ಬಿಡದಿಯಲ್ಲಿ ಇ - ಖಾತೆ ಕ್ಯಾತೆಗೆ ಮುಕ್ತಿ

KannadaprabhaNewsNetwork |  
Published : Feb 02, 2025, 01:01 AM IST
1ಕೆಆರ್ ಎಂಎನ್ 1.ಜೆಪಿಜಿಬಿಡದಿ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಹರಿಪ್ರಸಾದ್ ರವರು ಸ್ವತ್ತಿನ ಮಾಲೀಕರಿಗೆ ಇ - ಖಾತೆ ವಿತರಿಸಿದರು. | Kannada Prabha

ಸಾರಾಂಶ

ರಾಮನಗರ: ಸ್ವತ್ತುದಾರರ ಅಲೆದಾಟ ತಪ್ಪಿಸಿ ಖಾತೆ ಕ್ಯಾತೆಗೆ ಮುಕ್ತಿ ನೀಡುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಇ-ಖಾತೆ ಆಂದೋಲನ ಬಿಡದಿ ಪುರಸಭೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ.

ರಾಮನಗರ: ಸ್ವತ್ತುದಾರರ ಅಲೆದಾಟ ತಪ್ಪಿಸಿ ಖಾತೆ ಕ್ಯಾತೆಗೆ ಮುಕ್ತಿ ನೀಡುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಇ-ಖಾತೆ ಆಂದೋಲನ ಬಿಡದಿ ಪುರಸಭೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿಗೆ ಕೂಗಳತೆಯಲ್ಲಿರುವ ಬಿಡದಿಯಲ್ಲಿ ಮೆಟ್ರೋ, ಏರ್‌ಪೋರ್ಟ್, ಟೌನ್ ಶಿಪ್‌ ನಿರ್ಮಾಣದ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ಬಿಡದಿ ವ್ಯಾಪ್ತಿಯಲ್ಲಿ ನಿವೇಶನ ಖರೀದಿಸಲು ಎಷ್ಡು ಕಷ್ಟವೋ, ಅದಕ್ಕೆ ಇ-ಖಾತೆ ಪಡೆದುಕೊಳ್ಳಲು ಅಷ್ಟೇ ಕಷ್ಟಪಡಬೇಕಾಗಿತ್ತು.

ಆದರೆ ಇದೀಗ ಬಿಡದಿ ಪುರಸಭೆ ಹಮ್ಮಿಕೊಂಡಿರುವ ಇ-ಖಾತೆ ಆಂದೋಲನ ಖಾತೆ ಸಮಸ್ಯೆಗೆ ಮುಕ್ತಿ ಹಾಡಲು ಕಾರಣವಾಗಿದೆ. ಅನಗತ್ಯ ವಿಳಂಬ, ಕಚೇರಿ ಅಲೆದಾಟ, ಕಿರಿಕಿರಿ ಇಲ್ಲದೆ ಇ - ಖಾತೆ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಅದು ಅರ್ಜಿದಾರರ ಮನೆ ಬಾಗಿಲಿಗೆಯೇ ಇ-ಖಾತೆ ತಲುಪಿಸುವ ಮಾದರಿ ಕಾರ್ಯಕ್ಕೆ ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಮುಂದಾಗಿದ್ದಾರೆ.

ಬಿಡದಿ ಪುರಸಭಾ ವ್ಯಾಪ್ತಿಯ 23 ವಾರ್ಡ್‌ಗಳ ಸುಮಾರು 500ಕ್ಕೂ ಹೆಚ್ಚು ಇ-ಖಾತಾ ಪತ್ರಗಳನ್ನು ಮನೆ ಮನೆಗೆ ವಿತರಣೆಗೆ ಅಧ್ಯಕ್ಷ ಹರಿಪ್ರಸಾದ್ ಮುಂದಾಗಿದ್ದು ಸಾಂಕೇತಿಕವಾಗಿ ಶನಿವಾರ ವಿತರಣೆಗೆ ಚಾಲನೆ ನೀಡಿದರು.

ಪುರಸಭಾ ವ್ಯಾಪ್ತಿಯ 23 ವಾರ್ಡ್ ಗಳಲ್ಲಿ 21350 ಸುಮಾರು ಸ್ವತ್ತು ಗಳಿದ್ದು, ಇ-ಖಾತಾ ಪ್ರಾರಂಭದಿಂದ ಇದುವರೆಗೆ 5 ಸಾವಿರ ಇ ಖಾತಾ ವಿತರಣೆಗಳನ್ನು ಮಾಡಲಾಗಿದೆ. ಮಾಲೀಕರು ತಮ್ಮ ಸ್ವತ್ತು ಗಳಿಗೆ ಇ- ಸ್ವತ್ತು ಪಡೆಯುವುದು ಅವಶ್ಯಕ, ಮನೆ ಕಟ್ಟಿಕೊಳ್ಳಲು, ಬ್ಯಾಂಕಿನಿಂದ ಸಾಲ ಪಡೆಯಲು ಮತ್ತಿತರ ವಹಿವಾಟು ನಡೆಸಲು ಸಹ ನೆರವಾಗಲಿದೆ. ಈ ಪ್ರಾಮುಖ್ಯತೆಯಿರುವ ಇ-ಸ್ವತ್ತು ಎಲ್ಲರಿಗೂ ನೀಡಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.

ಇದಕ್ಕಾಗಿ ಡಿಸೆಂಬರ್ 9ರಿಂದ ಜನವರಿ 2ರವರೆಗೆ ಪ್ರತಿ ವಾರ್ಡ್‌ಗೆ ತೆರಳಿ ಇ-ಖಾತೆ ಅರ್ಜಿಗಳನ್ನು ಸ್ವೀಕರಿಸಿದ್ದೆವು. ಇಲ್ಲಿ ಸ್ವೀಕೃತವಾದ 500ಕ್ಕೂ ಅಧಿಕ ಅರ್ಜಿಗಳನ್ನು ಪರಿಶೀಲಿಸಿ ಕೇವಲ ಒಂದು ತಿಂಗಳೊಳಗೆ ಇ-ಖಾತೆಗಳನ್ನು ಸೃಜನೆ ಮಾಡಲಾಗಿದೆ. ಎಲ್ಲಾ ಸದಸ್ಯರು, ಅಧಿಕಾರಿ ಮತ್ತು ಸಿಬ್ಬಂದಿ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

ಹಲವು ದಿನಗಳಿಂದ ಇ- ಸ್ವತ್ತು ಪಡೆಯಲು ಸಾರ್ವಜನಿಕರು ಪರದಾಡುತ್ತಿದ್ದರು. ಅದನ್ನು ಮನಗಂಡು ಸ್ವತ್ತಿನ‌ ಮಾಲೀಕರಿಂದ ದಾಖಲೆಗಳನ್ನು ಪಡೆದು ಇ-ಸ್ವತ್ತು ಪತ್ರಗಳನ್ನು ವಿತರಣೆ ಮಾಡುತ್ತಿದ್ದೇವೆ. ಮುಂದುವರೆದು ಮಾಲೀಕರ ಮನೆ ಬಾಗಿಲಿಗೆ ಹೋಗಿ ಆ ವಾರ್ಡಿನ‌ ಸದಸ್ಯರ ಸಮ್ಮುಖ ದಲ್ಲಿ ವಿತರಣೆ ಮಾಡಲಾಗುವುದು. ಇದರಿಂದ ಪುರಸಭೆ ಆಡಳಿತವನ್ನು ಜನರ ಬಳಿಗೆ ಕೊಂಡೊ ಯ್ಯುವ ಜೊತೆಗೆ ಪುರಸಭೆ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಲಿದೆ ಎಂದು ಹರಿಪ್ರಸಾದ್ ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಲೋಹಿತ್ ಕುಮಾರ್, ಮುಖ್ಯಾಧಿಕಾರಿ ರಮೇಶ್, ಅಧಿಕಾರಿಗಳಾದ ಮುಸ್ತಫಾ, ನಟರಾಜು, ಗೌಸ್ ಮತ್ತಿತರರು ಹಾಜರಿದ್ದರು.

1ಕೆಆರ್ ಎಂಎನ್ 1.ಜೆಪಿಜಿ

ಬಿಡದಿ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಹರಿಪ್ರಸಾದ್ ಸ್ವತ್ತಿನ ಮಾಲೀಕರಿಗೆ ಇ - ಖಾತೆ ವಿತರಿಸಿದರು. ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಲೋಹಿತ್ ಕುಮಾರ್, ಮುಖ್ಯಾಧಿಕಾರಿ ರಮೇಶ್, ಅಧಿಕಾರಿಗಳಾದ ಮುಸ್ತಫಾ, ನಟರಾಜು, ಗೌಸ್ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!