ಬೇಸಿಗೆ ಹಿನ್ನೆಲೆ ವಿಶೇಷ ರೈಲುಗಳ ಸಂಚಾರ; ಬೆಂಗಳೂರಿನಿಂದ ಪ್ರಯಾಣ

KannadaprabhaNewsNetwork |  
Published : Apr 18, 2024, 02:22 AM ISTUpdated : Apr 18, 2024, 07:52 AM IST
ಸಾಂದರ್ಭಿಕ | Kannada Prabha

ಸಾರಾಂಶ

ಬೇಸಿಗೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ನೈಋತ್ಯ ರೈಲ್ವೆಯು ಯಶವಂತಪುರ- ಡಾ.ಎಂ.ಜಿ.ಆರ್‌. ಚೆನ್ನೈ ಸೆಂಟ್ರಲ್‌ ನಡುವೆ ಒಂದು ಟ್ರಿಪ್‌ ಹಾಗೂ ಎಸ್‌ಎಂವಿಟಿ ಬೆಂಗಳೂರು- ಹೌರಾ ನಡುವೆ ಆರು ಟ್ರಿಪ್‌ ವಿಶೇಷ ರೈಲುಗಳ ಸಂಚಾರ ಮಾಡಲಿವೆ.

 ಬೆಂಗಳೂರು:  ಬೇಸಿಗೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ನೈಋತ್ಯ ರೈಲ್ವೆಯು ಯಶವಂತಪುರ- ಡಾ.ಎಂ.ಜಿ.ಆರ್‌. ಚೆನ್ನೈ ಸೆಂಟ್ರಲ್‌ ನಡುವೆ ಒಂದು ಟ್ರಿಪ್‌ ಹಾಗೂ ಎಸ್‌ಎಂವಿಟಿ ಬೆಂಗಳೂರು- ಹೌರಾ ನಡುವೆ ಆರು ಟ್ರಿಪ್‌ ವಿಶೇಷ ರೈಲುಗಳ ಸಂಚಾರ ಮಾಡಲಿವೆ.

ಏ.18ರಂದು ಯಶವಂತಪುರ ನಿಲ್ದಾಣದಿಂದ ರಾತ್ರಿ 10.45ಕ್ಕೆ ಹೊರಡುವ ರೈಲು (06533) ಮರುದಿನ ಬೆಳಗ್ಗೆ 4.55 ರ ಸುಮಾರಿಗೆ ಚೆನ್ನೈ ತಲುಪಲಿದೆ. ಏ.19ರಂದು ಅಲ್ಲಿಂದ ವಾಪಸ್‌ ರೈಲು (06534) ಬೆಳಗ್ಗೆ 6.45ಕ್ಕೆ ಹೊರಟು ಯಶವಂತಪುರವನ್ನು ಮಧ್ಯಾಹ್ನ 12.30ಕ್ಕೆ ತಲುಪಲಿದೆ.

ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟ ಜಂಕ್ಷನ್‌, ಜೋಲಾರಪೇಟೆ ಜಂಕ್ಷನ್‌, ಅರಕ್ಕೋಣಮ್‌, ಪೆರಂಬೂರ ಜಂಕ್ಷನ್‌ ನಲ್ಲಿ ನಿಲುಗಡೆ ಆಗಲಿದೆ. 21 ಕೋಚ್‌ ಹೊಂದಿರು ರೈಲು ಇದಾಗಿದೆ.

ಎಸ್‌ಎಂವಿಟಿ ಬೆಂಗಳೂರು-ಹೌರಾ ವಾರಕ್ಕೊಮ್ಮೆ ಸಂಚರಿಸುವ ಸ್ಪೆಷಲ್‌ ಎಕ್ಸ್‌ಪ್ರೆಸ್‌ ರೈಲು ಏ. 19,26, ಮೇ 3,10,17 ಹಾಗೂ 24ರಂದು ಸಂಚರಿಸಲಿದೆ.

ಎಸ್‌ಎಂವಿಟಿ ಬೆಂಗಳೂರು ಹಾಗೂ ಕಲಬುರ್ಗಿ ನಡುವೆ ಬೇಸಿಗೆ ವಿಶೇಷ ರೈಲು (06589/ 06590) ಏಳು ಟ್ರಿಪ್‌ಗಳಲ್ಲಿ ಸಂಚರಿಸಲಿದೆ. ಏ. 21ರಿಂದ ಮೇ 12ರವರೆಗೆ ಪ್ರತಿ ಭಾನುವಾರ ಹಾಗೂ ಮಂಗಳವಾರ ಈ ರೈಲು ಸಂಚರಿಸಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ