ಚುನಾವಣಾ ವೀಕ್ಷಕಿ ಆಕಾಂಕ್ಷ ರಂಜನ್ ಪುತ್ತೂರಿಗೆ ಭೇಟಿ

KannadaprabhaNewsNetwork |  
Published : Apr 23, 2024, 12:54 AM IST
ಫೋಟೋ: ೨೧ಪಿಟಿಆರ್-ಭೇಟಿ ಜಾರ್ಖಂಡ್‌ನ ಐಎಎಸ್ ಅಧಿಕಾರಿ ಅಕಾಂಕ್ಷ ರಂಜನ್ ಪುತ್ತೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಚುನಾವಣಾ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಚುನಾವಣೆ ಶಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿಗೆ ೨ನೇ ಹಂತದ ಅಂತಿಮ ತರಬೇತಿ ಕಾರ್ಯಕ್ರಮ ನಡೆದಿದೆ. ಇದರ ಜೊತೆಗೆ ಚುನಾವಣಾ ವೀಕ್ಷಕರಾಗಿ ಜಾರ್ಖಂಡ್‌ನ ಐಎಎಸ್ ಅಧಿಕಾರಿ ಅಕಾಂಕ್ಷ ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಏ.೨೬ಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಚುನಾವಣಾ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಚುನಾವಣೆ ಶಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿಗೆ ೨ನೇ ಹಂತದ ಅಂತಿಮ ತರಬೇತಿ ಕಾರ್ಯಕ್ರಮ ನಡೆದಿದೆ. ಇದರ ಜೊತೆಗೆ ಚುನಾವಣಾ ವೀಕ್ಷಕರಾಗಿ ಜಾರ್ಖಂಡ್‌ನ ಐಎಎಸ್ ಅಧಿಕಾರಿ ಅಕಾಂಕ್ಷ ರಂಜನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಜುಬಿನ್ ಮೊಹಪಾತ್ರ ಅವರು ತಿಳಿಸಿದ್ದಾರೆ.

ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ, ಚುನಾವಣೆ ಶಾಖೆಯ ಎಲ್ಲ ಅಧಿಕಾರಿ ವರ್ಗದವರು ಮತ್ತು ಸಿಬ್ಬಂದಿ ಸೇರಿದಂತೆ ಸುಮಾರು ೧೩೦೦ಕ್ಕೂ ಅಧಿಕ ಮಂದಿಗೆ ತರಬೇತಿ ನೀಡಲಾಗಿದೆ. ಚುನಾವಣಾ ವೀಕ್ಷಕರಾಗಿ ಆಗಮಿಸಿದ ಜಾರ್‌ಖಂಡ್‌ನ ಐಎಎಸ್ ಅಧಿಕಾರಿ ಆಕಾಂಕ್ಷ ರಂಜನ್ ಅವರು ಪುತ್ತೂರಿನಲ್ಲಿರು ಚುನಾವಣೆ ಮತಗಟ್ಟೆಗಳನ್ನು ಮತಯಂತ್ರಗಳನ್ನು ಇರಿಸಿದ ಭದ್ರತಾ ಕೊಠಡಿ ಮತ್ತು ತರಬೇತಿಗಳನ್ನು ವೀಕ್ಷಣೆ ಮಾಡಿ ಎಲ್ಲವು ಸರಿ ಇದೆ ಎಂದು ಹೇಳಿದ್ದಾರೆ ಎಂದರು.

ಚುನವಾಣೆ ಹಿನ್ನೆಲೆಯಲ್ಲಿ ಏ.೨೪ರ ಸಂಜೆ ಗಂಟೆ ೬ ರಿಂದ ಏ.೨೬ರ ರಾತ್ರಿ ೧೦ ಗಂಟೆ ವರೆಗೆ ಅಂದರೆ ಮತದಾನದ ಪ್ರಕ್ರಿಯೆ ಮುಗಿಯುವ ತನಕ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಈ ಸಂದರ್ಭ ಖಾಸಗಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಅನುಮತಿ ಪಡೆದು ಮಾಡಬಹುದು. ಕಾನೂನು ವ್ಯವಸ್ತೆ ಸಂಚಾರಕ್ಕೆ ಮತ್ತು ಮತದಾನಕ್ಕೆ ಹೋಗುವವರಿಗೆ ತೊಂದರೆ ಆಗದಂತೆ ಮಾಡಬಹುದು. ಆದರೆ ಅದರಲ್ಲೂ ಆರೇಳು ಶರತ್ತುಗಳು ಇವೆ. ಅದನ್ನು ಪಾಲಿಸಬೇಕು ಎಂದು ಜುಬಿನ್ ಮೊಹಪಾತ್ರ ತಿಳಿಸಿದರು.

ಅಂಚೆ ಮತದಾನಕ್ಕೆ ಸೌಲಭ್ಯ ಕೇಂದ್ರ: ಬೇರೆ ಬೇರೆ ಜಿಲ್ಲೆಯಿಂದ ಬಂದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿವವರಿಗೆ ಅಂಚೆ ಮತದಾನ ಪ್ರಕ್ರಿಯೆ ನಡೆಯಲಿದೆ. ಅದಕ್ಕಾಗಿ ಏ.೨೧ ಮತ್ತು ೨೨ರಂದು ಪುತ್ತೂರು ತಾಲೂಕು ಆಡಳಿತ ಸೌಧದ ತರಬೇತಿ ಸಭಾಂಗಣದಲ್ಲಿ ಸೌಲಭ್ಯ ಕೇಂದ್ರ ತೆರೆಯಲಾಗಿದೆ. ಪುತ್ತೂರಿಗೆ ಸಂಬಂಧಿಸಿ ೧೧೬ ಮಂದಿ ಅಂಚೆ ಮತದಾನ ಮಾಡಲಿದ್ದು, ಅದರಲ್ಲಿ ೯೮ ಮಂದಿ ಪುತ್ತೂರಿನಲ್ಲೇ ಕೆಲಸ ಮಾಡುವವರು. ೧೮ ಮಂದಿ ಬಂಟ್ವಾಳ, ಸುಳ್ಯ, ಮೂಡಬಿದ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅವರು ಪುತ್ತೂರು ಅಂಚೆ ಪತ್ರದ ಮೂಲಕ ಮತದಾನ ಸೌಲಭ್ಯ ಒದಗಿಸಲಾಗಿದೆ. ಈ ನಿಟ್ಟನಲ್ಲಿ ಸೌಲಭ್ಯ ಕೇಂದ್ರದಿಂದ ಅವರು ಅರ್ಜಿ ನೀಡಬಹುದು ಎಂದು ಸಹಾಯಕ ಚುನಾವಣಾಧಿಕಾರಿ ಜುಬಿನ್ ಮೊಹಪಾತ್ರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರಂತರ ಕೃಷಿ ಚಟುವಟಿಕೆಯಿಂದ ಕೃಷಿ ಲಾಭದಾಯಕ: ಉಮಾನಾಥ ಕೋಟ್ಯಾನ್
ನಿಟ್ಟೆಯಲ್ಲಿ ಎನ್. ವಿನಯ್ ಹೆಗ್ಡೆ ಅಂತ್ಯ ಸಂಸ್ಕಾರ