ಜಾನಪದ ಕಲೆ ಭಾರತೀಯ ಸಂಸ್ಕೃತಿಯ ಕಿರೀಟ

KannadaprabhaNewsNetwork |  
Published : Sep 16, 2026, 02:15 AM IST
ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ರೋಣ ತಾಲೂಕು ಕೊತಬಾಳ ಗ್ರಾಮದ ಜೀವನ ಜ್ಯೋತಿ ಕಲಾತಂಡದ ಜಾನಪದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಪತ್ರೇಶ್ ಹಿರೇಮಠ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಗ್ರಾಮೀಣ ಜನಪದ ಕಲೆಗಳ ಉಳಿವು ಇಂದಿನ ಯುವಕರಿಂದ ಸಾಧ್ಯವಿದ್ದು, ಇಂತಹ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಪರಂಪರೆ ರಕ್ಷಿಸಲು ಕೋರಿದರು.

ಹಗರಿಬೊಮ್ಮನಹಳ್ಳಿ: ಜಾನಪದ ಕಲೆಯು ಭಾರತೀಯ ಸಂಸ್ಕೃತಿಯ ಕಿರೀಟವಾಗಿದ್ದು, ಬಾಯಿಂದ ಬಾಯಿಗೆ ಹರಿದು ಬಂದ ಶತಮಾನಗಳ ಅನುಭವದ ಕಾವ್ಯವಾಗಿದೆ ಎಂದು ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ ಅಭಿಪ್ರಾಯಪಟ್ಟರು.

ತಾಲೂಕಿನ ಬಸರಕೋಡು ಗ್ರಾಮದಲ್ಲಿ ಸೋಮವಾರ ಹಿಂದೂ ಮಹಾಗಣಪತಿ ಸಮಿತಿ ಆಯೋಜಿಸಿದ್ದ ರೋಣ ತಾಲೂಕು ಕೊತಬಾಳ ಗ್ರಾಮದ ಜೀವನ ಜ್ಯೋತಿ ಕಲಾತಂಡದ ಜಾನಪದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಜನಪದ ಕಲೆಗಳ ಉಳಿವು ಇಂದಿನ ಯುವಕರಿಂದ ಸಾಧ್ಯವಿದ್ದು, ಇಂತಹ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಪರಂಪರೆ ರಕ್ಷಿಸಲು ಕೋರಿದರು.

ಗ್ರಾಪಂ ಮಾಜಿ ಸದಸ್ಯ ಎಚ್.ಬಿ.ಮೈಲಪ್ಪ, ಮುಖಂಡ ಎಸ್. ನಾಗಭೂಷಣ ಮಾತನಾಡಿದರು. ಸಭೆಯ ಅಧ್ಯಕ್ಷತೆ ಮಾಜಿ ಗ್ರಾಪಂ ಅಧ್ಯಕ್ಷ ಬಣಕಾರ ಕರಿಬಸವರಾಜ ವಹಿಸಿದ್ದರು. ಮಾಜಿ ಗ್ರಾಪಂ ಸದಸ್ಯ ಬಿ.ಸಿ. ಬಸವರಾಜ, ತಂಬ್ರಹಳ್ಳಿ ಠಾಣೆ ಎ.ಎಸ್.ಐ ರೇವಪ್ಪ, ಮುಖಂಡ ಎಂ.ಎ. ಗವಿಸಿದ್ದಯ್ಯ, ಬಿ.ಎಚ್.ಮಯೂರ, ಕೆ.ಎಂ. ಮಹದೇವಯ್ಯ, ತೋಟಯ್ಯ, ಮಹೇಶ್ವರಯ್ಯ ಹಾಗೂ ಹಿಂದೂ ಮಹಾಗಣಪತಿ ಸಮಿತಿಯ ಮೃತ್ಯುಂಜಯ, ಹಾಲಸ್ವಾಮಿ ಸೇರಿ ಅನೇಕ ಯುವಕರು ಭಾಗವಹಿಸಿದ್ದರು.

ಎಚ್.ಎಂ. ನಾಗಭೂಷಣ, ಫಕ್ಕೀರಸ್ವಾಮಿ ಹಾಗೂ ಎಂ.ತಿಮ್ಮಪ್ಪ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾ ಪಂಚಾಯತ್ ಮಹಿಳಾ ಕಬಡ್ಡಿ ತಂಡಕ್ಕೆ ದ್ವಿತೀಯ ಸ್ಥಾನ
ಸಂಭ್ರಮದ ವೀರಭದ್ರೇಶ್ವರ ಜಯಂತಿ ಆಚರಣೆ