ಅದ್ದೂರಿ ಚನ್ನಮಲ್ಲ ಶಿವಯೋಗಿಗಳ ಕಂಚಿನಮೂರ್ತಿ ಮೆರವಣಿಗೆ

KannadaprabhaNewsNetwork |  
Published : Dec 25, 2023, 01:30 AM IST
೨೪ಕೆಎನ್‌ಕೆ-೩                                                                 ಸುವರ್ಣಗಿರಿ ಮಠದ ೨೬ನೇ ಪೀಠಾಧಿಪತಿ ಲಿಂ. ಚನ್ನಮಲ್ಲ ಶಿವಯೋಗಿಗಳ ಕಂಚಿನ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.  | Kannada Prabha

ಸಾರಾಂಶ

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಚನ್ನಮಲ್ಲ ಶಿವಯೋಗಿಗಳು ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಲಿಂಗೈಕ್ಯರಾಗಿದ್ದು, ಭಕ್ತರು ಇಲ್ಲಿಯೇ ನೂತನ ಶಿಲಾಮಂಟಪ, ಗರ್ಭಗೃಹ, ಗೋಪುರ ಹಾಗೂ ಹೊಸ ತೇರು ನಿರ್ಮಿಸಿದ್ದಾರೆ. ನೂತನ ಶ್ರೀಮಠ ಹಾಗೂ ತೇರು ಲೋಕಾರ್ಪಣೆ ಕಾರ್ಯಕ್ರಮ

ಕನಕಗಿರಿ: ಪಟ್ಟಣದ ಸುವರ್ಣಗಿರಿ ಸಂಸ್ಥಾನ ಮಠದ ೨೬ನೇ ಪೀಠಾಧಿಪತಿ ಚನ್ನಮಲ್ಲ ಶಿವಯೋಗಿಗಳ ಕಂಚಿನಮೂರ್ತಿ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ ನಡೆಸಿ,ಮೆದಿಕಿನಾಳ ಮಠಕ್ಕೆ ಬೀಳ್ಕೊಡಲಾಯಿತು.

ಕಲ್ಮಠದಿಂದ ಆರಂಭಗೊಂಡ ಮೆರವಣಿಗೆ ರಾಜಬೀದಿಯ ಮೂಲಕ ಸಾಗಿ ಶ್ರೀ ಕನಕಾಚಲಪತಿ ದೇವಸ್ಥಾನ ಮುಂಭಾಗದಿಂದ ವಾಲ್ಮೀಕಿ ವೃತ್ತದ ಮಾರ್ಗವಾಗಿ ತಾವರಗೇರಾ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ನಡೆಯಿತು.ನೂರಾರು ಮಹಿಳೆಯರು ಕುಂಭ ಹಾಗೂ ಕಳಸದೊಂದಿಗೆ ಭಾಗವಹಿಸಿದ್ದು ಮೆರವಣಿಗೆಗೆ ಶೋಭೆ ತಂದಿತು. ಇನ್ನೂ ಸಮಗಂಡಿ ಮಲ್ಲಯ್ಯತಾತ ಅಲೆಮಾರಿ ಡ್ರಮ್‌ಸೆಟ್ ತಂಡದ ಕಲಾವಿದರ ತಾಷಾ ಮೇಳಕ್ಕೆ ಯುವಕರು ಕುಣಿದು ಸಂಭ್ರಮಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಚನ್ನಮಲ್ಲ ಶಿವಯೋಗಿಗಳು ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಲಿಂಗೈಕ್ಯರಾಗಿದ್ದು, ಭಕ್ತರು ಇಲ್ಲಿಯೇ ನೂತನ ಶಿಲಾಮಂಟಪ, ಗರ್ಭಗೃಹ, ಗೋಪುರ ಹಾಗೂ ಹೊಸ ತೇರು ನಿರ್ಮಿಸಿದ್ದಾರೆ. ನೂತನ ಶ್ರೀಮಠ ಹಾಗೂ ತೇರು ಲೋಕಾರ್ಪಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಡಿ. ೨೪ರಿಂದ ೨೦೨೪ರ ಜ. ೩ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮುಖಂಡ ಪ್ರಶಾಂತ ಪ್ರಭುಶೆಟ್ಟರ ತಿಳಿಸಿದರು.

ಪ್ರಮುಖರಾದ ಬಸವರಾಜ ಗುಗ್ಗಳಶೆಟ್ರ, ಬಸವರಾಜ ಹಿರೇಮಠ, ವಿರೇಶ ಸಮಗಂಡಿ, ಗಂಗಾಧರಸ್ವಾಮಿ, ಶರಣಪ್ಪ ಎಂ. ಭತ್ತದ, ಸುರೇಶ ಗುಗ್ಗಳಶೆಟ್ರ, ಕರಡೆಪ್ಪ ತೆಗ್ಗಿನಮನಿ, ನಾಗಭೂಷಣ ಸಜ್ಜನ, ಬಸಲಿಂಗಯ್ಯಸ್ವಾಮಿ ಕೆ, ಶರಣೇಗೌಡ, ರವಿ ಪಾಟೀಲ್, ಸಂಗಯ್ಯಸ್ವಾಮಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ