ಭೂಮಿಯ ಹಕ್ಕು ಕಸಿದುಕೊಳ್ಳಲುಎಸ್‌ಐಟಿ ಮುಂದಾದರೆ ಹೋರಾಟ

KannadaprabhaNewsNetwork |  
Published : Nov 05, 2025, 01:15 AM IST
ಎಚ್.ಎಚ್.ದೇವರಾಜ್ | Kannada Prabha

ಸಾರಾಂಶ

ಈ ಹಿಂದೆ ಅಧಿಕಾರಿ, ಜನಪ್ರತಿನಿಧಿಗಳೇ ರೈತರಿಗೆ ಅಧಿಕೃತವಾಗಿ ನೀಡಿರುವ ಭೂಮಿಯ ಹಕ್ಕನ್ನು ಕಸಿದುಕೊಳ್ಳಲು ಎಸ್‌ಐಟಿ ಮುಂದಾದರೆ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಎಚ್ಚರಿಸಿದರು.

ಚಿಕ್ಕಮಗಳೂರು: ಈ ಹಿಂದೆ ಅಧಿಕಾರಿ, ಜನಪ್ರತಿನಿಧಿಗಳೇ ರೈತರಿಗೆ ಅಧಿಕೃತವಾಗಿ ನೀಡಿರುವ ಭೂಮಿಯ ಹಕ್ಕನ್ನು ಕಸಿದುಕೊಳ್ಳಲು ಎಸ್‌ಐಟಿ ಮುಂದಾದರೆ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಎಚ್ಚರಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1980 ರಿಂದೀಚೆಗೆ ಆಗಿರುವ ಭೂ ಮಂಜೂರಾತಿಯನ್ನು ರದ್ದು ಮಾಡಲು ಎಸ್‌ಐಟಿಗೆ ಸರ್ಕಾರ ಆದೇಶಿಸಿದೆ. ಭೂಮಿ ಮಂಜೂರಾತಿ ಮಾಡಬೇಕಾದರೆ ಶಾಸಕ, ಅಧಿಕಾರಿಗಳನ್ನೊಳಗೊಂಡ ಸಮಿತಿಯಿಂದ ಅನುಮೋದನೆಯಾಗಿ ರೈತರಿಗೆ ಭೂಮಿಯ ಸಾಗುವಳಿ ಚೀಟಿ ನೀಡಲಾಗಿದೆ. ಅಂದಿನ ಜಿಲ್ಲಾಧಿಕಾರಿ, ತಹಸೀಲ್ದಾರ್, ಶಾಸಕರಿಗೆ ಪ್ರಜ್ಞೆ ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಅರಣ್ಯ ಪ್ರದೇಶದ ಭೂಮಿಗೆ ಅವರು ಸಾಗುವಳಿ ಚೀಟಿ ನೀಡಿರುವ ತಪ್ಪಿಗೆ ರೈತರು ಈಗ ಪರಿಣಾಮ ಎದುರಿಸಬೇಕಾಗಿದೆ. ಹೀಗಾಗಿ ಮಂಜೂರು ಮಾಡಿರುವ ಅಧಿಕಾರಿ ಜನಪ್ರತಿನಿಧಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲು ಮಾಡಬೇಕೆಂದು ಒತ್ತಾಯಿಸಿದರು.

ಮೀಸಲು ಅರಣ್ಯ ಪ್ರದೇಶ ಒತ್ತುವರಿಯಾಗಿದ್ದರೆ ಅಥವಾ ಸಾಗುವಳಿ ಚೀಟಿ ನೀಡಿದ್ದರೆ ಅಂತಹ ಭೂಮಿಯನ್ನು ಎಸ್‌ಐಟಿ ಗುರುತಿಸಿ ತೆರವುಗೊಳಿಸಲಿ. ದೊಡ್ಡ ದೊಡ್ಡ ಕಂಪನಿಗೆ ಮಂಜೂರು ಮಾಡಿರುವ ಭೂಮಿಯನ್ನು ಹಿಂಪಡೆಯಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಡೀಮ್ಡ್ ಅರಣ್ಯದಲ್ಲಿ ಸಾಗುವಳಿ ಚೀಟಿ ಪಡೆದಿರುವ ರೈತರನ್ನು ಯಾವುದೇ ಕಾರಣಕ್ಕೂ ತೆರವು ಮಾಡಬಾರದು. ಒಂದು ವೇಳೆ ಮಾಡಿದಲ್ಲಿ ರೈತರು ಬೀದಿಗೆ ಇಳಿಯಲಿದ್ದಾರೆಂದು ತಿಳಿಸಿ ಜಿಲ್ಲೆಯ 5 ಮಂದಿ ಶಾಸಕರು ಈ ಬಗ್ಗೆ ಚರ್ಚಿಸಿ ಸದನದಲ್ಲಿ ಧ್ವನಿ ಎತ್ತಬೇಕೆಂದು ಆಗ್ರಹಿಸಿದರು.ಇತೀಚೆಗೆ ಶೃಂಗೇರಿ ತಾಲೂಕಿನಲ್ಲಿ ಆನೆ ದಾಳಿಯಿಂದ ಇಬ್ಬರು ಬಲಿಯಾಗಿರುವುದು ದುಖಃಕರ ಸಂಗತಿ. ಶಾಸಕ ಟಿ.ಡಿ.ರಾಜೇಗೌಡ, ಸಚಿವ ಕೆ.ಜೆ.ಜಾರ್ಜ್ ಅವರು ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿ ಆರ್ಥಿಕ ಸಹಾಯ ನೀಡಿದ್ದಾರೆ. ಆದರೆ, ಬಿಜೆಪಿ ಮುಖಂಡರು ಸಾವಿನಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಸಚಿವ ಜೀವರಾಜ್ ಹಾಲಿ ಶಾಸಕರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ಆನೆ ದಾಳಿ ತಡೆ ಕುರಿತಂತೆ ಆಡಳಿತ, ಪ್ರತಿಪಕ್ಷದ ಮುಖಂಡರು ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಅತೀಕ್‌ಖೈಸರ್, ಡಿ.ಸಿ.ಪುಟ್ಟೇಗೌಡ, ಇಂದಾವರ ಲೋಕೇಶ್, ಸಂತೋಷ್, ಸಣ್ಣಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ