ದಸರಾ ವೈಭವ: ಕಿಕ್ಕೇರಮ್ಮನ ಆಯುಧಗಳ ಮೆರವಣಿಗೆ

KannadaprabhaNewsNetwork |  
Published : Oct 13, 2024, 01:03 AM IST
12ಕೆಎಂಎನ್ ಡಿ20 | Kannada Prabha

ಸಾರಾಂಶ

ಪಟ್ಟಣದ ಹೊರವಲಯದ ದೇವಿ ಗುಡಿಯಿಂದ ತೊಟ್ಟಿಲಿನಲ್ಲಿ ಅಮ್ಮನವರ ಆಯುಧಗಳಾದ ಕುದುರೆ ವಾಹನ, ಕತ್ತಿ, ಗುರಾಣಿ ಮತ್ತಿತರ ಅಸ್ತ್ರಗಳನ್ನು ಇಡಲಾಯಿತು.

ಕಿಕ್ಕೇರಿ: ಲಕ್ಷ್ಮೀಪುರ ಹಾಗೂ ಕಿಕ್ಕೇರಿಯ ಗ್ರಾಮದೇವತೆ ಕಿಕ್ಕೇರಮ್ಮನವರ ಶಸ್ತ್ರಾಸ್ತ್ರಗಳನ್ನು ಮೆರವಣಿಗೆ ಮೂಲಕ ಆಯುಧಪೂಜೆಯ ಹಬ್ಬವನ್ನು ಆಚರಿಸಲಾಯಿತು. ಪಟ್ಟಣದ ಹೊರವಲಯದ ದೇವಿ ಗುಡಿಯಿಂದ ತೊಟ್ಟಿಲಿನಲ್ಲಿ ಅಮ್ಮನವರ ಆಯುಧಗಳಾದ ಕುದುರೆ ವಾಹನ, ಕತ್ತಿ, ಗುರಾಣಿ ಮತ್ತಿತರ ಅಸ್ತ್ರಗಳನ್ನು ಇಡಲಾಯಿತು. ಅರ್ಚಕರು ಆಯುಧಗಳಿಗೆ ಪೂಜಿಸಿ ಗುಡಿಯ ಸುತ್ತ ಮೂರು ಪ್ರದಕ್ಷಿಣೆ ಹಾಕಿದರು. ನಂತರ ದೇವಿ ತೊಟ್ಟಿಲಿನ ಮೆರವಣಿಗೆ ಮಂಗಳವಾದ್ಯದೊಂದಿಗೆ ಸಾಗಿತು. ಹೊಸಬೀದಿ, ರಥಬೀದಿ, ಕೆ.ಎಸ್. ನರಸಿಂಹಸ್ವಾಮಿ ಬೀದಿ, ಸುಬ್ಬರಾಯರ ಛತ್ರದ ಬೀದಿ, ಬ್ರಹ್ಮೇಶ್ವರ ಬೀದಿಯಲ್ಲಿ ದೇವಿಯ ಆಯುಧಗಳ ಮೆರವಣಿಗೆ ಸಾಗಿ ಅಂತಿಮವಾಗಿ ಮೂಲಗುಡಿಗೆ ಸಾಗಿತು. ಭಕ್ತರು ದೇವಿ ಆಯುಧಗಳಿಗೆ ಭಕ್ತಿಯಿಂದ ನಮಿಸಿ ಪುಷ್ಪ ಪ್ರಸಾದವನ್ನು ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಕ್ಷಗಾನ ಕಲೆಗೆ ಇರುವಷ್ಟು ಶಕ್ತಿ ಇನ್ನು ಯಾವ ಕಲೆಗೂ ಇಲ್ಲ: ಡಾ.ಪ್ರಭಾಕರ ಜೋಶಿ
ಲೋಕಸಭೆಯಲ್ಲಿ ದ.ಕ. ಅಭಿವೃದ್ಧಿ ಪರ ಧ್ವನಿಯೆತ್ತಿದ ಸಂಸದ ಕ್ಯಾ. ಚೌಟ