ಧಾರವಾಡ:
ಕರ್ನಾಟಕ ವಿದ್ಯಾವರ್ಧಕ ಸಂಘವು ಹುಬ್ಬಳ್ಳಿಯ ಪತ್ರಕರ್ತ ನಗರದ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ `ಮಾದಕ ವಸ್ತುಗಳು ದುರ್ವ್ಯಸನ ತಡೆಗಟ್ಟುವಲ್ಲಿ ಯುವ ವಿದ್ಯಾರ್ಥಿಗಳ ಪಾತ್ರ’ ಕುರಿತು ಮಾತನಾಡಿದ ಅವರು, ಭಾರತದಲ್ಲಿ ಸುಮಾರು ಆರು ಕೋಟಿ ಜನರು ಈ ವ್ಯಸನಕ್ಕೆ ಬಲಿಯಾಗಿದ್ದಾರೆ. ಪಂಜಾಬ್ ಹಾಗೂ ಮಣಿಪುರ ರಾಜ್ಯಗಳಲ್ಲಿ ಅತೀ ಹೆಚ್ಚು ಮಾದಕ ವಸ್ತು ಸೇವನೆ ವ್ಯಸನಿಗಳಿದ್ದಾರೆ. ಈ ಸೇವನೆ ಪ್ರಾರಂಭದಲ್ಲಿ ಖುಷಿ ಎನಿಸಿದರೂ ಜೀವನ ಪೂರ್ತಿ ಕೊರಗುವಂತೆ ಮಾಡುತ್ತದೆ ಎಂದರು.
ಮೆದುಳು, ಜೀರ್ಣಕ್ರಿಯೆ, ನರಮಂಡಲವನ್ನು ಹಾಳು ಮಾಡುತ್ತದೆ. ಇದರ ಸೇವನೆಯಿಂದ ಅನೇಕ ಅಪರಾಧ ಕೃತ್ಯ, ಅಪಘಾತ ಸಂಭವಿಸುತ್ತವೆ. ಪರಕೀಯ ಪ್ರಜ್ಞೆ ಹಾಗೂ ಸಮ ವಯಸ್ಕರ ಸಹವಾಸ ದೋಷದಿಂದ ಯುವಕರು ದುರ್ವ್ಯಸನಿಗಳಾಗುತ್ತಿದ್ದಾರೆ. ಒಳ್ಳೆಯ ಯುವಕರ ಸಹವಾಸದೊಂದಿಗೆ ವಿದ್ಯಾರ್ಥಿಗಳು ಆರೋಗ್ಯದ ಕಡೆ ಗಮನ ಕೊಡಬೇಕೆಂದು ಹೇಳಿದರು.ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವಿದ್ಯಾರ್ಥಿಗಳು ಈ ನಾಡಿನ ಜೀವಂತ ಆಸ್ತಿ. ಓದುವ ಸಮಯದಲ್ಲಿ ಕೆಟ್ಟ ಹವ್ಯಾಸಗಳಿಗೆ ಬಲಿಯಾಗಬಾರದು. ತಂದೆ-ತಾಯಿ ಏನೆಲ್ಲ ಕಷ್ಟಪಡುತ್ತಿದ್ದಾರೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.