ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಶ್ರೀ ಸೋಮೇಶ್ವರ ವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಪ್ರಕೃತಿ ಸಂರಕ್ಷಣಾ ಸಂಸ್ಥೆ ರಾಜ್ಯ ಘಟಕ ಉದ್ಘಾಟನೆ ಹಾಗೂ ಜಿಲ್ಲಾ ವರದಿಗಾರರ ಕೂಟ, ಭಾರತೀಯ ವಿಕಾಸ ಪರಿಷತ್, ಶ್ರೀ ಸ್ವಾಮಿ ವಿವೇಕಾನಂದ ಶಾಖೆಯಿಂದ ವಿಶ್ವ ಪರಿಸರ ದಿನಾಚರಣೆ-2026ನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ
ನಮ್ಮನ್ನು ರಕ್ಷಿಸುತ್ತದೆ. ಅದೇ ರೀತಿ ಪರಿಸರವನ್ನು ನಾವು ಕಾಪಾಡಿದರೆ, ಅದು ನಮ್ಮನ್ನು ಕಾಪಾಡುತ್ತದೆ ಎಂದರು.ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರಲ್ಲೂ ಸ್ವಯಂ ಶಿಸ್ತು ಅಗತ್ಯ. 84 ಲಕ್ಷ ಜೀವರಾಶಿಗಳಿಗೂ ಅನ್ನ ಹಾಕಲು, ಆಹಾರ ಕೊಡಲು, ಮಳೆ, ಗಾಳಿ, ಆಶ್ರಯ ಕೊಡಲು ಪ್ರಕೃತಿ ಸೃಷ್ಟಿಯಾಗಿದೆ. ಹಾಲು ನೀಡಲು ಹಸು, ಉಸಿರು ನೀಡಲು ವೃಕ್ಷ, ಹಣ್ಣು-ಹಂಪಲಿಗೆ ಗಿಡ ಮರಗಳ ಮಹತ್ವ ಅರಿಯಬೇಕು. ಸಕಲ ಜೀವರಾಶಿಗೂ ನೀರು ಅತ್ಯಗತ್ಯವಾಗಿದ್ದು, ನೀರಿನ ಹಿತ, ಮಿತ ಬಳಕೆಗೆ ಒತ್ತು ನೀಡಬೇಕು. ಮನೆ ಮುಂದೆ ಏನೂ ಇಲ್ಲದಿದ್ದರೆ ಕನಿಷ್ಠ ತುಳಸಿ ಗಿಡವಾದರೂ ಇರುವುದು ನಮ್ಮ ಸಂಸ್ಕೃತಿಯ ಭಾಗ ಎಂದು ಅವರು ತಿಳಿಸಿದರು.
ಪ್ರಕೃತಿ ಸಂರಕ್ಷಣಾ ಸಂಸ್ಥೆ ಸಂಸ್ಥಾಪಕ ರಾಜ್ಯಾಧ್ಯಕ್ಷ, ನಿವೃತ್ತ ಪರಿಸರ ಅಧಿಕಾರಿ ಕೆ.ಬಿ.ಕೊಟ್ರೇಶ ಮಾತನಾಡಿ, ಸಂಸ್ಥೆಯಿಂದ ಹಳ್ಳಿಯಿಂದ ರಾಜ್ಯಮಟ್ಟದವರೆಗೆ ಪರಿಸರ ಪರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಸಸಿ ನೆಡುವುದಷ್ಟೇ ಅಲ್ಲ, ಅವುಗಳನ್ನು ಪೋಷಣೆ ಮಾಡುವುದೂ ನಮ್ಮ ಉದ್ದೇಶ. ಕಸ ವಿಲೇವಾರಿ, ಸ್ವಚ್ಛತೆ, ಪರಿಸರ ಸಂರಕ್ಷಣೆ, ಚರಂಡಿ ನೀರು ಶುದ್ಧೀಕರಣ, ಪ್ಲಾಸ್ಟಿಕ್ ಬಳಕೆ ತಡೆಯುವುದು ಹೀಗೆ ಹಲವಾರು ಸದುದ್ದೇಶದಿಂದ ಸಂಸ್ಥೆ ಸ್ಥಾಪಿಸದ್ದು, ಸಮಾನ ಮನಸ್ಕರು, ಪರಿಸರ ಪ್ರೇಮಿಗಳು, ಸಂಘ-ಸಂಸ್ಥೆಗಳೂ ಈ ಕಾರ್ಯಕ್ಕೆ ಕೈಜೋಡಿಸಿವೆ ಎಂದರು.
ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ, ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ ಮಾತನಾಡಿ, ಗೋಣಿವಾಡದ ತಮ್ಮ ಶಾಲೆಯಲ್ಲಿ ಸುಮಾರು 2 ಸಾವಿರಕ್ಕೂ ಅದಿಕ ವಿವಿಧ ಬಗೆಯ ಹಣ್ಣು ಹಂಪಲುಗಳ ಗಿಡಗಳನ್ನು ಬೆಳೆಸಿದ್ದೇವೆ ಎಂದರು.
ಭಾರತೀಯ ವಿಕಾಸ ಪರಿಷತ್ ಅಧ್ಯಕ್ಷ ಪ್ರಸಾದ ಬಂಗೇರ, ಹಿರಿಯ ವರ್ತಕ ಎಸ್.ಟಿ.ಕುಸುಮಶ್ರೇಷ್ಠಿ, ಶಾಲೆ ಪ್ರಾಚಾರ್ಯರಾದ ಪ್ರಭಾವತಿ, ಶಿಕ್ಷಕರಾದ ಕೇಶವ, ಮಾರುತಿ, ಸುನಂದಾ ವರ್ಣೇಕರ್, ಉಮಾದೇವಿ, ವಿವಿಧ ಸಂಘ ಸಂಸ್ಥೆಗಳ ಗಿರೀಶ ಎಸ್.ದೇವರಮನಿ, ಕೆ.ಟಿ.ಗೋಪಾಲಗೌಡ್ರು, ನಾಗರಾಜ ಸುರ್ವೆ, ಪ್ರಸನ್ನ ಬೆಳಕೇರಿ, ಪ್ರವೀಣ, ಸತೀಶ, ಮಣಿಕಂಠ, ಆರ್.ಬಿ.ಹನುಮಂತಪ್ಪ, ಎಲ್.ಎನ್.ಕಲ್ಲೇಶ, ಲಿಂಗರಾಜ, ಶಾಲೆಯ ಶಿಕ್ಷಕ-ಶಿಕ್ಷಕಿಯರು, ಶಾಲಾ ಮಕ್ಕಳು ಇದ್ದರು.
ಓಂಕಾರ ಶಿವಾಚಾರ್ಯ ಆವರಗೊಳ್ಳ ಪುರವರ್ಗ ಮಠ.