರತೆಯಿಂದಾಗಿ ಮತ್ತು ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಗುಣಮಟ್ಟದ ಆಹಾರ ಎಲ್ಲರಿಗೂ ಸಿಗುತ್ತಿಲ್ಲ. ಅದರಲ್ಲಿಯೂ ಸಹ ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಅಮೃತ ಸಮಾನವಾದದು, ಅದರಿಂದ ಮಕ್ಕಳನ್ನು ವಂಚಿಸುವುದು ಮಹಾ ಪಾಪವೇ ಸರಿ, ಹುಟ್ಟಿದ ಮಗುವಿಗೆ ಆರು ತಿಂಗಳವರೆಗೆ ಕೇವಲ ತಾಯಿಯ ಎದೆ ಹಾಲನ್ನು ಕುಡಿಸಿ ಬೆಳೆಸಬೇಕು. ತಾಯಿಯ ಎದೆಹಾಲಿನಲ್ಲಿ ಸಿಗುವ ಪೌಷ್ಟಿಕಾಂಶ ಬೇರೆ ಯಾವುದೇ ರೀತಿಯ ಕೃತಕ ಆಹಾರಗಳಲ್ಲಿ ಸಿಗುವುದಿಲ್ಲ. ಮಕ್ಕಳ ಶ್ರೇಯೋಭಿಲಾಷಿಗಾಗಿ ಮಗುವಿನ ತಾಯಂದಿರು ನೆನೆಸಿದ ಕಾಳುಗಳನ್ನು ಹಣ್ಣು ಹಂಪಲುಗಳನ್ನು ಹಾಗೂ ಅಂಗನವಾಡಿಗಳಲ್ಲಿ ನೀಡುವ ಎಲ್ಲಾ ರೀತಿಯ ಪೌಷ್ಟಿಕಾಂಶಯುಕ್ತ ಆಹಾರ ವಸ್ತುಗಳನ್ನು ಸೇವಿಸುವ ಮೂಲಕ ಮಗುವಿನ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದು ತಿಳಿಸಿದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರಿಪ್ರಸಾದ್ ಸಿ ಅವರು ಮಾತನಾಡಿದರು. ಈ ವೇಳೆ ಶರಾವತಿ, ಕಮಲಮ್ಮ ಡಿಜಿ, ಯಶೋಧಾ, ಮುದ್ದಮ್ಮ,ಉಮೇಶ್ ಆರ್, ಅಂಗನವಾಡಿ ಕಾರ್ಯಕರ್ತೆಯರಾದ ಸುಧಾ ಜಿ, ಶಿಲ್ಪಾ, ಶೈಲಮ್ಮ, ಮಂಜುರುನ್ನೀಸಾ, ಮಂಗಳಗೌರಮ್ಮ, ಕವಿತಾ, ಗೀತಾ, ಸರೋಜಾ ಇತರರಿದ್ದರು.