ರೈತರು ಗುಣಮಟ್ಟದ ಗೊಬ್ಬರ ಪಡೆಯಬೇಕು: ಕೃಷಿ ಅಧಿಕಾರಿ ಅತೀಕ್ ಉಲ್ಲಾ

KannadaprabhaNewsNetwork |  
Published : May 25, 2025, 02:08 AM IST
ಹೊನ್ನಾಳಿ ಫೋಟೋ 24ಎಚ್.ಎಲ್.ಐ1.ಪಟ್ಟಣದ ರಸಗೊಬ್ಬರದ ಅಂಗಡಿಗೆ ಭೇಟಿ ನೀಡಿ ರಸಗೊಬ್ಬರಗಳ ಮಾದರಿಯನ್ನು ಸಂಗ್ರಹಿಸುತ್ತಿರುವ ಕೃಷಿ ಅಧಿಕಾರಿ ಅತೀಕ್ ಉಲ್ಲಾ ಕೃಷಿ ಇಲಾಖೆಯ ಇತರೆ ಅಧಿಕಾರಿಗಳು ಇದ್ದರು. . | Kannada Prabha

ಸಾರಾಂಶ

ರಸಗೊಬ್ಬರಗಳ ಪೋಷಕಾಂಶಗಳ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆಯ ನಿರಿಕ್ಷೆಯಿದ್ದು, ರೈತರು ಗುಣಮಟ್ಟದ ಗೊಬ್ಬರಗಳನ್ನು ಅಧಿಕೃತ ಲೈಸೆನ್ಸ್ ಪಡೆದ ಮಾರಾಟಗಾರರಿಂದಲೇ ಖರೀದಿಸಬೇಕು

ವಿವಿಧ ರಸಗೊಬ್ಬರ ಮಳಿಗೆಗಳಿಗೆ ಭೇಟಿ, ಪರಿಶೀಲನೆ । ಮಾದರಿ ಸಂಗ್ರಹ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಅವಳಿ ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗುತಿದ್ದು, ರಸಗೊಬ್ಬರಗಳ ಪೋಷಕಾಂಶಗಳ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆಯ ನಿರಿಕ್ಷೆಯಿದ್ದು, ರೈತರು ಗುಣಮಟ್ಟದ ಗೊಬ್ಬರಗಳನ್ನು ಅಧಿಕೃತ ಲೈಸೆನ್ಸ್ ಪಡೆದ ಮಾರಾಟಗಾರರಿಂದಲೇ ಖರೀದಿಸಬೇಕು ಎಂದು ಕೃಷಿ ಅಧಿಕಾರಿ ಅತೀಕ್ ಉಲ್ಲಾ ಹೇಳಿದರು.

ತಾಲೂಕಿನಲ್ಲಿ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ರಸಗೊಬ್ಬರದ ಗುಣಮಟ್ಟ ನಿಯಂತ್ರಣದ ಹಿನ್ನೆಲೆಯಲ್ಲಿ ವಿವಿಧ ಮಳಿಗೆಗಳಿಂದ ರಸಗೊಬ್ಬರದ ಮಾದರಿ ಸಂಗ್ರಹಿಸಿ ಮಾತನಾಡಿದರು.

ಮೆಕ್ಕೆಜೋಳ ಮತ್ತ ಇತರೆ ಬೆಳೆಗಳಲ್ಲಿ ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳಾದ 10:26:26 , 20:20:00:13, 15:15:15:09 , 19:19:19 , 17:17:17 ,14:28:14 ಮತ್ತು 16:20:00:13, ಬಳಸಿದರೆ ಮಣ್ಣಿನಲ್ಲಿ ಸಮತೋಲಿತ ರಂಜಕ ಪೋಷಕಾಂಶವನ್ನು ಕಾಯ್ದುಕೊಳ್ಳುವುದರ ಜೋತೆಯಲ್ಲಿ ಮೆಕ್ಕೇಜೊಳ ಮತ್ತು ಇತರೆ ಬೆಳೆಗಳ ಸಸ್ಯಗಳು ಸಂಯುಕ್ತ ರಸಗೊಬ್ಬರಗಳಿಂದ ಲಭ್ಯವಿರುವ ರಂಜಕವನ್ನು ಮಣ್ಣಿನಿಂದ ಬೇರಿಗೆ ಸುಸಲಿತವಾಗಿ ಹೀರಿಕೊಂಡು ಸಸ್ಯ ಬೆಳೆವಣಿಗೆಗೆ ಸಹಾಯಕವಾಗಿ ಅಧಿಕ ಇಳುವರಿ ಪಡೆಯುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದರು.

ಸಾರಜನಕ, ರಂಜಕ, ಪೊಟ್ಯಾಷ್ ಮಿಶ್ರಿತ ಗೊಬ್ಬರಗಳನ್ನು ಬಳಸುವುದರಿಂದ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೋಟ್ಯಾಷ್ ಲಭ್ಯವಾಗಿ ಕೃಷಿ ಬೆಳೆಗಳಲ್ಲಿ ಕೀಟಬಾಧೆ, ರೋಗಬಾಧೆ ಹತೋಟಿಯಾಗಲಿದೆ ಆದ್ದರಿಂದ ಎಲ್ಲಾ ರೈತರು ಸಂಯುಕ್ತ ರಸಗೊಬ್ಬರಗಳ ಸದುಪಯೋಗವನ್ನು ಪಡೆಕೋಳ್ಳಬೆಕೆಂದು ಎಂದು ಹೇಳಿದರು

ಕಳೆದ ಐದು ವರ್ಷದಿಂದ ನಾನು ಡಿ.ಎ.ಪಿಗೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳನ್ನು ತಳಗೊಬ್ಬರವಾಗಿ ಬಳಕೆ ಮಾಡುತಿದ್ದೆನೆ ಇದರಿಂದ ಮೆಕ್ಕೆಜೋಳ ಬೆಳಗೆ ಎಷ್ಟು ರಂಜಕ ಬೇಕು ಅಷ್ಟನ್ನು ಮಾತ್ರ ಸಮತೋಲಿತವಾಗಿ ನೀಡುತ್ತ ಬಂದಿರುತ್ತೇನೆ ಮತ್ತು ನೀರಿನಲ್ಲಿ ಕರಗುವ 19:19:19 ಮತ್ತು ಕೃಷಿ ಇಲಾಖೆಯಲ್ಲಿ ಸಿಗುವ ಎಂ.ಎನ್ ಲಿಕ್ವಿಡ್ ಒಂದು ತಿಂಗಳ ಬೆಳೆಗೆ ಸಿಂಪಡಿಸಿದಾಗ ಬೆಳೆಯು ಆರೋಗ್ಯಕರವಾಗಿ ಬೆಳೆದು ಹೆಚ್ಚಿನ ಇಳುವರಿಯನ್ನು ಪಡೆದಿದ್ದೆನೆ ಈ ವರ್ಷವೂ ಇದೇ ಪದ್ದತಿಯನ್ನು ಅನುಸರಿಸುತ್ತೇನೆ ಎಂದು ತಾಲೂಕಿನ ಹತ್ತೂರಿನ ರೈತ ಸೋಮಶೇಖರ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮತಗಿಯಲ್ಲಿ ನಿವೃತ್ತ ಯೋಧ ಲಕ್ಷ್ಮಣಗೆ ಭವ್ಯ ಸ್ವಾಗತ
ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅಗತ್ಯ: ಉ.ಕ.ಹೋರಾಟ ಸಮಿತಿ