ದಿಗಂಬರ ಜೈನ ಮಹಾಸಂಸ್ಥಾನ ಮಠ ಚಾತುರ್ಮಾಸ್ಯ ಕಳಶ ಸ್ಥಾಪನೆ

KannadaprabhaNewsNetwork |  
Published : Jul 30, 2026, 01:45 AM IST
ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಶ್ರೀ ದಿಗಂಬರ ಜೈನ ಮಹಾಸಂಸ್ಥಾನ ಮಠದಲ್ಲಿ ವರ್ಷಯೋಗ ಚಾತುರ್ಮಾಸ್ಯದ ಅಂಗವಾಗಿ ತ್ಯಾಗಿಗಳ ಚಾತುರ್ಮಾಸ್ಯ ಕಳಶ ಸ್ಥಾಪನೆ ಕಾರ್ಯಕ್ರಮವು ಭಕ್ತಿ ಹಾಗೂ ಧಾರ್ಮಿಕ ವಿಧಿವಿಧಾನ | Kannada Prabha

ಸಾರಾಂಶ

ಜೈನ ಪರಂಪರೆಯಂತೆ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರಿಗೆ ಹಾಗೂ ಸ್ವಾಮೀಜಿಯವರಿಗೆ ಅಘ್ರ್ಯ ಸಮರ್ಪಿಸಿ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ನಂತರ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಈಶಾನ್ಯ ಮೂಲೆಯಲ್ಲಿ ಚಾತುರ್ಮಾಸ್ಯ ಕಳಶವನ್ನು ಪ್ರತಿಷ್ಠಾಪಿಸಲಾಯಿತು. ಶ್ರವಣಬೆಳಗೊಳ ಶ್ರೀ ಜೈನಮಠದ ಪೀಠಾಧ್ಯಕ್ಷರಾದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಕ್ಷೇತ್ರದ ಪುರೋಹಿತರಾದ ನಂದಕುಮಾರ ಶಾಸ್ತ್ರಿ, ಪ್ರತಿಷ್ಠಾಚಾರ್ಯ ಜಿನೇಶ್ ಕುಮಾರ್‌ ಹಾಗೂ ಪುರೋಹಿತ ವರ್ಗವು ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿತು.

ಕನ್ನಡ ಪ್ರಭವಾರ್ತೆ ಚನ್ನರಾಯಪಟ್ಟಣ

ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಶ್ರೀ ದಿಗಂಬರ ಜೈನ ಮಹಾಸಂಸ್ಥಾನ ಮಠದಲ್ಲಿ ವರ್ಷಯೋಗ ಚಾತುರ್ಮಾಸ್ಯದ ಅಂಗವಾಗಿ ತ್ಯಾಗಿಗಳ ಚಾತುರ್ಮಾಸ್ಯ ಕಳಶ ಸ್ಥಾಪನೆ ಕಾರ್ಯಕ್ರಮವು ಭಕ್ತಿ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ಮುನಿಶ್ರೀ ಸುಧೆಯಸಾಗರ ಮಹಾರಾಜರು, ಮುನಿಶ್ರೀ ಪ್ರಭಾಕರಸಾಗರ ಮಹಾರಾಜರು, ಆರ್ಯಿಕಾಶ್ರೀ ಶಿವಮತಿ ಮಾತಾಜಿ, ಆರ್ಯಿಕಾಶ್ರೀ ನಿರ್ಮಲಮತಿ ಮಾತಾಜಿ, ಕ್ಷುಲ್ಲಿಕಾಶ್ರೀ ವಿಶುದ್ಧಮತಿ ಮಾತಾಜಿ, ಕ್ಷುಲ್ಲಿಕಾಶ್ರೀ ಅಮರಜ್ಯೋತಿ ಮಾತಾಜಿ ಹಾಗೂ ಕ್ಷುಲ್ಲಿಕಾಶ್ರೀ ಅಮೃತಜ್ಯೋತಿ ಮಾತಾಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಶ್ರಾವಕ- ಶ್ರಾವಕಿಯರು ಮಂಗಳ ದ್ರವ್ಯಗಳನ್ನು ಹೊತ್ತು ಭಕ್ತಿಪೂರ್ವಕವಾಗಿ ಮೆರವಣಿಗೆ ನಡೆಸಿದರು. ಬಳಿಕ ಜೈನ ಪರಂಪರೆಯಂತೆ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರಿಗೆ ಹಾಗೂ ಸ್ವಾಮೀಜಿಯವರಿಗೆ ಅಘ್ರ್ಯ ಸಮರ್ಪಿಸಿ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ನಂತರ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಈಶಾನ್ಯ ಮೂಲೆಯಲ್ಲಿ ಚಾತುರ್ಮಾಸ್ಯ ಕಳಶವನ್ನು ಪ್ರತಿಷ್ಠಾಪಿಸಲಾಯಿತು. ಶ್ರವಣಬೆಳಗೊಳ ಶ್ರೀ ಜೈನಮಠದ ಪೀಠಾಧ್ಯಕ್ಷರಾದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಕ್ಷೇತ್ರದ ಪುರೋಹಿತರಾದ ನಂದಕುಮಾರ ಶಾಸ್ತ್ರಿ, ಪ್ರತಿಷ್ಠಾಚಾರ್ಯ ಜಿನೇಶ್ ಕುಮಾರ್‌ ಹಾಗೂ ಪುರೋಹಿತ ವರ್ಗವು ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿತು.

ಕಾರ್ಯಕ್ರಮದಲ್ಲಿ ತ್ಯಾಗಿಸೇವಾ ಸಮಿತಿಯ ನಿಹಾಲ್ ಚಂದ್ ಜೈನ್, ಶ್ರೀ ಮಠದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಚ್‍.ಪಿ. ಅಶೋಕ್ ಕುಮಾರ್‌, ಸದಸ್ಯರಾದ ಪೌದನ್ ಜೈನ್, ಕಾರ್ಯದರ್ಶಿ ಎಸ್. ಪಿ. ಮಹೇಶ್, ಹೆಚ್ಚುವರಿ ಕಾರ್ಯದರ್ಶಿ ಜಿ. ಡಿ. ಪಾರ್ಶ್ವನಾಥ್, ಶ್ರೀ ದಿಗಂಬರ ಜೈನ ಸಮಾಜದ ಕಾರ್ಯದರ್ಶಿ ಎಸ್. ಪಿ. ಭಾನುಕುಮಾರ್‌, ಶ್ರೀ ಕೂಷ್ಮಂಡಿನಿ ಮಹಿಳಾ ಸಮಾಜದ ಅಧ್ಯಕ್ಷೆ ಮಹಾಲಕ್ಷ್ಮೀ ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಶ್ರಾವಕ, ಶ್ರಾವಕಿಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದು, ಧಾರ್ಮಿಕ ಕಾರ್ಯಕ್ರಮಕ್ಕೆ ಮೆರುಗು ತಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡತನ ಮೀರಿ ನೀಟ್‌ ಪರೀಕ್ಷೆಯಲ್ಲಿ ಸಾಧನೆಗೈದ ಕುಮಾರಸ್ವಾಮಿ
ಸಿಡಬ್ಲ್ಯೂಆರ್‌ಸಿ ಆದೇಶ ಖಂಡಿಸಿ ಚನ್ನಪಟ್ಟಣದಲ್ಲಿ ಪ್ರತಿಭಟನೆ