ಕನ್ನಡಪ್ರಭ ವಾರ್ತೆ ಉಚ್ಚಿಲಉಚ್ಚಿಲ ಮಹಾಲಕ್ಷ್ಮೀ ಕ್ಷೇತ್ರದ ದಸರಾಕ್ಕೆ ವರ್ಷದಿಂದ ವರ್ಷಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ, ಇದು ಈ ಕ್ಷೇತ್ರವು ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.ಅವರು ಅಧ್ಯಕ್ಷರಾಗಿರುವ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಶನಿವಾರ ಉಚ್ಚಿಲ ಉಡುಪಿ ದಸರಾದಲ್ಲಿ ನಡೆದ ಪೊಣ್ಣು ಪಿಲಿ ನಲಿಕೆ- 2025ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಸ್ಪರ್ಧೆಯನ್ನು ಉದ್ಘಾಟಿಸಿದರು. ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉದ್ಯಮಿ ಶ್ಯಾಮಿಲಿ ನವೀನ್, ಸಮಾಜ ಸೇವಕಿ ನಿರುಪಮಾ ಶೆಟ್ಟಿ, ನೃತ್ಯಕಲಾವಿದೆ ದೀಕ್ಷಾ ಬ್ರಹ್ಮಾವರ, ದೇವಳದ ಆಡಳಿತ ಮಂಡಳಿಯ ಪ್ರಮುಖರಾದ ಸತೀಶ್ ಕುಂದರ್, ವಿನಯ ಕರ್ಕೇರ, ವಾಸುದೇವ ಸಾಲ್ಯಾನ್, ಅಜಿತ್ ಕೊಡವೂರು, ಸಂಧ್ಯಾದೀಪ ಸುನಿಲ್ ಮುಂತಾದವರಿದ್ದರು.ಸ್ಪರ್ಧೆಯ ನಂತರ ಈ ದಸರಾದ ರೂವಾರಿ ನಾಡೋಜ ಡಾ. ಜಿ. ಶಂಕರ್, ವಿಜೇತರಿಗೆ ಮಹಾಲಕ್ಷ್ಮೀ ಕೋಪರೇಟಿವ್ ಬ್ಯಾಂಕ್ ಪ್ರಾಯೋಜಿತ ಬಹುಮಾನಗಳನ್ನು ವಿತರಿಸಿದರು.ಗುಣಮಟ್ಟದ ಹುಲಿಕುಣಿತ
ವೈಯುಕ್ತಿಕ - ಪ್ರಥಮ: ಸೌಮ್ಯ ಸುರೇಂದ್ರ, ದ್ವಿತೀಯ: ತನಿಷ್ಕಾ ಭಂಡಾರಿ, ತೃತೀಯ: ರಮ್ಯಾ ರೂಪೇಶ್.