ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಸಂಗನಬಸವ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಿಂದ ಹಣಕಾಸಿನ ಯೋಜನೆ ಹಾಗೂ ಹೂಡಿಕೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಣಕಾಸು ಹೂಡಿಕೆ ಬಗ್ಗೆ ವಿವರವಾಗಿ ಮಾಹಿತಿ ನೀಡಿ, ಹೂಡಿಕೆಗೆ ಸಂಬಂಧಿಸಿದಂತೆ ಎಫ್ಡಿ, ಆರ್ಡಿ, ಎಸ್ಐಪಿ, ಸ್ಟಾಕ್ ಮಾರ್ಕೆಟ್ಗಳ ಬಗ್ಗೆ ತಿಳಿಸಿದರು. ನೀವು ದುಡಿದು ಗಳಿಸಿದ ದುಡ್ಡನ್ನು ದುಡಿಸಿ ನೀವು ಹೂಡಿಕೆದಾರರಾಗಿ. ನಾವು ವಿಶ್ರಾಂತಿಯಲ್ಲಿದ್ದರೂ ನಮ್ಮ ಹಣ ದುಡಿತಾ ಇರಬೇಕು ಎಂದರು.
ಪ್ರಾಂಶುಪಾಲ ವೀರೇಶ.ಪಿ ಮಾತನಾಡಿ, ಉಪನ್ಯಾಸದ ವಿಷಯಗಳನ್ನು ನಿಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳಿ. ಉಳಿತಾಯ ಮಾಡಿ ಮಾಲೀಕರಾಗಿ ಆಗ ಮಾತ್ರ ನಮ್ಮ ದೇಶ ಆರ್ಥಿಕವಾಗಿ ಬಲಿಷ್ಠವಾಗುವುದು ಎಂದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪವನಕುಮಾರ ಹಿರೇಮಠ ನಿರೂಪಿಸಿದರು. ಅಜಿತ ಪ್ಯಾಟಿ, ರಾಜಕುಮಾರ ಬಿರಾದಾರ, ರಮೇಶ ಮೇತ್ರಿ, ಶಿವಾನಂದ ಪುಟಗಿ, ಮಲ್ಲಿಕಾರ್ಜುನ ಹಿರೇಮಠ, ಜಗದೀಶ ಸಾತಿಹಾಳ, ಪ್ರಭಂಜನ ಜೋಶಿ, ಸಾವಿತ್ರಿ ಮಠದ, ಪರಿದಾ ಉಕ್ಕಲಿ, ಲಕ್ಷ್ಮಿ ಮನಮಿ, ಮಹಾನಂದ ಉಪ್ಪಿನ, ಸಿಂಧೂ ಬೇಳ್ಳೂಂಡಗಿ, ಬೋಧಕ ಸಿಬ್ಬಂದಿ ಹಾಗೂ ಪಿಯು ವಿದ್ಯಾರ್ಥಿಗಳು ಭಾಗವಹಿಸಿದ್ದರು.