ಮೇವಿನ ಸರಬರಾಜು ವಾಹನಕ್ಕೆ ವಿದ್ಯುತ್ ತಗುಲಿ ಬೆಂಕಿ

KannadaprabhaNewsNetwork |  
Published : Apr 18, 2024, 02:22 AM IST
 ಮೇವು ಸರಬರಾಜು ಮಾಡುವ ವಾಹನಕ್ಕೆ  ಆಕಸ್ಮಿಕ ವಿದ್ಯುತ್ ತಗುಲಿ ಬೆಂಕಿ | Kannada Prabha

ಸಾರಾಂಶ

ಗೋಶಾಲೆಗಳಿಗೆ ಮೇವು ಸರಬರಾಜು ಮಾಡುವ ವಾಹನ ಆಕಸ್ಮಿಕ ವಿದ್ಯುತ್ ಅವಘಡ ಸಂಭವಿಸಿ ಲಾರಿ ಸಮೇತ ಮೇವು ಸುಟ್ಟು ಭಸ್ಮವಾಗಿರುವ ಘಟನೆ ಜರುಗಿದೆ.

ಕನ್ನಡಪ್ರಭ ವಾರ್ತೆ ಹನೂರು

ಗೋಶಾಲೆಗಳಿಗೆ ಮೇವು ಸರಬರಾಜು ಮಾಡುವ ವಾಹನ ಆಕಸ್ಮಿಕ ವಿದ್ಯುತ್ ಅವಘಡ ಸಂಭವಿಸಿ ಲಾರಿ ಸಮೇತ ಮೇವು ಸುಟ್ಟು ಭಸ್ಮವಾಗಿರುವ ಘಟನೆ ಜರುಗಿದೆ.

ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಯ್ಯನಹಟ್ಟಿ ಗ್ರಾಮ ಹಾಗೂ ಪಳನಿ ಮೇಡು ಮಾರ್ಗ ಮಧ್ಯದಲ್ಲಿ ಗೋಶಾಲೆಗೆ ಮೇವು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಜರುಗಿದೆ.

ಗೋಶಾಲೆಗೆ ತಲುಪಬೇಕಿದ್ದ ಮೇವು:

ತಾಲೂಕಿನ ಕುರಟ್ಟಿ ಹೊಸೂರು ಚೆನೂರು ಹಾಗೂ ಎನ್ಎಸ್ ದೊಡ್ಡಿ ಗ್ರಾಮದ ಗೋಶಾಲೆ ತೆರಳುತ್ತಿದ್ದ ಲಾರಿ ಆಕಸ್ಮಿಕವಾಗಿ ಮಾರ್ಗ ಮಧ್ಯದಲ್ಲಿ ಜೋತುಬಿದ್ದು ತಳಮಟ್ಟದಲ್ಲಿದ್ದ ವಿದ್ಯುತ್ ತಂತಿಗೆ ತಗಲಿ ಮೇವು ಸಮೇತ ಲಾರಿ,ಕೆಲ ನಿಮಿಷಗಳಲ್ಲೇ ಸುಟ್ಟು ಸಂಪೂರ್ಣವಾಗಿ ಭಸ್ಮವಾಗಿದೆ. ಅಧಿಕಾರಿಗಳು ಭೇಟಿ : ವಿವಿಧ ಗ್ರಾಮಗಳಲ್ಲಿರುವ ಗೋಶಾಲೆಗಳಿಗೆ ಮೇವು ಸಾಗಣೆ ಮಾಡುತ್ತಿದ್ದ ವಾಹನ ಬೆಂಕಿಗಾಹುತಿಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ವಾಹನ ಸಮೇತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಸಂಪೂರ್ಣವಾಗಿ ವಾಹನ ಸುಟ್ಟು ಭಸ್ಮವಾಗಿತ್ತು. ಈ ಸಂಬಂಧ ಘಟನಸ್ಥಳಕ್ಕೆ ರಾಮಾಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹನೂರು ತಾಲೂಕಿನ ಚೆನ್ನೂರು ಮತ್ತು ಎನ್ಎಸ್ ದೊಡ್ಡಿ ಗ್ರಾಮಗಳ ಗೋ ಶಾಲೆಗಳಿಗೆ ಹೋಗಬೇಕಾಗಿದ್ದ ಮೇವು ತುಂಬಿದ ವಾಹನ ವಿದ್ಯುತ್ ತಂತಿಗೆ ತಗುಲಿ ಸ್ಥಳದಲ್ಲಿಯೇ ವಾಹನ ಸಮೇತ 5 ಟನ್ ಮೇವು ಸಹ ಭಸ್ಮವಾಗಿದೆ. ಇದು ಟೆಂಡರ್ ದಾರದ ಜವಾಬ್ದಾರಿ ಆಗಿರುತ್ತದೆ ಜಿಲ್ಲಾಧಿಕಾರಿ ಕರೆದಿರುವ ಟೆಂಡರ್‌ನಲ್ಲಿ ಸಹ ಇಂತಹ ಅವಘಡಗಳ ಬಗ್ಗೆ ಅವರಿಗೆ ನಿಬಂಧನೆ ಇದೆ. ಚೆನ್ನೂರು ಮತ್ತು ಎನ್ಎಸ್ ದೊಡ್ಡಿ ಗ್ರಾಮಕ್ಕೆ ಬೇರೆ ವಾಹನದ ಮೇವು ಸರಬರಾಜು ವ್ಯವಸ್ಥೆ ಕಲ್ಪಿಸಲಾಗಿದೆ.

ಗುರುಪ್ರಸಾದ್ ತಹಸೀಲ್ದಾರ್‌ ಹನೂರು ತಾಲೂಕು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!