)
ಕಲಬುರಗಿ: ದಿಲ್ಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡ ವಿದ್ಯಾರ್ಥಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಧರಣಿ ನಡೆನಡೆಸುತ್ತಿರುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.
ವಂದೇ ಮಾತರಂನ ಎರಡು ಚರಣ ಹಾಡುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ, ಈ ಕುರಿತು ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ನೀವು ಹಿಂದಿನ ಇತಿಹಾಸ ಒಮ್ಮೆ ತಗೆದು ನೋಡಿ. ಇಷ್ಟು ವರ್ಷದ ಬಳಿಕ ಈಗೆ ಯಾಕೆ ಅದರ ಬಗ್ಗೆ ಮಾತಾಡುತ್ತಿದ್ದೀರಿ. ಮೊದಿಯವರು ಪ್ರಧಾನಿಯಾಗಿ 12 ವರ್ಷ ಆಗಿದೆ. ನಮ್ಮ ಪಕ್ಷದಲ್ಲಿ ಜನಗಣ ಮನ ಸಹ ಹಾಡುತ್ತೇವೆ. ನಾವು ಹೀಗೆ ಹಾಡಿದರೆ ದೇಶ ದ್ರೋಹಿಗಳಾ? ರವೀಂದ್ರನಾಥ ಠಾಗೂರ್, ಸುಭಾಸ್ ಚಂದ್ರ ಭೋಸ್ ಇವರೆಲ್ಲಾ ದೇಶದ್ರೋಗಿಗಳಾ ? ಎಂದು ಪ್ರಶ್ನಿಸಿದರು.
ಅಮಿತ್ ಷಾ ಅವರಿಗೆ ಈಗ ದೇಶ ಭಕ್ತಿ ಶುರುವಾಗಿದೆ. ಆಗ ಇವರು ಇನ್ನು ಯಾರು ಹುಟ್ಟಿರಲಿಲ್ಲ. ದೇಶಕ್ಕಾಗಿ ಸ್ವಾತಂತ್ರ್ಯ ತಂದವರ ಬಗ್ಗೆ ಅಪಮಾನ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.