ಕನ್ನಡಪ್ರಭ ವಾರ್ತೆ ಸಕಲೇಶಪುರ
ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ವತಿಯಿಂದ ಪದ್ಮಭೂಷಣ ಡಾ.ಎಸ್. ಎಲ್ ಭೈರಪ್ಪ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ೧೧ನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮವನ್ನು ಕಾಫಿ ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿದ ನಂತರ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ಬಗ್ಗೆ ಬೆಂಗಳೂರಿನ ಉದ್ಯಮಿಗಳ ಕಣ್ಣುಬಿದ್ದಿದ್ದು ಹೆಚ್ಚು ಹಣದ ಆಮಿಷ ಒಡ್ಡಿ ಭೂಮಿ ಖರೀದಿಸುತ್ತಿದ್ದಾರೆ. ಇಂತಹ ಉದ್ಯಮಿಗಳ ಬಲೆಗೆ ಸಾಕಷ್ಟು ಬೆಳೆಗಾರರು ಬಲಿಯಾಗುತ್ತಿದ್ದಾರೆ. ಇದು ಉತ್ತಮ ಬೆಳೆವಣಿಗೆಯಲ್ಲ ಒಮ್ಮೆ ಕಳೆದುಕೊಂಡ ಭೂಮಿಯನ್ನು ಮತ್ತೊಮ್ಮೆ ಪಡೆಯಲು ಸಾಧ್ಯವಿಲ್ಲ. ಮಲೆನಾಡು ಸ್ವರ್ಗವಿದ್ದಂತೆಇಲ್ಲಿ ಬದುಕಿದ್ದವರು ಮತ್ತೊಂದೆಡೆ ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಲಿದೆ ಎಂದು ಅಭಿಪ್ರಾಯಿಸಿದರು.
ಕಾಫಿಗೆ ತನ್ನದೇ ಮಾರುಕಟ್ಟೆ ಇದ್ದು ಕೊಳ್ಳುವುದರಿಂದ ಮಾತ್ರ ಮಾರುಕಟ್ಟೆಗೆ ಅಂತಾರಾಷ್ಟ್ರೀಯ ಅವಲಂಬನೆಯನ್ನು ತಪ್ಪಿಸಿಕೊಳ್ಳಬಹುದಾಗಿದೆ. ಸ್ವಂತ ಮಾರುಕಟ್ಟೆ ಇದ್ದರೆ ಮಾತ್ರ ಯಾವುದೇ ಬೆಳೆಯನ್ನು ನಿರಾಂತಕವಾಗಿ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬಹುದು. ನೆರಳಿನಾಶ್ರಯದಲ್ಲಿ ಬೆಳೆಯುವ ಕರ್ನಾಟಕದ ಕಾಫಿ ಸರ್ವಶ್ರೇಷ್ಠ ಎಂಬ ಹೆಸರು ಪಡೆದಿದೆ. ಆದ್ದರಿಂದ ಗುಣಮಟ್ಟದ ಕಾಫಿ ಬೆಳೆಯಲು ಹೆಚ್ಚಿನ ಆದ್ಯತೆ ನೀಡಿ ಎಂದರು. ಜಗತ್ತಿನ ಸರ್ವಶ್ರೇಷ್ಠ ಭಾಷೆಗಳಲ್ಲಿ ಕನ್ನಡ ಒಂದಾಗಿದ್ದು ಬರೆಯುವ, ಒದುವ ಮಾತನಾಡುವ ಶಕ್ತಿ ಕನ್ನಡಕ್ಕಿದೆ. ಆದ್ದರಿಂದ ಕನ್ನಡವನ್ನು ಎಂದಿಗೂ ಮರೆಯದಿರಿ ಎಂದರು. ಮಕ್ಕಳಿಗೆ ಮೊಬೈಲ್ ನೀಡದಿರಿ, ಪುಸ್ತಕ ಓದುವುದರಿಂದ ಮಾತ್ರ ಜ್ಞಾನಾರ್ಜನೆ ಹೆಚ್ಚಲಿದೆ. ಇದನ್ನು ಪೋಷಕರು ಮೊದಲು ಆರಂಭಿಸಬೇಕು ಎಂದರು.ಶಾಸಕ ಸಿಮೆಂಟ್ ಮಂಜು ಮಾತನಾಡಿ, ಸಮಸ್ಯೆಗಳ ನಡುವೆಯು ಬದುಕು ಕಟ್ಟಿಕೊಂಡಿರುವ ಕಾಫಿ ಬೆಳೆಗಾರರು ಸಾಹಸಿಗಳು ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಕಾಡಾನೆ, ಕಾಟಿ, ಸಮಸ್ಯೆ, ಅರಣ್ಯ ಸಮಸ್ಯೆ ಅತಿಯಾಗಿದೆ. ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರ ಅಧ್ಯಯನ ನಡೆಸಿ ಯೋಜನೆ ರೂಪಿಸಬೇಕು. ಈ ಬಾರಿ ಕಳೆದ ಐದು ತಿಂಗಳಿನಿಂದ ಮಳೆಯಾಗುತ್ತಿದ್ದು ಇದರಿಂದ ಶೇ. ೫೦ರಷ್ಟುಕಾಫಿ ಬೆಳೆ ನೆಲಸೇರಿದೆ. ಆದ್ದರಿಂದ ಮುಖ್ಯಮಂತ್ರಿಗಳು ಕಾಫಿ ಬೆಳೆಗಾರರಿಗೆ ಬೆಳೆಪರಿಹಾರ ಬಿಡುಗಡೆ ಮಾಡಬೇಕು. ಆದರೆ, ಮಲೆನಾಡಿಗರು ತಮ್ಮ ಕಷ್ಟವನ್ನುತೋರ್ಪಡಿಸದಿರುವುದೇ ಒಂದು ಸಮಸ್ಯೆಯಾಗಿದೆ ಎಂದರು.
ಬಿಬಿಎಂಪಿ ವೈದ್ಯಾಧಿಕಾರಿ ಡಾ. ಸುಪುತ್ರ ಗೌಡ ಮಾತನಾಡಿ, ನಿತ್ಯ ಮೂರು ಕಪ್ ಕುಡಿಯುವುದರಿಂದ ಶೇ. ೧೮ರಷ್ಟು ಹೃದಯಾಘಾತ ತಪ್ಪಿಸಬಹುದಾಗಿದೆ. ಅಲ್ಲದೆ, ದೇಹಕ್ಕೆಕಾಫಿ ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂಬದನ್ನು ಅಂತಾರಾಷ್ಟ್ರೀಯ ಸಂಶೋಧನೆ ಹೊರಹಾಕಿದೆ ಎಂದರು.