ಘಟಸ್ಥಾಪನೆ ಫಲವತ್ತಾದ ಬೆಳೆಗೆ ದಿಕ್ಸೂಚಿ

KannadaprabhaNewsNetwork |  
Published : Oct 14, 2024, 01:19 AM IST
ಕಾರ್ಯಕ್ರಮದಲ್ಲಿ ಡಾ. ಕೆ.ಎಂ.ಮೈತ್ರಿ ಮಾತನಾಡಿದರು. | Kannada Prabha

ಸಾರಾಂಶ

ಘಟಸ್ಥಾಪನೆಗೆ ಹಾಕಿದ ನವ ಧಾನ್ಯಗಳಲ್ಲಿ ಯಾವ ಬಗೆಯ ಧಾನ್ಯ ಹೆಚ್ಚು ಫಲವತ್ತಾಗಿ ವಿಸ್ತರಿಸಿಕೊಂಡಿದೆಯೂ ಆ ವರ್ಷ ಆ ಧಾನ್ಯದ ಬೆಳೆ ಉತ್ತಮ ಫಸಲು ನೀಡಬಲ್ಲದು

ಗದಗ: ನವರಾತ್ರಿಯ ಸಂದರ್ಭದಲ್ಲಿ ದೇವಿ ಆರಾಧನೆ, ಪುರಾಣ ಪ್ರಾರಂಭೋತ್ಸವದ ಸಂದರ್ಭ ಘಟಸ್ಥಾಪನೆ ಧಾರ್ಮಿಕವಾಗಿ ಅಷ್ಟೇ ಅಲ್ಲ, ಸೃಷ್ಟಿಯಲ್ಲಿ ಕೃಷಿಗೂ ಸಹ ದಿಕ್ಸೂಚಿಯಾಗಿದೆ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿ ವಿಶ್ರಾಂತ ಕುಲಪತಿ ಡಾ. ಕೆ.ಎಂ. ಮೈತ್ರಿ ಹೇಳಿದರು.

ಅವರು ನಗರದ ಅಡವೀಂದ್ರ ಸ್ವಾಮಿ ಮಠದಲ್ಲಿ ದಸರಾ ಮಹೋತ್ಸವದ ಪುರಾಣ ಪ್ರವಚನ, ಅನ್ನಪೂರ್ಣೆಶ್ವರಿ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 9 ದಿನಗಳ ನವರಾತ್ರಿ ದಸರಾ ಹಬ್ಬವು ಘಟಸ್ಥಾಪನೆಯಿಂದ ಪ್ರಾರಂಭವಾಗುತ್ತದೆ, ಮಣ್ಣಿನ ಮಡಿಕೆಯಲ್ಲಿ ಹುತ್ತದ ಮಣ್ಣಿನಲ್ಲಿ ನವಧಾನ್ಯ ಹಾಕಿ ನೀರುಣಿಸಿ 9ನೇ ಬನ್ನಿ ಹಬ್ಬದ ದಿನ ಯಾವ ಕಾಳು ಉತ್ತಮ ಫಲ ನೀಡುತ್ತದೆ ಎಂಬುದನ್ನು ಗಮನಿಸಿ ಪ್ರಸಕ್ತ ವರ್ಷದಲ್ಲಿ ಅಂತಹ ಬೆಳೆ ಬಿತ್ತನೆ ಮಾಡಿದರೆ ಉತ್ತಮ ಫಸಲು ಬರುತ್ತದೆ ಎಂಬುದು ರೈತಾಪಿ ಜನರಲ್ಲಿ ಅಚಲವಾದ ವಿಶ್ವಾಸ, ನಂಬಿಕೆ ಬಹು ವರ್ಷಗಳಿಂದ ಇಟ್ಟುಕೊಂಡು ಬಂದಿದ್ದು ಇಂದಿಗೂ ಮುಂದುವರೆದಿದೆ ಎಂದರು.

ಘಟಸ್ಥಾಪನೆಗೆ ಹಾಕಿದ ನವ ಧಾನ್ಯಗಳಲ್ಲಿ ಯಾವ ಬಗೆಯ ಧಾನ್ಯ ಹೆಚ್ಚು ಫಲವತ್ತಾಗಿ ವಿಸ್ತರಿಸಿಕೊಂಡಿದೆಯೂ ಆ ವರ್ಷ ಆ ಧಾನ್ಯದ ಬೆಳೆ ಉತ್ತಮ ಫಸಲು ನೀಡಬಲ್ಲದು ಎಂದು ನಂಬಿರುವ ರೈತರು ಈ ಸಂಕೇತ ಬಳಸಿಕೊಂಡು ಕೃಷಿ ಮಾಡುವರು ಎಂದು ನೈಸರ್ಗಿಕ, ವೈಜ್ಞಾನಿಕ ಕಾರಣ ನೀಡಿದರು.

ಸಮ್ಮುಖ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ಮಹೇಶ್ಚರ ಸ್ವಾಮೀಜಿ ಹೊಸಳ್ಳಿಮಠ ಮಾತನಾಡಿದರು. ಜ. ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠ ಶಾಲೆಯ ವಟುಗಳಿಂದ ವೇದಘೋಷ ಜರುಗಿತು. ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಪುರಾಣ ಪ್ರವಚನ ಜರುಗಿತು. ಚನ್ನಬಸಯ್ಯ ಶಾಸ್ತ್ರೀ ಹೇಮಗಿರಿಮಠ ಪುರಾಣ ಪಠಣ ಮಾಡಿದರು. ಸುಕ್ರುಸಾಬ್‌ ಮುಲ್ಲಾ, ಜಗನ್ನಾಥ ಕಲಬುರ್ಗಿ, ಗುರುನಾಥ ಸುತಾರ, ಎಸ್.ಬಿ. ಭಜಂತ್ರಿ ಅವರಿಂದ ಸಂಗೀತ ಜರುಗಿತು.

ಉಸಿರು ಫೌಂಡೇಶನ್ ಅಧ್ಯಕ್ಷ ಶರಣ ಪಾಟೀಲ, ರೇಣುಕಾ ಪಾಟೀಲ ಸೇರಿದಂತೆ ಜಾತ್ರಾ ಮಹೋತ್ಸವದ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಗಳು ಇದ್ದರು. ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ ಸ್ವಾಗತಿಸಿದರು. ಪ್ರಸಾದ ಸೇವೆಯನ್ನು ಎ.ಎಂ.ವಿರಕ್ತಮಠ, ರಾಕೇಶ ದಾಸರಿ, ಎಸ್.ಎಸ್. ಸಜ್ಜನರ, ಶೋಭಾ ದಶವಂತ, ರೇಖಾ ಜಿರಾಳ, ಪಿ.ಟಿ. ನಾರಾಯಣಪೂರ, ಸಿದ್ಧಲಿಂಗಪ್ಪ ಕೋಟಿ, ಅತಿಶ ಖಂಡಪ್ಪಗೌಡ್ರ ವಹಿಸಿಸಿದ್ದರು. ಯು.ಆರ್. ಭೂಸನೂರಮಠ ನಿರೂಪಿಸಿದರು. ಆರ್.ಎಫ್. ಅಗಸಿಮನಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂತ್ರಜ್ಞಾನದ ಬದಲಾವಣೆಗೆ ತಕ್ಕಂತೆ ‘ಸುಸ್ಥಿರ ಡೇಟಾ ಸೆಂಟರ್‌’
ಉಪ ನೋಂದಣಾಧಿಕಾರಿಗೆ ಧಮ್ಕಿ ಹಾಕಿದ್ದ ಆರೋಪಿ ಸೆರೆ