ಚನ್ನಪಟ್ಟಣ: ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಗ್ರಾಮದಲ್ಲಿ ನಿರ್ಮಿಸುತ್ತಿರುವ ಬನ್ನಿಮಂಟಪ ಕಾಮಗಾರಿಗೆ ಸಂಸದ ಡಾ.ಮಂಜುನಾಥ್ ಹೆಸರಿನಲ್ಲಿ ೮೦ ಸಾವಿರ ರು. ದೇಣಿಗೆ ನೀಡಿದರು.
ಚನ್ನಪಟ್ಟಣ: ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಗ್ರಾಮದಲ್ಲಿ ನಿರ್ಮಿಸುತ್ತಿರುವ ಬನ್ನಿಮಂಟಪ ಕಾಮಗಾರಿಗೆ ಸಂಸದ ಡಾ.ಮಂಜುನಾಥ್ ಹೆಸರಿನಲ್ಲಿ ೮೦ ಸಾವಿರ ರು. ದೇಣಿಗೆ ನೀಡಿದರು.
ಗ್ರಾಮದಲ್ಲಿ ಪುರಾತನ ಬನ್ನಿಮಂಟಪದ ಜೀರ್ಣೋದ್ಧಾರ ಮಾಡಲು ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ೨ ಲಕ್ಷ ಹಣವನ್ನು ಸಂಸದರ ಹೆಸರಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ನೀಡುವ ಮೂಲಕ ಕಾರ್ಯಕರ್ತರು ಮಾದರಿ ನಡೆ ಅನುಸರಿಸಿದ್ದಾರೆ. ಗ್ರಾಮದ ಮೈತ್ರಿ ಪಕ್ಷದ ಮುಖಂಡರ ಈ ಕಾರ್ಯಕ್ಕೆ ಸಂಸದ ಡಾ.ಮಂಜುನಾಥ್ ಸಹ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಣವನ್ನು ಎರಡು ಪಕ್ಷದ ಮುಖಂಡರು ಕಾಮಗಾರಿ ಉಸ್ತುವಾರಿಗಳಿಗೆ ಹಸ್ತಾಂತರಿಸಿದರು.
ಈ ವೇಳೆ ತಾಪಂ ಮಾಜಿ ಅಧ್ಯಕ್ಷ ಬಿ.ನಾಗೇಶ್, ಮುಖಂಡರಾದ ಸೊಸೈಟಿ ರಾಜಣ್ಣ, ಅಭಿಲಾಷ, ಟಿ.ಕೆ.ಮುರಳಿ, ಟಿ.ಪಿ.ಪ್ರಕಾಶ್, ಟಿ.ಎಂ.ಅನಿಲ್, ಟಿ.ಸಿ.ಮೂರ್ತಿ, ಪುಟಾಣಿಗೌಡ, ಟಿ.ಎಸ್.ಮಹದೇವ್, ಚಂದ್ರೇಗೌಡ, ತೂತ್ತೂರಿ ರಮೇಶ್, ಹಾಲಿನ ದೊಡ್ಡಣ್ಣ, ಶಿವಲಿಂಗಯ್ಯ(ಜೂಲಿ), ಮಲ್ಲಿಕಾರ್ಜುನ್, ಗಾಡಿ ಕುಮಾರ್ ಇತರರಿದ್ದರು.
ಪೊಟೋ೧೦ಸಿಪಿಟಿ೩: ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಬನ್ನಿಮಂಟಪ ಜೀರ್ಣೋದ್ಧಾರ ಕಾಮಗಾರಿಗೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಂಸದರ ಹೆಸರಿನಲ್ಲಿ ದೇಣಿಗೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.