ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಪಣ್ಣೇದೊಡ್ಡಿ ಗೇಟ್ ಬಳಿ ಕಾವೇರಿ ನೀರಾವರಿ ನಿಗಮದಿಂದ ಕೆರಗೋಡು ಶಾಖಾ ನಾಲೆಯಡಿ ಬರುವ 24ನೇ ವಿತರಣಾ ನಾಲೆಯ 4ನೇ ಮೈನರ್ ಕಾಲುವೆಯ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಯಾಗಿರುವ 5 ಕೋಟಿ ರು.ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರೀಕ್ಷೆಗೂ ಮೀರಿ ಅನುದಾನ ನೀಡಿದ ಪರಿಣಾಮ ಎರಡುವರೆ ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ ಎಂದರು.ಮದ್ದೂರು ಕ್ಷೇತ್ರಕ್ಕೆ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ 800 ಕೋಟಿ ರು.ಗಳು ಬಿಡುಗಡೆಯಾಗಿದೆ. ಹಲವು ವರ್ಷಗಳಿಂದ ನೆನಗುದಿಗೆ ಬಿದಿದ್ದ ನಾಲೆಗಳು ಮತ್ತು ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೂ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಕೈಗೊಂಡು ಸ್ಥಳೀಯ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ಗ್ರಾಮ ಪರಿಣಿತಿಯಲ್ಲಿರುವ ರಸ್ತೆ, ಚರಂಡಿ, ಇನ್ನಿತರ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರೈಸಲು ಮುಂದಾಗಿದ್ದೇನೆ. 25 ವರ್ಷ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಇದ್ದು ನಗರ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹಂತ ಹಂತವಾಗಿ ಅಭಿವೃದ್ಧಿ ಹೊಂದಲು ಯೋಜನೆ ತಯಾರಿಸಿದ್ದೇನೆ. ನಗರ ವ್ಯಾಪ್ತಿ ಗ್ರಾಮಗಳಿಗೆ ಹೊಸ ಕಾರ್ಯಕಲ್ಪ ಕಲ್ಪಿಸಿ ಮಾದರಿ ನಗರವನ್ನಾಗಿಸಲು ತಾವು ನಿರಂತರವಾಗಿ ಶ್ರಮಿಸುತ್ತಿರುವುದಾಗಿ ವಿವರಿಸಿದರು.
ಈ ವೇಳೆ ಗ್ರಾಪಂ ಮಾಜಿ ಸದಸ್ಯರಾದ ಶೋಭಾ, ಧನಂಜಯ್ಯ, ಬಾಬು, ಮುರುಳಿ, ಸ್ಥಳೀಯ ಮುಖಂಡರಾದ ಪಣ್ಣೇದೊಡ್ಡಿ ವಿಜಯೇಂದ್ರ, ಸುಧಾಕರ್, ಚಿಕ್ಕತಿಮ್ಮ, ಗೋಪಿ, ಮಾರಸಿಂಗನಹಳ್ಳಿ ರಾಮಚಂದ್ರು, ಶರತ್, ಚಿಕ್ಕತಿಮ್ಮೇಗೌಡ, ಗೋವಿಂದು, ರವಿ, ಪ್ರಸನ್ನ, ಬಾಲಚಂದ್ರ, ಎಇಇಗಳಾದ ಅಜಯ್, ಚೇತನ್ ಇತರರಿದ್ದರು.