ಕನ್ನಡಪ್ರಭ ವಾರ್ತೆ ಮುದಗಲ್
ಮುದಗಲ್ ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸ್ಥಳೀಯ ಸಮಾಜ ಬಾಂಧವರು ಹಮ್ಮಿ ಕೊಂಡ ನೂತನ ಜಿಲ್ಲಾ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿದರೆ ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದೆ. ವಿದ್ಯಾವಂತ ಯುವಕರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಉದ್ಯೋತವಂತರಾಗಿ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಉತ್ತಮ ಸಂಸ್ಕಾರ, ಸಂಸ್ಕೃತಿ, ಶಿಕ್ಷಣದ ಜೊತೆಗೆ ಸಮಾಜದ ಸಂಘಟನೆಗೆ ಎಲ್ಲರೂ ಆದ್ಯತೆ ನೀಡೋಣ ಎಂದರು.
ಜಿಲ್ಲಾ ಗೌರವಾದ್ಯಕ್ಷ ಮಾಬಳೇಶ ಬಳಗಾನೂರ, ಬಿಜೆಪಿ ಮುದಗಲ್ ಘಟಕಾದ್ಯಕ್ಷ ಸಣ್ಣಸಿದ್ದಯ್ಯ ಮಾತನಾಡಿದರು.ಜಿಲ್ಲಾ ಉಪಾಧ್ಯಕ್ಷ ಸಿದ್ಪ ಸಿರವಾರ, ಪ್ರಧಾನ ಕಾರ್ಯದರ್ಶಿ ಅಮರೇಶ ಚಿಲಕ್ರಾಗಿ, ಕಾರ್ಯದರ್ಶಿ ಶರಣಪ್ಪ ಮುಳ್ಳೂರ, ಖಜಾಂಚಿ ಹಪ್ಪನ್ನ ಮಾನವಿ, ಮುದಗಲ್ ಘಟಕಾಧ್ಯಕ್ಷ ಗುಂಡಪ್ಪ, ಪುರಸಭೆ ಸದಸ್ಯ ಶ್ರೀಕಾಂತ ಗೌಡ ಪಾಟೀಲ್ ಹನುಮಂತ ಜಕ್ಕೆರಮಡು, ವಿಶ್ವನಾಥ ದೇಸಾಯಿ ಶಿವಣ್ಣ ಖೈರವಾಡಗಿ, ಅಮರೇಶ ಮಟ್ಟೂರ, ಸೇರಿದಂತೆ ಮುಂತಾದವರಿದ್ದರು.