ಆರೋಗ್ಯಕರ ಆಹಾರ, ಪಾನಿಯ ಸೇವಿಸಿ

KannadaprabhaNewsNetwork |  
Published : Nov 18, 2025, 12:02 AM IST
್ಿ್ಿ್ಿ | Kannada Prabha

ಸಾರಾಂಶ

ಅಪಾಯಕಾರಿ ಪಾನಿಯಗಳ ಬದಲು ರೋಗ ನಿರೋಧಕ ನೀರಾ ಸೇವನೆ ಮಾಡಿ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಲಹೆ ಮಾಡಿದರು.

ಕನ್ನಡಪ್ರಭ ವಾರ್ತೆ, ತುಮಕೂರುಆರೋಗ್ಯ ಕಾಪಾಡಿಕೊಳ್ಳುವ ಇಂದಿನ ಸವಾಲಿನಲ್ಲಿ ಆರೋಗ್ಯಕರ ಆಹಾರ, ಪಾನಿಯ ಆಯ್ಕೆ ಮಾಡಿ ಸೇವನೆ ಮಾಡುವುದೂ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಪಾಯಕಾರಿ ಪಾನಿಯಗಳ ಬದಲು ರೋಗ ನಿರೋಧಕ ನೀರಾ ಸೇವನೆ ಮಾಡಿ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಲಹೆ ಮಾಡಿದರು.

ನಗರದ ಅಮಾನಿಕೆರೆ ಬಳಿ ಸೋಮವಾರ ನೀರಾ ಸಿಪ್ ಕೌಂಟರ್‌ ಉದ್ಘಾಟನೆ ಮಾಡಿದ ಶಾಸಕರು, ಇತ್ತೀಚಿನ ಪ್ಯಾಕ್ಡ್ ಫುಡ್‌ನಲ್ಲಿ ಕ್ಯಾನ್ಸರ್‌ ಕಾರದ ಅಂಶಗಳಿರುವುದು ಕಂಡುಬಂದಿದೆ.ಆಹಾರದಲ್ಲಿ ಆರೋಗ್ಯ ಮಾರಕ ಟೇಸ್ಟಿಂಗ್ ಪೌಡರ್ ಬಳಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯಕರ ಆಹಾರ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ ಎಂದರು.ನೈಸರ್ಗಿಕ ಉತ್ಪನ್ನವಾದ ಪಾನಿಯಗಳನ್ನು ಪ್ರೋತ್ಸಾಹಿಸಬೇಕು. ರೋಗನಿರೋಧಕ, ಆರೋಗ್ಯವರ್ಧಕ ಪಾನಿಯಾಗಿರುವ ನೀರಾವನ್ನು ಸಾರ್ವಜನಿಕರು ಸೇವನೆ ಮಾಡಿದರೆ ರೈತರಿಗೂ ಅನುಕೂಲ, ಆರೋಗ್ಯಕ್ಕೂ ಸಹಕಾರಿಎಂದುಜ್ಯೋತಿ ಗಣೇಶ್ ಹೇಳಿದರು.ಆರ್ಯ ಈಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ ಮಾತನಾಡಿ, ನೀರಾ ಸೇವನೆಯಿಂದ ಕ್ಯಾನ್ಸರ್‌ತಡೆ , ಚರ್ಮದ ಆರೋಗ್ಯ ವರ್ಧನೆ , ಕಿಡ್ನಿ ಸಮಸ್ಯೆಗಳಿಗೆ ಪರಿಹಾರ, ರಕ್ತಹೀನತೆ ನಿವಾರಣೆ, ಕಣ್ಣಿನ ಆರೋಗ್ಯ ವೃದ್ಧಿ ಮುಂತಾದ ಹಲವಾರುರೀತಿಯಲ್ಲಿ ಆರೋಗ್ಯವರ್ಧನೆಗೆ ಸಹಕಾರಿಯಾಗಿದೆ ಎಂದು ಹೇಳಿದರು.ನೀರಾಸಿಪ್ ವಿತರಕರಾದ ಸುರಭಿ ಮೋಹನ್‌ಬಾಬು ಮಾತನಾಡಿದರು. ಜಿಲ್ಲಾ ಆರ್ಯಈಡಿಗರ ಸಂಘದ ಅಧ್ಯಕ್ಷ ಎಂ.ನಾಗರಾಜು, ಮಲ್ಲಸಂದ್ರ ಶಿವಣ್ಣ, ಕಾ ಸುರಭಿ ನಾಗರಾಜು, ಎಂ.ಕುಮಾರ್, ಓ.ಎಲ್.ಪುರುಷೋತ್ತಮ್, ನಾರಾಯಣ್, ಸೈದಪ್ಪಗುತ್ತೇದಾರ್, ರಾಮಕೃಷ್ಣಪ್ಪ, ಟಿ.ಎಚ್.ವಾಸುದೇವ್, ಟಿ.ಎಚ್.ಬಾಲಕೃಷ್ಣ, ರಾಜ್ಯಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್, ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾಅಧ್ಯಕ್ಷ ಕೆ.ವೇದಮೂರ್ತಿ, ಕೃಷ್ಣಮೂರ್ತಿ, ಮಾಧವನ್, ರಾಜನ್, ನಟರಾಜ್,ಶ್ರೀನಿವಾಸ್ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ