ಹಿಂದೂ ಧರ್ಮ ನಾಶಕ್ಕೆ ದುಷ್ಟಶಕ್ತಿಗಳ ಪ್ರಯತ್ನ: ಡಾ.ಸುಬುಧೇಂದ್ರ

KannadaprabhaNewsNetwork |  
Published : Sep 01, 2026, 01:45 AM IST
31ಕೆಪಿಆರ್‌ಸಿಆರ್ 05 :  | Kannada Prabha

ಸಾರಾಂಶ

ಅತ್ಯಂತ ವಿಶಿಷ್ಟವಾಗಿರುವ ನಮ್ಮ ಸನಾತನ ಹಿಂದೂ ಧರ್ಮದ ನಾಶಕ್ಕೆ, ವಿವಿಧ ರೀತಿಯ ತೊಂದರೆಗಳನ್ನು ಕೊಡುವುದಕ್ಕಾಗಿ ಅನೇಕ ದುಷ್ಟಶಕ್ತಿಗಳು ಪ್ರಯತ್ನಿ ಸುತ್ತಿದ್ದು, ಆದ್ದರಿಂದ ಹಿಂದೂಗಳೆಲ್ಲರೂ ಭೇದಭಾವ ಮರೆತು, ಸಂಘಟಿತರಾಗಿ, ಧರ್ಮಕ್ಕೆ ಯಾವುದೇ ರೀತಿಯ ಚುತಿ ಬಾರದಂತೆ ಜಾಗರೂಕತೆಯನ್ನು ವಹಿಸಿ, ಮುಂದಿನ ಸಂತತಿಗೆ ಹಿಂದೂ ಧರ್ಮದ ಹಿರಮೆ ಗರಿಮೆಗಳನ್ನು ಮುಂದಿನ ಸಂತತಿಗೆ ತಿಳಿಸಿಕೊಡುವ ಕಾರ್ಯವನ್ನು ಎಲ್ಲರೂ ಮಾಡಬೇಕು ಎಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಅತ್ಯಂತ ವಿಶಿಷ್ಟವಾಗಿರುವ ನಮ್ಮ ಸನಾತನ ಹಿಂದೂ ಧರ್ಮದ ನಾಶಕ್ಕೆ, ವಿವಿಧ ರೀತಿಯ ತೊಂದರೆಗಳನ್ನು ಕೊಡುವುದಕ್ಕಾಗಿ ಅನೇಕ ದುಷ್ಟಶಕ್ತಿಗಳು ಪ್ರಯತ್ನಿ ಸುತ್ತಿದ್ದು, ಆದ್ದರಿಂದ ಹಿಂದೂಗಳೆಲ್ಲರೂ ಭೇದಭಾವ ಮರೆತು, ಸಂಘಟಿತರಾಗಿ, ಧರ್ಮಕ್ಕೆ ಯಾವುದೇ ರೀತಿಯ ಚುತಿ ಬಾರದಂತೆ ಜಾಗರೂಕತೆಯನ್ನು ವಹಿಸಿ, ಮುಂದಿನ ಸಂತತಿಗೆ ಹಿಂದೂ ಧರ್ಮದ ಹಿರಮೆ ಗರಿಮೆಗಳನ್ನು ಮುಂದಿನ ಸಂತತಿಗೆ ತಿಳಿಸಿಕೊಡುವ ಕಾರ್ಯವನ್ನು ಎಲ್ಲರೂ ಮಾಡಬೇಕು ಎಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು.

ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 355ನೇ ಉತ್ತರಾರಾಧನೆ ಮಹೋತ್ಸವ ಹಿನ್ನೆಲೆಯಲ್ಲಿ ಸೋಮವಾರ ಜರುಗಿದ ಮಹಾರಥೋತ್ಸವಕ್ಕೆ ಚಾಲನೆ ನೀಡಿ ನೆರೆದಿದ್ದ ಭಕ್ತ ಸಮೋಹವನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಇಡೀ ಜಗತ್ತಿನಲ್ಲಿಯೇ ಹಿಂದೂ ಧರ್ಮಕ್ಕೆ ಸಮಾನವಾದ ಧರ್ಮ ಮತ್ತೊಂದಿಲ್ಲ ಎಂಬುವುದನ್ನು ಈ ಸಂದರ್ಭದಲ್ಲಿ ಘೋಷಿಸುತ್ತೇವೆ, ಭಾರತ ದೇಶ ಅತ್ಯಂತ ಸಂಪದ್ಬರಿತವಾದುದ್ದಾಗಿದ್ದು, ವಿದ್ಯೆ, ಆರ್ಥಿಕ, ಸಾಮಾಜಿಕ, ಭೌಗೋಳಿಕ ಅದೇ ರೀತಿ ರಾಜಕೀಯವಾಗಿಯೂ ಸಹ ಅತ್ಯಂತ ಸಮರ್ಥದೇಶವಾಗಿದೆ. ಎಲ್ಲರೂ ದೇಶ ಪ್ರೇಮವನ್ನು ಬೆಳೆಸಿಕೊಂಡು ಉಳಿಸಿ ಕೊಳ್ಳಬೇಕು, ನಾವೆಲ್ಲರೂ ಕೂಡ ಭಾರತ ಮಾತೆಯ ಮಕ್ಕಳು ಇದೇ ನಮ್ಮ ಸಂದೇಶವಾಗಿದೆ ಎಂದರು.

ತೀವ್ರ ಕ್ಷಾಮ; ಕ್ಷೇಮಕ್ಕಾಗಿ ಪ್ರಾರ್ಥನೆ: ದೇಶದಲ್ಲಿ ಮಳೆಯ ಅಭಾವದಿಂದಾಗಿ ಬರಗಾಲ ಪರಿಸ್ಥಿತಿ ನಿರ್ಮಾಣಗೊಂಡಿದೆ ಇಂತಹ ತೀವ್ರ ಕ್ಷಾಮವು ದೂರವಾಗಲಿ, ಸಕಾಲದಲ್ಲಿ ಮಳೆಗಳಾಗಿ ರೈತಾಪಿ ಜನಾಂಗಕ್ಕೆ ಕ್ಷೇಮವಾಗಲಿ, ದೇಶದ ಬೆನ್ನೆಲುಬಿನಂತಹ ರೈತಾಪಿ ವರ್ಗವು ಬರದಿಂದ ನಿರಾಶರಾಗದೇ ಆತ್ಮಸ್ಥೈರ್ಯವನ್ನು ಹೊಂದಲಿ ಅವರಿಗೆ ರಾಯರ, ಭಗವಂತನ ಅನುಗ್ರಹ ದೊರೆಯಲಿ ಎಂದು ಪ್ರಾರ್ಥನೆ ಮಾಡುವುದಾಗಿ ಹೇಳಿದರು.

ಭಕ್ತರ ಸೌಕರ್ಯಗಳಿಗಾಗಿ 355 ಕೋಟಿ ರು. ಠೇವಣಿ: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ 335ನೇ ಆರಾಧನಾ ಮಹೋತ್ಸವದ ನೆನಪಿಗಾಗಿ 355ಕೋಟಿ ರು. ಹಣವನ್ನು ಠೇವಣಿ (ಎಫ್‌ಡಿ) ಹಿಡಲಾ ಗುವುದು. ಈ ಠೇವಣಿ ಮೊತ್ತದಿಂದ ಬರುವ ಬಡ್ಡಿ ಹಣದಿಂದ ಭಕ್ತರ ಮೂಲಭೂತ ಸೌಕರ್ಯ ಹಾಗೂ ಸಿಬ್ಬಂದಿಗಳಿಗೆ ನೆರವಿಗಾಗಿ ವೇಯಿಸಲಾಗುವುದು ಎಂದು ಶ್ರೀಗಳು ಘೋಷಿಸಿದರು.

2,500 ರು.ಸಂಬಳ ಹೆಚ್ಚಳ: ಶ್ರೀಮಠದ ಖಾಯಂ ಸಿಬ್ಬಂದಿಗೆ ಶೇ.10.92 (ಮೂರು ) ಡಿಎಗಳನ್ನು ಘೋಷಣೆ ಮಾಡುತ್ತಿದ್ದು ಅದರೊಟ್ಟಿಗೆ ಗುತ್ತಿಗೆ ಆಧಾರದಡಿ ಎನ್ಎಂಆರ್‌ ಸಂಭಾವನೆಯನ್ನು ಪಡೆಯುತ್ತಿರುವ ಸಾವಿರಾರು ಸಿಬ್ಬಂದಿಯ ಸಂಬಳವನ್ನು ತಲಾ 2,500 ರು. ಹೆಚ್ಚಳ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೇ ಐದು ವರ್ಷಗಳಿಂಗ ಹೆಚ್ಚಿನ ಸೇವೆ ಸಲ್ಲಿ ಸಿದ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಸಿಬ್ಬಂದಿಯನ್ನಾಗಿಸಲಾಗುವುದು. ಈ ಎಲ್ಲ ಸೇವೆಗಳು ಬರುವ ಸೆ.1ರಿಂದ ಜಾರಿಗೆ ಬರಲಿವೆ ಎಂದು ಶ್ರೀಗಳು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಗಳು ಜೀವನ ಮೌಲ್ಯಗಳನ್ನು ಕಲಿಸುವ ಪಾಠಶಾಲೆ
ಅಣ್ಣಾಭಾವು ಸಾಠೆ ಸಾಹಿತ್ಯವು ಸಾಮಾಜಿಕ ನ್ಯಾಯದ ಹಾದಿ: ಸೂರ್ಯಕಾಂತ