ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಹೆಚ್ಚಾಲೆ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶಂಕರೇಗೌಡ ಮಾತನಾಡಿ, ಯಾವುದೇ ಸಂಘಟನೆ ಸ್ವಹಿತಾಸಕ್ತಿಯಿಂದ ಹೊರತಾಗಿರಬೇಕು. ಜ್ವಲಂತ ಸಮಸ್ಯೆಗಳಾದ ಬಗ್ಗೆ ಚರ್ಚೆ ಮಾಡಿ ಪರಿಹಾರಗಳನ್ನು ಕಂಡುಕೊಳ್ಳುವ ಈ ಸಮಯದಲ್ಲಿ ಕ್ಷುಲ್ಲಕ ಕಾರಣಗಳಿಗೆ ಮಾತನಾಡುವಂತಾಗಿದೆ. ದ್ವೇಷಮಯದ ಇಂದಿನ ಕಾಲದಲ್ಲಿ ನಮ್ಮ ದಾರ್ಶನಿಕರ ಚಿಂತನೆಗಳು ಪ್ರಸ್ತುತವಾಗಿವೆ ಎಂದರು.
ರಾಜ್ಯದಲ್ಲಿ 130 ಮಾದರಿಯ ಜನಪದ ಕಲೆಗಳಿದ್ದು ಇಂದು ಅನೇಕ ಕಲೆಗಳು ನಶಿಸಿಹೋಗಿವೆ. ಜನಪದ ಕಲೆಗಳನ್ನು ಸರ್ಕಾರವೂ ಸೇರಿದಂತೆ ಎಲ್ಲರೂ ನಿರ್ಲಕ್ಷಿಸುತ್ತಿರುವ ಪರಿಣಾಮ ಮೂಲೆಗುಂಪಾಗುತ್ತಿವೆ. ಜನಪದ ಕಲಾವಿದರು ಸರ್ಕಾರದ ಅನುದಾನವನ್ನೇ ನಂಬಿ ಬದುಕುವಂತಾಗಿರುವುದು ಬೇಸರದ ಸಂಗತಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ತಹಸಿಲ್ದಾರ್ ನವೀನ್ಕುಮಾರ್, ಶಂಕರೇಗೌಡ, ಜಿಲ್ಲಾ ಸಂಚಾಲಕ ದಿಂಡಗೂರು ಗೋವಿಂದರಾಜ್, ವೈದ್ಯಾಧಿಕಾರಿ ಡಾ.ವಿ.ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ದೀಪಿ, ಪುರಸಭಾ ಅಧ್ಯಕ್ಷೆ ಬನಶಂಕರಿ ರಘು, ತಾಲೂಕು ಕಸಪ ಅಧ್ಯಕ್ಷ ಎಚ್. ಎನ್. ಲೋಕೇಶ್, ಉದ್ಯಮಿ ಆನಂದ್ಗೌಡ ಡಿ. ಎಸ್, ರೈತ ಸಂಘದ ಅಧ್ಯಕ್ಷರಾದ ಮಾಳೇನಹಳ್ಳಿ ಹರೀಶ್, ರಾಮಚಂದ್ರು, ಸಂಘದ ಮುಖಂಡರಾದ ಜಬೀಉಲ್ಲಾಬೇಗ್, ರೋಹಿತ್ ಮಡಿವಾಳ್, ಪಾರ್ಥ ಮತ್ತಿತರಿದ್ದರು.