ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪಟ್ಟಣದ ಟೊಣಪಿನಾಥ ಸಮುದಾಯ ಭವನದಲ್ಲಿ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣಾದವಳು ಗಂಡಿಗೆ ಸಮಾನಳಾಗಿ ಎಲ್ಲವನ್ನೂ ಮಾಡುತ್ತೇನೆ ಎಂದು ಎಲ್ಲೆ ಮೀರುವುದರಿಂದ ಸಮಾನತೆ ಬರುವುದಿಲ್ಲ. ಬದಲಾಗಿ ಹೆಣ್ಣಾಗಿ ತನ್ನ ಪಾಲಿನ ಕರ್ತವ್ಯ ಮತ್ತು ಜವಾಬ್ದಾರಿ ನಿಭಾಯಿಸುವ ನಿಯತ್ತು ತೋರಿದರೆ ಮಾನ್ಯತೆ ಗಳಿಸಬಹುದು. ಮಹಿಳೆ ಪುರುಷನಿಗೆ ಸಮಾನಳಾಗುವ ಹಂಬಲಕ್ಕಿಂತ ಮಾನ್ಯಳಾಗುವತ್ತ ಮನಸು ಮಾಡಬೇಕು ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಪನಾ ಅನಿಗೋಳ ಮಾತನಾಡಿ, ಕಪಾಟಿನಲ್ಲಿ ಹೆಚ್ಚು ಬಟ್ಟೆ, ಮೈಮೇಲೆ ಹೆಚ್ಚು ಬಂಗಾರ ಹೊಂದಿರುವ ಮತ್ತು ಮನೆಯಲ್ಲಿ ಹೆಚ್ಚು ಮಾತಾಡುವ ಮಹಿಳೆ ಮಕ್ಕಳಲ್ಲಿ ಸಂಸ್ಕಾರ ಮೂಡಿಸಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಕೂಡ ಹೆಚ್ಚು ಜವಾಬ್ದಾರಿ ಹೊಂದಿರಬೇಕು ಎಂದು ಸಲಹೆ ನೀಡಿದರು.ಈ ವೇಳೆ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಪ್ರೀತಿ ಅಂಗಡಿ, ಸಂಜನಾ ಹೊಸೂರ ಭರತನಾಟ್ಯ ಪ್ರರ್ಶಿಸಿದರು. ಮಹಿಳೆಯರು ಮರಾಠಿ, ಮಾರ್ವಾಡಿ, ಕೊಡಗು, ಉತ್ತರಕರ್ನಾಟಕ ಸೇರಿದಂತೆ ನಾಡಿನ ನಾನಾ ಸಂಸ್ಕೃತಿಯ ಸಾಂಪ್ರದಾಯಿಕ ಉಡುಗೆ ತೊಟ್ಟು ತಂಡೋಪತಂಡವಾಗಿ ರ್ಯಾಂಪ್ ವಾಕ್ ಮಾಡುವ ಮೂಲಕ ವಸ್ತ್ರ ವೈವಿಧ್ಯತೆ ಸಾರಿದರು. ಭರಪೂರ ವೇದಿಕೆಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಎಲ್ಲ ಮಹಿಳೆಯರು ಸಾಮೂಹಿಕ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು.