ದೊಡ್ಡಬಳ್ಳಾಪುರ: ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಎಲ್ಲೆಡೆ ಮುಚ್ಚುತ್ತಿರುವ, ವಾಣಿಜ್ಯ ಸಂಕೀರ್ಣಗಳಾಗಿ ಪರಿವರ್ತನೆಯಾಗುತ್ತಿರುವ ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಹೆಸರಾಂತ ರಾಜ್ಕಮಲ್ ಚಿತ್ರಮಂದಿರ ನವೀಕರಣಗೊಂಡು ಅತ್ಯಾಧುನಿಕ ತಂತ್ರಜ್ಞಾನ, ವ್ಯವಸ್ಥೆಯೊಂದಿಗೆ ಚಿತ್ರರಸಿಕರಿಗೆ ಮುಕ್ತವಾಗಿದೆ.
ಪ್ಯಾನ್ ಇಂಡಿಯಾ ಪರಿಣಾಮ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬಾರದ ಸಂದರ್ಭ ಎದುರಾದುದರಿಂದ ಕಳೆದ 4 ವರ್ಷಗಳ ಹಿಂದೆ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು. ಕೊರೋನಾ ಸಂದಿಗ್ಥತೆಯಲ್ಲೂ ಅನೇಕ ಸವಾಲುಗಳು ಎದುರಾಗಿದ್ದವು. ಬಳಿಕ ಇದೀಗ ಚಿತ್ರಮಂದಿರ ಸುಸಜ್ಜಿತವಾಗಿ ನವೀಕರಣಗೊಂಡಿದ್ದು, ಚಿತ್ರರಸಿಕರನ್ನು ಸೆಳೆಯುತ್ತಿದೆ.
ಆಧುನಿಕ ಡಾಲ್ಬಿ ತಂತ್ರಜ್ಞಾನದ ಧ್ವನಿ ವ್ಯವಸ್ಥೆ ಸೇರಿದಂತೆ ಹೊಸ ಮಾದರಿಯ ಸೀಟಿಂಗ್ ಹಾಗೂ ಹವಾ ನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ.ಚಿತ್ರಮಂದಿರ ಮರು ಆರಂಭದ ಚಿತ್ರವಾಗಿ ಪ್ಯಾನ್ ಇಂಡಿಯಾದ ಗಮನ ಸೆಳೆದಿದ್ದ ಮಾರ್ಟೀನ್ ಬಿಡುಗಡೆಯಾಗಿತ್ತು. ಬಳಿಕ, ಶ್ರೀಮುರಳಿ ಅಭಿನಯದ ಬಘೀರ ಚಲನಚಿತ್ರ ಬಿಡುಗಡೆಗೊಂಡಿದ್ದು, ಆರಂಭದ ದಿನದಿಂದಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಕೆಲ ಪ್ರದರ್ಶನಗಳು ತುಂಬಿದ ಗೃಹದಲ್ಲಿ ಪ್ರದರ್ಶಿತವಾಗಿರುವುದು ವಿಶ್ವಾಸ ಮೂಡಿಸಿದೆ.
ಕೋಟ್.................
- ಕೆ.ಆರ್.ಉಮಾಶಂಕರ್, ರಾಜ್ಕಮಲ್ ಚಿತ್ರಮಂದಿರದ ಮುಖ್ಯಸ್ಥರು
(ಒಂದು ಫೋಟೋ ಮಾತ್ರ ಬಳಸಿ)4ಕೆಡಿಬಿಪಿ4- ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಪುನಾರಂಭಗೊಂಡ ದೊಡ್ಡಬಳ್ಳಾಪುರದ ರಾಜ್ಕಮಲ್ ಚಿತ್ರಮಂದಿರ.