ಕನ್ನಡಪ್ರಭ ವಾರ್ತೆ ಪಾಂಡವಪುರ
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಪಿಎಸ್ಎಸ್ ಕೆ ಸಂಸ್ಥಾಪಕರೂ, ಮಾಜಿ ಶಾಸಕರಾದ ದಿ.ಬಿ.ವೈ.ನೀಲೇಗೌಡರ ಬಹಳ ಅರ್ಥಪೂರ್ಣ ಜನ್ಮದಿನಾಚರಣೆಯಲ್ಲಿ ನೀಲೇಗೌಡರನ್ನು ಕುರಿತು ಉಪನ್ಯಾಸ ನೀಡಿದರು.
ಮೂಲತಃ ಪಾಂಡವಪುರ ತಾಲೂಕಿನ ಹಳೆಸಾಯಪ್ಪನಹಳ್ಳಿಯ ಬಿ.ವೈ.ನೀಲೇಗೌಡರು ಪಾಂಡವಪುರ ಉಪವಿಭಾಗದ ಕಣ್ಮಣಿಯಾಗಿದ್ದಾರೆ. ಪಾಂಡವಪುರದ ಮೊದಲ ಚುನಾಯಿತ ಶಾಸಕರಾಗಿ ಎರಡು ಅವಧಿಗೆ 10 ವರ್ಷಗಳ ಕಾಲ ಕ್ಷೇತ್ರಕ್ಕೆ ದುಡಿದಿದ್ದರು ಎಂದರು.ಶಿಕ್ಷಣ, ರಸ್ತೆ ಅಭಿವೃದ್ಧಿ, ನೀರಾವರಿ ಮುಂತಾದ ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿದ್ದಾರೆ. ಚಿನಕುರಳಿ ಗ್ರಾಮದ ಶ್ರೀರಾಮೇಶ್ವರ ಪ್ರೌಢಶಾಲೆ, ವಿಶ್ವೇಶ್ವರ ನಗರದ ಪಿ.ಎಸ್.ಎಸ್. ಕೆ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯನ್ನು ಸ್ಥಾಪಿಸಿ ಅನುದಾನವನ್ನು ಸರ್ಕಾರದಿಂದ ಕೊಡಿಸಿದ್ದಾರೆ ಎಂದು ಹೇಳಿದರು.
ನೀಲೇಗೌಡರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು. ಇವರ ಹೆಸರು ಯುವ ಜನತೆಗೆ ಪರಿಚಯವಾಗಬೇಕು. ಆದ್ದರಿಂದ ರೈಲ್ವೆ ನಿಲ್ದಾಣದ ಬಳಿ ಇರುವ ವೃತ್ತಕ್ಕೆ ''''ದಿ.ಬಿ.ವೈ.ನೀಲೇಗೌಡ ವೃತ್ತ'''' ಎಂದು ನಾಮಕರಣ ಮಾಡಬೇಕಾಗಿರುವುದಾಗಿ ಅಭಿಪ್ರಾಯಪಟ್ಟರು.
ಟ್ರಸ್ಟ್ ಗೌರವಾಧ್ಯಕ್ಷರಾದ ಎಸ್. ಮಲ್ಲಿಕಾರ್ಜುನಗೌಡರು ಟ್ರಸ್ಟ್ ವತಿಯಿಂದ ದತ್ತಿ ನಿಧಿ ಸ್ಥಾಪಿಸಿ ಗಣ್ಯರ ಜನ್ಮ ದಿನ ಕಾರ್ಯಕ್ರಮಗಳನ್ನು ಆಚರಿಸಬೇಕೆಂದು ಅಭಿಪ್ರಾಯಪಟ್ಟರು.
ಟ್ರಸ್ಟ್ ರಾಜ್ಯಾಧ್ಯಕ್ಷ ಡಿ.ರವಿಕುಮಾರ್ ಮಾತನಾಡಿ, ದಿ.ಬಿ.ವೈ.ನೀಲೇಗೌಡರರ ದೂರ ದೃಷ್ಟಿಯಿಂದ ಪಿಎಸ್ ಎಸ್ ಕೆ ನಿರ್ಮಾಣವಾಗಿ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ರೈತರ ಬದುಕಿಗೆ ಹೊಸಬೆಳಕನ್ನು ನೀಡಿದ ಮಹಾನ್ ಚೇತನ. ನೀಲೇಗೌಡರ ಸಾಧನೆ ಬಗ್ಗೆ ಜೀವನ ಚರಿತ್ರೆ ಪುಸ್ತಕವನ್ನು ಹೊರತರಬೇಕು ಎಂದು ಹೇಳಿದರು.ತಾಲೂಕು ಟ್ರಸ್ಟ್ ಗೆ ರೂಮ್ ಉಚಿತವಾಗಿ ನೀಡಿದ ವೆಂಕಟೇಶ್ವರ ಕಾಂಪ್ಲೆಕ್ಸ್ ಮಾಲೀಕ ಲಾರಿ ವೆಂಕಟೇಶ್ ಅವರನ್ನು ಗೌರವಿಸಲಾಯಿತು. ಇಂಗಲಗುಪ್ಪೆ ಗ್ರಾಮದ ಲಯನ್ ಇ.ಎಸ್ ನಾಗರಾಜ್ ದಿ.ಬಿ.ವೈ.ನೀಲೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.