ಕುಟುಂಬ ರಕ್ಷಣೆಯೇ ವಿಮಾ ಗುರಿ: ಮುದಿಯಪ್ಪ

KannadaprabhaNewsNetwork |  
Published : Oct 09, 2024, 01:33 AM IST
ಇಳಕಲ್ಲ ೪ | Kannada Prabha

ಸಾರಾಂಶ

ಇಂದು ಸಾರ್ವಜನಿಕರ ವಲಯದಲ್ಲಿ ಕೆಲಸ ಮಾಡುತ್ತಿರುವ ಜೀವ ವಿಮಾ ಕಂಪನಿಯು ತನ್ನನ್ನು ನಂಬಿದ ಜನರ ಕುಟುಂಬ ರಕ್ಷಣೆಯನ್ನು ಮಾಡುತ್ತದೆ ಎಂದು ಇಳಕಲ್ಲ ನಗರದ ಜೀವ ವಿಮಾ ಕಂಪನಿಯ ಪ್ರತಿನಿಧಿಗಳ ಅಧ್ಯಕ್ಷ ಮುದಿಯಪ್ಪ ಲಮಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದು ಸಾರ್ವಜನಿಕರ ವಲಯದಲ್ಲಿ ಕೆಲಸ ಮಾಡುತ್ತಿರುವ ಜೀವ ವಿಮಾ ಕಂಪನಿಯು ತನ್ನನ್ನು ನಂಬಿದ ಜನರ ಕುಟುಂಬ ರಕ್ಷಣೆಯನ್ನು ಮಾಡುತ್ತದೆ ಎಂದು ಇಳಕಲ್ಲ ನಗರದ ಜೀವ ವಿಮಾ ಕಂಪನಿಯ ಪ್ರತಿನಿಧಿಗಳ ಅಧ್ಯಕ್ಷ ಮುದಿಯಪ್ಪ ಲಮಾಣಿ ಹೇಳಿದರು.

ನಗರದ ಹಡಪದ ಅಪ್ಪಣ್ಣ ಮಂಗಲ ಭವನದಲ್ಲಿ ಭಾರತಿಯು ಜೀವ ವಿಮಾ ಪ್ರತಿನಿಧಿಗಳ ಇಳಕಲ್ಲ ಶಾಖೆಯ ಕ್ಷೇಮಾಭಿವೃದ್ಧಿ ಸಂಘದ ೧೩ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ಸಂಪರ್ಕದಲ್ಲಿರುವ ಜೀವ ವಿಮಾ ಕಂಪನಿ ಬಗ್ಗೆ ಸಾರ್ವಜನಿಕರಲ್ಲಿ ಅಪಾರ ವಿಶ್ವಾಸವಿದೆ ಎಂದರು.ಜನರ ನಂಬುಗೆಯನ್ನು ನಾವು ಇಂದು ಉಳಿಸಿಕೊಳ್ಳಬೇಕಾಗಿದೆ. ಅವರಿಗೆ ಸರಿಯಾದ ವಿಮಾ ಸೇವೆ ನೀಡಿ ಸಾರ್ವಜನಿಕರ ಸೇವೆಯೊಂದಿಗೆ ಸಂಸ್ಥೆಗೆ ಉತ್ತಮ ಆದಾಯ ತರುವ ಗುರಿ ನಮ್ಮದಾಗಬೇಕು. ಅದಕ್ಕಾಗಿ ನೀವು ಸರಿಯಾದ ಸೇವೆ ಸಲ್ಲಿಸಿ ಸಂಸ್ಥೆಯ ಅಭಿವೃದ್ಧಿಯೊಂದಿಗೆ ನಿಮ್ಮ ಅಭಿವೃದ್ಧಿ ಮಾಡಿಕೊಳ್ಳಿ. ಸಾರ್ವಜನಿಕರ ಸೇವೆ ಹಾಗೂ ಅವರ ನಮ್ಮದಿಯೆ ನಮ್ಮ ಸಂಸ್ಥೆಯ ಗುರಿಯಾಗಿರಲಿ ಎಂದು ತಿಳಿಸಿದರು.ಜೀವ ವಿಮಾ ಇಳಕಲ್ಲ ಶಾಖೆಯ ಮ್ಯಾನೇಜರ್‌ ಮಾರುತೇಶ ಪಾಟೀಲ ಹಾಗೂ ಬೆಳಗಾವಿಯ ಪರುಶರಾಮ ನಾಲತವಾಡ ಮಾತನಾಡಿದರು. ಮುಖ್ಯ ಅತಿಥಗಳಾಗಿ ಅಶೋಕ ಗೊಂಬಿ, ಜೀವ ವಿಮಾ ಸಂಸ್ಥೆಯ ನಿವೃತ ಅಭಿವೃದ್ಧಿ ಅಧಿಕಾರಿಗಳು ಆಗಮಿಸಿದ್ದರು. ಸಮಾರಂಭದಲ್ಲಿ ಮೃಬೂಬಸಾಬ್‌ ಪಿಂಜಾರ, ಸಿದ್ದರಾಮೇಶ್ವರ ಸರೂರ, ಶರಣಪ್ಪ ತುಂಬರಗುದ್ದಿ, ಯಮನೂರ ಗೋಟುರ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತಿರಿದ್ದರು. ಇದೇ ವೇಳೆಯಲ್ಲಿ ಸಾಧನೆ ಮಾಡಿದ ಸದಸ್ಯರನ್ನು ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು. ಮೃಬುಸಾಬ್‌ ಪಿಂಜಾರ ಸ್ವಾಗತಿಸಿದರು. ಚಿದಾನಂದ ದೇಶಪಾಂಡೆ ವಂದಿಸಿದರು. ಸಂಗಮೇಶ ಬೇವೂರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!