ಕೊಪ್ಪಳ: ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಗರಸಭೆ ಸಂಕೀರ್ಣದ ಮುಂದೆ ನಡೆಯುತ್ತಿರುವ ಹೋರಾಟದ ೨೯ನೇ ದಿನದ ಧರಣಿಯನ್ನು ಸಾಂಸ್ಕೃತಿಕ ಕಲಾಬಳಗದಿಂದ ನಡೆಸಲಾಯಿತು.
ಅವರು ಹೋರಾಟದಲ್ಲಿ ಧುಮುಕಿದ ಮೇಲೆ ಜನರು ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಆದರೆ ಇನ್ನೂ ಹೋರಾಟಕ್ಕೆ ಧುಮುಕಿಲ್ಲ. ಈಗ ನಗರಸಭೆಯ ವ್ಯಾಪ್ತಿ ಕಡಿಮೆ ಮಾಡಿ ಗ್ರಾಮೀಣ ಪ್ರದೇಶಕ್ಕೆ ಭೂಮಿ ಸೇರಿಸಿ ಆಸ್ತಿಗಳ, ನಿವೇಶನಗಳ ಮೌಲ್ಯ ಅಪಮೌಲೀಕರಣ ಮಾಡಲಾಗುತ್ತಿದೆ, ಇದನ್ನು ವಿರೋಧಿಸಿ ಕೋಪದಿಂದಲೇ ಕೊಪ್ಪಳವನ್ನೇ ಹಳ್ಳಿ ಎಂದು ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಕೇಳಿದ್ದೇನೆ ಎಂದರು.
ನಮ್ಮ ಮನೆಗೂ ಬಲ್ಡೋಟ ಎಂ.ಎಸ್.ಪಿ.ಎಲ್. ಪಲ್ಲೆಟ್ ಘಟಕದಿಂದ ಹಾರುಬೂದಿ, ಕರಿಧೂಳು ಬರುವದರಿಂದ ಅದನ್ನೇ ಉಸಿರಾಡಿ ಆರೋಗ್ಯ ಸಮಸ್ಯೆಯಾಗುತ್ತಿದೆ. ಜನ ಅಂತಿಮವಾಗಿ ರೊಚ್ಚಿಗೆದ್ದು ಬೀದಿಗಿಳಿಯಬೇಕು. ಈಗಾಗಲೇ ನಗರಸಭೆಯಲ್ಲಿ ಬಲ್ಡೋಟಾ ವಿಸ್ತರಣೆಯನ್ನು ವಿರೋಧಿಸಿ ಠರಾವು ಮಾಡಿದ್ದೇವೆ. ಅಧಿಕಾರದ ಕೊನೆಯ ದಿನದವರೆಗೂ ನನ್ನ ಸೇವೆಯನ್ನು ಈ ಕಾರ್ಖಾನೆ ವಿಸ್ತರಣೆ, ಹೊಸ ಸ್ಥಾಪನೆ ವಿರೋಧಿಸಲು ಚಲಾಯಿಸುತ್ತೇನೆ. ಜನರಿಗೆ ನ್ಯಾಯ ಸಿಗುವ ವರೆಗೆ ಈ ಚಳವಳಿಯ ಭಾಗವಾಗಿರುತ್ತೇನೆ ಎಂದರು.ಹೋರಾಟ ಸಮಿತಿ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ನಗರಸಭೆ ಇನ್ನೊಮ್ಮೆ ಕಾರ್ಖಾನೆ ವಿರುದ್ಧ ಠರಾವು ಮಾಡಿ ಸರಕಾರಕ್ಕೆ ಕಳುಹಿಸಬೇಕು, ೩೧ ಜನ ಸದಸ್ಯರು ಧರಣಿಗೆ ಬೆಂಬಲ ಕೊಟ್ಟು ಸ್ಪಷ್ಟ ಸಂದೇಶ ಕೊಡಬೇಕು. ನಂತರ ಪ್ರತಿ ದಿನ ಒಬ್ಬ ಸದಸ್ಯರು ತಮ್ಮ ವಾರ್ಡಿನ ನಾಗರಿಕರೊಂದಿಗೆ ಹೋರಾಟದಲ್ಲಿ ಭಾಗವಹಿಸಿಬೇಕು. ಇದು ಜನಪ್ರತಿನಿಧಿಗಳು ತನ್ನ ಮತದಾರರಿಗೆ ಮಾಡುವ ಮೊದಲ ಉಪಕಾರ ಹಾಗೂ ಕರ್ತವ್ಯ. ನಗರಸಭೆ ತನ್ನ ಪಾಲಿನ ಕೆಲಸ ಮಡುವ ಜೊತೆಗೆ ನಗರವನ್ನು ಧೂಳು ಮುಕ್ತ, ಸ್ವಚ್ಛ ನಗರವಾಗಿಸುವಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.