ಕುಕನೂರು: ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳ ಕಾಳಜಿ ವಹಿಸಿ ಶೈಕ್ಷಣಿಕ ಆಶಯ ಈಡೇರಿಸಬೇಕು ಎಂದು ಆದರ್ಶ ವಿದ್ಯಾಲಯದ ಪ್ರಾಚಾರ್ಯ ರಾಮರಡ್ದೆಪ್ಪ ಹಾಲಕೇರಿ ಹೇಳಿದರು.
ಮಗು ಯಾವ ವಿಷಯದಲ್ಲಿ ಕುಂಠಿತವಾಗಿದ್ದಾರೋ, ಆ ವಿಷಯದ ಶಿಕ್ಷಕರನ್ನು ಸಂಪರ್ಕಿಸಿ ಅವರೊಂದಿಗೆ ಸಮಾಲೋಚಿಸಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಬಹುದು. ತರಗತಿಯ ಎಲ್ಲ ಮಕ್ಕಳ ಪಾಲಕರು ಕಾರ್ಯಕ್ರಮಕ್ಕೆ ಬಂದು ಮಕ್ಕಳ ಶೈಕ್ಷಣಿಕ ಗುಣಮಟ್ಟ, ಎಲ್ಲ ಶಿಕ್ಷಕರ ಹಾಗೂ ಶಾಲೆಯ ಸಂಪರ್ಕ ಸಾಧನವಾಗುತ್ತದೆ. ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಿದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಹೆಚ್ಚಿಸಲು, ಸರ್ಕಾರದ ಆದೇಶದಂತೆ ಪ್ರತಿ ಎರಡು ತಿಂಗಳಿಗೊಮ್ಮೆ ಪಾಲಕರ ಹಾಗೂ ಶಿಕ್ಷಕರ ಮಹಾಸಭೆ ನಡೆಯಲಿದೆ ಎಂದರು.
ಎಸ್ ಡಿಎಂಸಿ ಅಧ್ಯಕ್ಷ ಕಳಕನಗೌಡ ಸಾದರ, ಪದಾಧಿಕಾರಿಗಳಾದ ಗವಿಸಿದ್ದಪ್ಪ ಗುಳಗಣ್ಣನವರ್, ಗೀತಾ ಸಜ್ಜನ್, ಶೈಲಜಾ ಹತ್ತಿಕಟಗಿ, ಶಾಲಾ ಶಿಕ್ಷಕ ಜಗದೀಶ ಅಜ್ಜಣ್ಣನವರ್, ರಂಗಪ್ಪ ಓಳೇಕರ್, ಜಯಪ್ಪ ಕನಕಮ್ಮನವರ್, ಬಸಮ್ಮ ಮೇಟಿ, ಶರಣಪ್ಪ ಬೊಮಳೇಕರ್, ಶ್ರೀಶೈಲಪ್ಪ, ರೋಹಿಣಿ, ಸಂತೋಷ ಕುಮಾರ, ಶ್ರೀದೇವಿ ಬೆಳದಡಿ, ಮುರಾರಿ ಭಜಂತ್ರಿ, ರಮೇಶ ಕೆ.ಟಿ, ಶಾಲಾ ಸಿಬ್ಬಂದಿ ವರ್ಗ, ಎಸ್ ಡಿ ಎಂ ಸಿ ಪದಾಧಿಕಾರಿಗಳು, ಪಾಲಕರಿದ್ದರು.