ಸಂಗನಾಳ ಗ್ರಾಪಂ ಅಧ್ಯಕ್ಷರಾಗಿ ಈಶಪ್ಪ ಕೋಳುರು ಆಯ್ಕೆ

KannadaprabhaNewsNetwork |  
Published : Jul 19, 2024, 12:54 AM IST
೧೮ವೈಎಲ್‌ಬಿ೧:ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಈಶಪ್ಪ ಕೋಳುರು ಅವರನ್ನು ಹಾಗೂ, ಉಪಾಧ್ಯಕ್ಷೆ, ಸರ್ವ ಸದಸ್ಯರನ್ನು ಸನ್ಮಾನಿಸಲಾಯಿತು | Kannada Prabha

ಸಾರಾಂಶ

ತಾಲೂಕಿನ ಸಂಗನಾಳ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ತಾಲೂಕಿನ ಸಂಗನಾಳ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.

ಈ ಹಿಂದೆ ಅಧ್ಯಕ್ಷರಾಗಿದ್ದ ಮಾಳಮ್ಮ ಶರಣಪ್ಪ ಕಟ್ಟೆಪ್ಪನವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಸಾಮಾನ್ಯ ಸ್ಥಾನ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಈಶಪ್ಪ ಕೋಳುರು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಲ್ಲಪ್ಪ ಕಿನ್ನಾಳ ನಾಮಪತ್ರ ಸಲ್ಲಿಸಿದ್ದರು. ಇಬ್ಬರ ನಾಮಪತ್ರ ಕ್ರಮಬದ್ಧವಾಗಿದ್ದರಿಂದ ಚುನಾವಣೆ ನಡೆಯಿತು.

ಈಶಪ್ಪ ಕೋಳುರವರು 5 ಮತ ಪಡೆದರೆ ಮಲ್ಲಪ್ಪ ಕಿನ್ನಾಳ ಕೇವಲ ಮೂರು ಮತ ಪಡೆದುಕೊಂಡರು. ಹೆಚ್ಚು ಮತಗಳನ್ನು ಪಡೆದ ಈಶಪ್ಪ ಕೋಳುರ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ ಬಸವರಾಜ ತೆನ್ನಳ್ಳಿ ಕಾರ್ಯನಿರ್ವಹಿಸಿದರು. ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ಚುನಾವಣಾ ವಿಷಯ ನಿರ್ವಾಹಕ ಸಮೀರಕುಮಾರ, ಗ್ರಾಮಾಡಳಿತಾಧಿಕಾರಿ ಬಸವನಗೌಡ ರಾಮಶೆಟ್ಟಿ ಚುನಾವಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಈಶಪ್ಪ ಕೋಳುರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಬೆಂಗಲಿಗರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಅಟಮಾಳಗಿ, ಗ್ರಾಪಂ ಉಪಾಧ್ಯಕ್ಷೆ ಗಿರಿಜಾ ಸಿದ್ದರಡ್ಡಿ, ಸದಸ್ಯರಾದ ಬಸವ್ವ ವಾಲ್ಮೀಕಿ, ಮಲ್ಲಪ್ಪ ಜಂಬಣ್ಣನವರ, ಫರೀದಾಬೇಗಂ ಬೆಟಗೇರಿ, ದುರಗಪ್ಪ ನಡೂಲಕೇರಿ, ಮುಖಂಡರಾದ ಷಣ್ಮುಖಪ್ಪ ಯರಂಗಳಿ, ಭೀಮಪ್ಪ ಇಟಗಿ, ಸಂಗಯ್ಯ ಹಿರೇಮಠ, ಈಶಪ್ಪ ಸಿದ್ದರಡ್ಡಿ, ಕಲ್ಲಪ್ಪ ಸಿದ್ನೇಕೊಪ್ಪ, ಬಸಯ್ಯ ಸಾಲಿಮಠ, ರಾಜಣ್ಣ ತೋಟಗಂಟಿ, ಶೇಖರಪ್ಪ ಗುರಾಣಿ, ಹನುಮಂತ ಬಂಡಿಹಾಳ, ಅಡಿವೆಪ್ಪ ಲಕ್ಕಲಕಟ್ಟಿ, ಹನುಮಂತ ನಡೂಲಕೇರಿ, ಶರಣಪ್ಪ ಕಟ್ಟೆಪ್ಪನವರ, ಶಿವಲಿಂಗಪ್ಪ ಕೋಳುರು, ಶಿವಪ್ಪ ಗದ್ದಿ, ಬಸವಂತಪ್ಪ ಗಡಾದ, ಹುಚ್ಚೀರಪ್ಪ ತುಮ್ಮರಗುದ್ದಿ, ಲಿಂಗಾರಡ್ಡಿ ಸೋಂಪುರ, ಮುತ್ತಪ್ಪ ಬಡಿಗೇರ, ಮೆಹಬೂಬಸಾಬ ಬೆಟಗೇರಿ, ಬಸವರಾಜ ನಡೂಲಕೇರಿ, ಸುರೇಶ ಬಡಪ್ಪನವರ, ಪರಶುರಾಮ, ಹನುಮಂತ ಸಂಗನಾಳ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ