ರೈತನ ಮಗನಿಗೆ ಒಲಿದ 5 ಚಿನ್ನದ ಪದಕ

KannadaprabhaNewsNetwork | Published : Oct 17, 2023 12:30 AM

ಸಾರಾಂಶ

ಇಲ್ಲಿನ ಪಶುವೈದ್ಯಕೀಯ ಮಹಾವಿದ್ಯಾಲಯ ಬೀದರ್‌ನಲ್ಲಿ ವ್ಯಾಸಾಂಗ ಮಾಡಿದ ಬೆಳಗಾಂವ ಜಿಲ್ಲೆಯ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದ ಸಚಿನ್ ಹುದ್ದಾರ್ 5 ಚಿನ್ನದ ಪದಕ ಪಡೆದು ಕನ್ನಡಪ್ರಭದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ
ಬೀದರ್: ಇಲ್ಲಿನ ಪಶುವೈದ್ಯಕೀಯ ಮಹಾವಿದ್ಯಾಲಯ ಬೀದರ್ನಲ್ಲಿ ವ್ಯಾಸಾಂಗ ಮಾಡಿದ ಬೆಳಗಾಂವ ಜಿಲ್ಲೆಯ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದ ಸಚಿನ್ ಹುದ್ದಾರ್ 5 ಚಿನ್ನದ ಪದಕ ಪಡೆದು ಕನ್ನಡಪ್ರಭದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಮುಂದೆ ನಾನು ವೆಟರ್‌ನರಿಯಲ್ಲಿ ಸರ್ಜನ್‌ ಆಗುವ ಗುರಿ ಹೊಂದಿದ್ದು, ಈಗಾಗಲೇ ಪಿಜಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತಿದ್ದೇನೆ. ರೈತ ಕುಟುಂಬದಿಂದ ಬಂದಿರುವ ಸಚಿನ್ ಹುದ್ದಾರ ತಂದೆ ದುಂಡಪ್ಪ ಅವರು ಇದ್ದ ಜಮಿನಿನಲ್ಲಿ ವ್ಯವಸಾಯ ಮಾಡುತ್ತಿದ್ದರೆ ತಾಯಿ ಮನೆ ನೋಡಿಕೊಳ್ಳುತಿದ್ದಾರೆ. ಬಡ ರೈತ ತಂದೆ ಹಾಗೂ ತಾಯಿಗೆ ಆಸರೆಯಾಗಲು ಹಾಗೂ ಮುಖ ಪ್ರಾಣಿಗಳ ಸೇವೆಗೆ ಮುಂದಾಗಿದ್ದೇನೆ ಎಂದು ಸಚಿನ ತನ್ನ ಅನುಭವ ಹಂಚಿಕೊಂಡಿದ್ದಾರೆ.

Share this article